ಸಾಗರ : ಸೆಪ್ಟೆಂಬರ್ 10 ರಂದು ಪ್ರತಿಷ್ಠಿತ ಅಡಿಕೆ ಬೆಳೆಗಾರರ ಸಂಸ್ಥೆಯಾದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ (ಆಪ್ಸ್ಕೋಸ್) ದ ಐದು ವರ್ಷದ ಅವಧಿಗೆ ನಡೆಯುವ ಚುನಾವಣೆಯಲ್ಲಿ ಸದಸ್ಯ ಬೆಳೆಗಾರರು ನಮ್ಮ ತಂಡದ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಸಂಸ್ಥೆ ಹಾಲಿ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಖಂಡಿಕ ಮನವಿ ಮಾಡಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪ್ಸ್ಕೋಸ್ ಸಂಸ್ಥೆಯು ಸಾಗರ, ಸೊರಬ ಮತ್ತು ಹೊಸನಗರ ತಾಲ್ಲೂಕು ವ್ಯಾಪ್ತಿಯನ್ನೊಳಗೊಂಡಿದ್ದು, ಈಗಾಗಲೇ 5 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 11 ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದರು.
ಹೊಸನಗರದಿಂದ ಕಲ್ಯಾಣಪ್ಪ ಗೌಡ್ರು, ನಿಟ್ಟೂರು ಎ.ಓ.ರಾಮಚಂದ್ರ, ಓಂಕೇಶ್ ಹರತಾಳು, ಸತ್ಯನಾರಾಯಣ ಕೆಳದಿ ಹಾಗೂ ಚೌಡಪ್ಪ ಕಲ್ಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಮ್ಮ ತಂಡದಲ್ಲಿ ಹಾಲಿ ನಿರ್ದೇಶಕರಾದ ಇಂದೂಧರ ಬಿ.ಎ., ಕೆ.ಎಸ್.ಸುಬ್ಬರಾವ್, ಎಚ್.ಕೆ.ರಾಘವೇಂದ್ರ ಹಾಗೂ ಹೊಸದಾಗಿ ಕೃಷ್ಣಮೂರ್ತಿ ಟಿ.ಆರ್.ದೂಗೂರು, ನಾಗರತ್ನ ಎ.ಎಸ್.ನೀಚಡಿ, ನಂದಕುಮಾರ್ ಗೋಳಿಬೀಡು, ಭಾರತಿ ಎಂ.ಡಿ.ಕರ್ಕಿಕೊಪ್ಪ, ಭಾಸ್ಕರ ಭಟ್ಟ ಕೆ.ಎಸ್. ಖಂಡಿಕಾ, ರಮೇಶ್ ಎಂ.ಬಿ.ಮೇಲಿನಮನೆ, ಸುರೇಶ್ ವೈ.ಎನ್. ಈಳಿ ಸ್ಪರ್ಧಿಗಳಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಜೈನ ಸಮುದಾಯದ ಸುಮಾರು 150 ಸದಸ್ಯರಿದ್ದು, ಸಂಸ್ಥೆಯ ಏಳಿಗೆಯಲ್ಲಿ ಅವರ ಪಾಲು ದೊಡ್ಡದಿದೆ. ಹಾಗಾಗಿ ಆ ಸಮುದಾಯದಿಂದ ನಂದಕುಮಾರ್ ಅವರನ್ನು ನಮ್ಮೊಂದಿಗೆ ಕಣಕ್ಕಿಳಿಸಿದ್ದೇವೆ ಎಂದರು.
ಕಳೆದ ಚುನಾವಣೆಯಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ. ಸಾಗರದಲ್ಲಿ ಸೂಪರ್ ಮಾರ್ಕೆಟ್, ಕೃಷಿ ಅಗತ್ಯ ವಸ್ತುಗಳ ಮಾರಾಟ ಕೇಂದ್ರವನ್ನು ಆಪ್ಸ್ಕೋಸ್ ಶಾಖೆಗಳಲ್ಲೂ ಆರಂಭಿಸುವುದು. ಕೇಂದ್ರ ಕಚೇರಿಯಲ್ಲಿ ವ್ಯವಸ್ಥಿತ ಗೋದಾಮುಗಳ ನಿರ್ಮಾಣ, ಹೊಸನಗರ, ನಿಟ್ಟೂರುಗಳಲ್ಲಿ ಅವಶ್ಯಕ ಗೋದಾಮು ನಿರ್ಮಾಣ. ತುಮರಿ ಶಾಖೆಯಲ್ಲಿ ಸ್ವಂತ ಕಟ್ಟಡ, ಸಂಘದ ಷೇರುದಾರರಿಗೆ ಮನೆ ನಿರ್ಮಾಣಕ್ಕೆ ಸಾಲ ಸೌಲಭ್ಯ, ಸದಸ್ಯರ ಆರೋಗ್ಯಕ್ಕಾಗಿ ಕ್ಷೇಮನಿಧಿ ಸ್ಥಾಪಿಸುವ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಒಟ್ಟಾರೆ ಅಡಿಕೆ ಬೆಳೆಗಾರಸ್ನೇಹಿಯಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಲು ನಾವು ಕಂಕಣಬದ್ಧರಾಗಿದ್ದೇವೆ ಎಂದರು.
ಷೇರುದಾರರಿಗೆ ವಿಳಂಬವಿಲ್ಲದೇ ಸಾಲ ಸೌಲಭ್ಯ ಒದಗಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ, ಜನಪರ ನೀಡಿ ಅಳವಡಿಸಿಕೊಳ್ಳಲಾಗಿದೆ. ನವೀಕೃತ ಮುಖ್ಯ ಕಚೇರಿ ಆರಂಭಿಸಲಾಗಿದೆ. ಆಪ್ಸ್ಕೋಸ್ ಕೃಷಿ ವಿಭಾಗ ಆರಂಭಿಸಲಾಗಿದೆ. ಯಶಸ್ವಿಯಾಗಿ ಸುವರ್ಣ ಮಹೋತ್ಸವ ಆಚರಿಸಿ ಹಿರಿಯರನ್ನು ಗೌರವಿಸಲಾಗಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗಿದೆ. ಮರಣ ಹೊಂದಿದ ಸದಸ್ಯರ ಕುಟುಂಬ ವರ್ಗದವರಿಗೆ ಶೀಘ್ರ 5 ಸಾವಿರ ರೂ. ನೆರವು ನೀಡಲಾಗಿದೆ. ಇನ್ನೂ ಹಲವಾರು ಸಾಧನೆಗಳನ್ನು ಮಾಡಿ ಸಂಸ್ಥೆಯ ಘನತೆ ಗೌರವವನ್ನು ಹೆಚ್ಚಿಸಿದ್ದೇವೆ ಎಂದರು.
ಮಳೆಗಾಲದ ಸಮಯದಲ್ಲಿ ಬೆಳೆಗಾರರ ಅಡಿಕೆ ಇರುವುದು ಕಡಿಮೆ. ಶೇ. 90 ರಷ್ಟು ಅಡಿಕೆ ಬೇಸಿಗೆಯಲ್ಲಿ ಮಾರಾಟವಾಗುತ್ತದೆ. ಆದರೂ ಬಂದ ಹೆಚ್ಚುವರಿ ಅಡಿಕೆಯನ್ನು ಸಂಸ್ಥೆಗೆ ಸೇರಿಸಿ ಲಾಭದ ಅಂಶವನ್ನು ಡಿವಿಡೆಂಡ್ ಮೂಲಕ ಸದಸ್ಯರಿಗೆ ಕೊಡುತ್ತೇವೆ. ಸುವರ್ಣ ಮಹೋತ್ಸವ ನೆನಪಿನ 2500/- ರೂ. ಪ್ರೋತ್ಸಾಹಧನದ ಕೂಪನ್ನ್ನು ಅಡಿಕೆ ಹಾಕಿದ ಎಲ್ಲ ಸದಸ್ಯರಿಗೆ ನೀಡಿದ್ದೇವೆ. ತಾಂತ್ರಿಕ ಕಾರಣದಿಂದ ಕಚೇರಿ ನವೀಕೃತ ಕಟ್ಟಡವನ್ನು ಪೀಸ್ ವರ್ಕ್ ಮೂಲಕ ನಿರ್ವಹಿಸಲಾಗಿದೆ ಎಂದವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
1971 ರ ದಶಕದಲ್ಲಿ ಅಡಿಕೆ ಬೆಲೆ ಕುಸಿದಾಗ ಬೆಳೆಗಾರರು ಕಂಗಾಲಾಗಿದ್ದ ಪರಿಸ್ಥಿತಿಯಲ್ಲಿ ಹಿರಿಯರು ಈ ಸಂಸ್ಥೆಯನ್ನು ಆರಂಭಿಸಿದರು. 1990 ರ ದಶಕದಲ್ಲಿ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಅನುಭವಿ ಆಸಕ್ತ ಯುವಕರು ಒಗ್ಗೂಡಿ ಈ ಸಂಸ್ಥೆಯ ಪುನರ್ ನಿರ್ಮಾಣದಲ್ಲಿ ತೊಡಗಿಕೊಂಡರು. ಈ ತಂಡವು ಹಣ ಮತ್ತು ಹೆಸರು ಎರಡರಲ್ಲೂ ನಷ್ಟಕ್ಕೆ ಬಿದ್ದಿದ್ದ ಆಪ್ಸ್ಕೋಸ್ ಸಂಸ್ಥೆಯನ್ನು ಇಂದು ಸುಮಾರು 5 ಕೋಟಿ ಲಾಭದಲ್ಲಿ ಮುನ್ನಡೆಸುತ್ತಿದ್ದು, ಸಂಸ್ಥೆಯಲ್ಲಿ ಭದ್ರತೆ ತರುವುದರ ಜತೆ ಸದಸ್ಯರಲ್ಲಿ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಅಭ್ಯರ್ಥಿಗಳೂ, ನಿರ್ದೇಶಕರೂ ಆದ ಕೆ.ಎಸ್.ಸುಬ್ಬರಾವ್, ಕಲ್ಯಾಣಪ್ಪ ಗೌಡ, ಇಂದೂಧರ ಬಿ.ಎ., ಎಚ್.ಕೆ.ರಾಘವೇಂದ್ರ, ಸತ್ಯನಾರಾಯಣ ಕೆಳದಿ, ಈಳಿ ಸುರೇಶ್, ಟಿ.ಆರ್.ಕೃಷ್ಣಮೂರ್ತಿ, ಕೆ.ಆರ್,ವೆಂಕಟರಾವ್, ಬಿ.ಗುರುಪಾದ ಹಾಜರಿದ್ದರು.
ಹಾಲಿ ಅಧ್ಯಕ್ಷರ ತಂಡದ ಭವಿಷ್ಯದ ಗ್ಯಾರಂಟಿ ಯೋಜನೆಗಳು :
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…