ಜಕ್ಕನಹಳ್ಳಿ ಬಳಿ ಭೀಕರ ಅಪಘಾತ ; 5 ಕ್ಕೂ ಹೆಚ್ಚು ಮಂದಿ ಕಾಲು ಕಟ್ !
ಶಿಕಾರಿಪುರ : ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಬಳಿ ಅಪಘಾತ ಒಂದು ಸಂಭವಿಸಿದ್ದು ಐದಕ್ಕೂ ಹೆಚ್ಚು ಜನರಿಗೆ ಕಾಲು ಮುರಿದಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಜಕ್ಕನಹಳ್ಳಿ ಗ್ರಾಮದ ಬಳಿ ಅಪೇ ಆಟೋ ಲಾಗೇಜು ಗಾಡಿಯಲ್ಲಿ ಕಾಲು ಮುಂದೆ ಮಾಡಿಕೊಂಡು ಒಂದಿಷ್ಟು ಜನರು ಪ್ರಯಾಣಿಸುತ್ತಿದ್ದು ಹಿಂಬಂದಿಯಿಂದ ಬಂದ ಬೊಲೆರೋ ಗಾಡಿ ಗುದಿದ್ದ ಪರಿಣಾಮ 5-6 ಜನರಿಗೆ ತೀವ್ರ ಗಾಯವಾಗಿದ್ದು ಕಾಲುಗಳು ಮುರಿದು ಹೋಗಿದೆ ಎನ್ನಲಾಗಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://m.facebook.com/story.php?story_fbid=pfbid036hjzt5vjki7s8tEg3QJPBCZ162fYzmtS15TySi6u5xAsAtcVqBHExDMrvfhn4DBsl&id=100063707904382&mibextid=NnVzG8
ಈ ಅಪಘಾತದಲ್ಲಿ 12ಕ್ಕೂ ಹೆಚ್ಚು ಜನರಿಗೆ ಗಾಯಗಳು ಆಗಿದ್ದು ಗಾಯಳುಗಳನ್ನು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಗಾಯಳುಗಳ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.