ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಬರುತ್ತಿದ್ದ ಎಎಸ್ಐ ರೈಲಿನಿಂದ ಬಿದ್ದು ಸಾವು !

0 69

ಶಿವಮೊಗ್ಗ : ಚಿಕಿತ್ಸೆಗೆಂದು ರೈಲಿನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬರು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿ ನಿವಾಸಿ ಎಂ.ಪಿ. ಪರಮೇಶ್ವರಯ್ಯ (53) ಮೃತಪಟ್ಟವರಾಗಿದ್ದಾರೆ.

ಇವರು ಡಯಾಲಿಸಿಸ್ ಗಾಗಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬರುವ ವೇಳೆ ಶೌಚಾಲಯಕ್ಕೆ ತೆರಳಿದ್ದು, ವಾಪಸ್ ಬರುವಾಗ ಬಾಗಿಲು ಜೋರಾಗಿ ಬಡಿದ ಪರಿಣಾಮ ರೈಲಿನಿಂದ ಬಿದ್ದು ಸಾವಿಗೀಡಾಗಿದ್ದಾರೆ.

Leave A Reply

Your email address will not be published.

error: Content is protected !!