ಶೆಟ್ಟರ್ಗೆ ಹುಚ್ಚು, ಭ್ರಮೆ ಹಿಡಿದಿದೆ ಅಲ್ಲೇ ಸಾಯಲಿ ನಾನೇನು ಮಾಡಲಿ ; ಕೆಎಸ್ಈ
ಶಿವಮೊಗ್ಗ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಹುಚ್ಚು, ಭ್ರಮೆ ಹಿಡಿದಿದೆ, ಅವರನ್ನು ನಾವು ಟಾರ್ಗೆಟ್ ಮಾಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ಗೆ ಹುಚ್ಚು, ಭ್ರಮೆ ಹಿಡಿದಿದೆ. ಬಿಜೆಪಿ ನಾಯಕರು ಅವರನ್ನು ಟಾರ್ಗೆಟ್ ಮಾಡಿಲ್ಲ. ಪ್ರೀತಿಯಿಂದ ಪಕ್ಷಕ್ಕೆ ವಾಪಸ್ ಕರೆದಿದ್ದೇನೆ. ಆದರೆ ಅವರು ಬರಲಿಲ್ಲ. ಅಲ್ಲೇ ಸಾಯಲಿ ನಾನೇನು ಮಾಡಲಿ ಎಂದು ಕಿಡಿಕಾರಿದ್ದಾರೆ.
ಜಗದೀಶ್ ಶೆಟ್ಟರ್ ಗೆ ಸೊಕ್ಕು ಬಂದಿದೆ. ಕ್ಷೇತ್ರದ ಜನರೇ ಜಗದೀಶ್ ಶೆಟ್ಟರ್ ಗೆ ಬುದ್ಧಿ ಕಲಿಸುತ್ತಾರೆ. ತಾಯಿಗೆ ದ್ರೋಹ ಮಾಡಿದವರನ್ನು ಏನಂತ ಕರೆಯಬೇಕು. ತಾಯಿಗೆ ಒದ್ದು ಹೋಗಿರುವ ನಿಮಗೆ ಪ್ರೀತಿಯಿಂದ ವಾಪಸ್ ಕರೆದ್ರೆ ಬರಲಿಲ್ಲ ಎಂದು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.