ಅರಸಾಳು ನಿಲ್ದಾಣ ಮೇಲ್ದರ್ಜೆಗೇರಿದರೂ ರಾತ್ರಿ ನಿಲ್ಲದ ರೈಲು ! ಕೇಳುವವರಿಲ್ಲ ಪ್ರಯಾಣಿಕರ ಗೋಳು

ರಿಪ್ಪನ್‌ಪೇಟೆ: ಇಲ್ಲಿನ ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು – ತಾಳಗುಪ್ಪ ಮಾರ್ಗದ ರಾತ್ರಿ ವೇಳೆಯ ರೈಲು ನಿಲುಗಡೆಯಾಗದೇ ಪ್ರಯಾಣಿಕರ ಗೋಳು ಕೇಳೋರಿಲ್ಲದಂತಾಗಿ ಹಲವು ಪ್ರಯಾಣಿಕರು ಆನಂದಪುರ ಹೋಗಿ ಊರು ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು  ರೈಲ್ವೆ ಪ್ರಯಾಣಿಕ ಮಹಿಳೆಯರು ತಮ್ಮ ಆಕ್ರೋಶವನ್ನು ಈ ರೀತಿ ವ್ಯಕ್ತಪಡಿಸಿದರು.

ಮಲೆನಾಡಿನ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಆರಂಭಗೊಂಡ ಅರಸಾಳು ರೈಲ್ವೆ ನಿಲ್ದಾಣದಿಂದಾಗಿ ಕುಂದಾಪುರ – ಉಡುಪಿ – ಮಂಗಳೂರು – ಭಟ್ಕಳ – ಬೈಂದೂರು – ಹೊಸನಗರ – ಕೊಲ್ಲೂರು ಸಿಗಂದೂರು – ರಾಮಚಂದ್ರಪುರ ಮಠ – ಹೊಂಬುಜ ಜೈನಮಠ ಹೀಗೆ ಹಲವು ಸಂಪರ್ಕದ ಹೃದಯ ಭಾಗವಾಗಿರುವ ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಿಂದಾಗಿ ಸಾಕಷ್ಟು ಪ್ರಯಾಣಿಕರಿಗೆ ರಾಜಧಾನಿ ಸೇರಿದಂತೆ ದೆಹಲಿ – ಮೈಸೂರು ಹೀಗೆ ಹಲವು ಪ್ರಮುಖ ಕೇಂದ್ರಗಳಿಗೆ ಕಡಿಮೆ ಖರ್ಚಿನಲ್ಲಿ ಓಡಾಡಲು ಉತ್ತಮವಾದ ಸಂಪರ್ಕ ಸಾರಿಗೆ ಸೌಲಭ್ಯವಾಗಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರರ ವಿಶೇಷ ಆಸಕ್ತಿಯಿಂದಾಗಿ ಅರಸಾಳು ರೈಲ್ವೆ ನಿಲ್ದಾಣ (ಮಾಲ್ಗುಡಿ) ನಿಲ್ದಾಣವಾಗಿ ಅಭಿವೃದ್ಧಿ ಪಡಿಸುವುದರೊಂದಿಗೆ ಬೆಂಗಳೂರು ಮೈಸೂರು ಇಂಟರ್‌ಸಿಟಿ ರೈಲು ಪ್ಯಾಸೆಂಜರ್ ರೈಲು ಹೀಗೆ ಶಿವಮೊಗ್ಗದಿಂದ ಹೋಗುವ ಹಲವು ರೈಲುಗಳನ್ನು  ಕುಂಸಿ ಅರಸಾಳು ಆನಂದಪುರ – ಸಾಗರ – ತಾಳಗುಪ್ಪಕ್ಕೆ ಮುಂದುವರಿಸಿ ಹೆಚ್ಚು ಪ್ರಯಾಣಿಕರಿಗೆ ಕಡಿಮೆ ಖರ್ಚಿನಿಂದ ಸಮಯದ ಉಳಿತಾಯದೊಂದಿಗೆ ರೈಲ್ವೆ ಸೌಲಭ್ಯವನ್ನು ಕಲ್ಪಿಸಲಾಗಿದ್ದರೂ ಕೂಡಾ ಅರಸಾಳು ರೈಲ್ವೆ ನಿಲ್ದಾಣದಲ್ಲಿ ರಾಜಧಾನಿ ಬೆಂಗಳೂರಿನಿಂದ ಮಧ್ಯಾಹ್ನ ಹೊರಡುವ ರೈಲು ರಾತ್ರಿ ಅರಸಾಳಿನಲ್ಲಿ ನಿಲುಗಡೆಯಾಗದೆ ಪ್ರಯಾಣಿಕರು ಆನಂದಪುರ ಹೋಗಿ ಬರುವ ಸ್ಥಿತಿ ನಿರ್ಮಾಣವಾಗಿದೆ.

ಅದೇ ಅರಸಾಳಿನಲ್ಲಿ ರೈಲು ನಿಲ್ಲಿಸಿದರೆ ಮಾಡಿದರೆ ಸಾಕಷ್ಟು ಪ್ರಯಾಣಿಕರಿಗೆ ರಿಪ್ಪನ್‌ಪೇಟೆ ಸುತ್ತಮುತ್ತ ಮತ್ತು ಹೊಸನಗರ, ಕೋಡೂರು, ಮಾಸ್ತಿಕಟ್ಟೆ, ಹುಂಚ, ಕೋಣಂದೂರು ಕಡೆ ಹೋಗಲು ಆನುಕೂಲವಾಗುವುದು ಎಂದು ಹೇಳಿ ಸಂಬಂಧಿಸಿದ ಸಂಸದ ಬಿ.ವೈ. ರಾಘವೇಂದ್ರರವರು ಈ ಕೂಡಲೇ ಸಂಬಂಧಿಸಿದ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಯಾಣಿಕರಿಗಾಗುತ್ತಿರುವ ಆನಾನುಕೂಲಕ್ಕೆ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.

ಅಲ್ಲದೆ ಈ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ಅರಸಾಳು ಬಳಿ ಪ್ಲೈ ಓವರ್ ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರದಿಂದ ಅನುಧಾನ ಬಿಡುಗಡೆ ಮಾಡಿಸುವುದರೊಂದಿಗೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ಇದರೊಂದಿಗೆ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಹೋಗಿ ಬರುವ ಎಲ್ಲಾ ರೈಲುಗಳನ್ನು ನಿಲುಗಡೆ ಮಾಡುವಂತೆ ಲೀಲಾಶಂಕರ್, ಜಯಮ್ಮ, ಇಂದ್ರಮ್ಮ, ವಾಣಿ, ಸುದಂರಮ್ಮ, ಶಶಿರೇಖಾ, ಲೇಖನ, ವೇದಾ, ಗೀತಾ, ವಸುಂದರ, ಶೈಲಾ, ಶೀಲಾ, ಮಹಿಳಾ ಪ್ರಯಾಣಿಕರು ಆಗ್ರಹಿಸಿದ್ದಾರೆ.

Malnad Times

Recent Posts

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

13 hours ago

ಹೆಮ್ಮಕ್ಕಿ ಶ್ರೀ ಭದ್ರಕಾಳಿ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಜೀರ್ಣಾಷ್ಟಬಂಧ ಮತ್ತು ಬ್ರಹ್ಮ ಕಲಶಾಭಿಷೇಕ

ಕಳಸ : ತಾಲ್ಲೂಕಿನ ಹೆಮ್ಮಕ್ಕಿಯ ಶ್ರೀ ಭದ್ರಕಾಳಿ ಅಮ್ಮನವರಿಗೆ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಮೇ 01 ರಿಂದ ಮೇ…

15 hours ago

ರಜತ ಉತ್ಸವದ ಗಣಪತಿ ಮೂರ್ತಿಯನ್ನು ದೇವಸ್ಥಾನಕ್ಕೆ ಸಮರ್ಪಣೆ

ರಿಪ್ಪನ್‌ಪೇಟೆ: ನಾಳೆ ನಡೆಯುವ ಶ್ರೀಸಿದ್ದಿವಿನಾಯಕ ಸ್ವಾಮಿ ಶ್ರೀಮನ್ಮಹಾರಥೋತ್ಸವಕ್ಕೆ ಇಲ್ಲಿನ ಗಣೇಶಪ್ರಸಾದ್ ಹೋಟೆಲ್‌ನ ದಿ.ರೇವತಿ ಹೆಬ್ಬಾರ್ ಮತ್ತು ಸತ್ಯನಾರಾಯಣ ಹೆಬ್ಬಾರ್ ಸ್ಮರಣಾರ್ಥ…

15 hours ago

ರಾಜಕೀಯದ ಪರಿಜ್ಞಾನವೇ ಇಲ್ಲದವರು ಸಂಸತ್‌ಗೆ ಹೋದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹೇಗೆ ಸಾಧ್ಯ ; ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಭೌಗೋಳಿಕ ಹಿನ್ನಲೆಯ ಅರಿವೇ ಇಲ್ಲದೆ, ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಸರೇ ಇಲ್ಲದ…

16 hours ago

ಒಂದೇ ಪರವಾನಗಿಯಲ್ಲಿ ಎರಡು ಕಡೆ ನಾಟಾ ಸಾಗಾಟ ; ಅಕ್ರಮದ ಶಂಕೆ !?

ಹೊಸನಗರ : ತಾಲೂಕಿನ ಪುಣಜೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ನೂತನ ಮನೆಗೆ ಅಕ್ರಮ ನಾಟಾ ಸರಬರಾಜು ಆಗಿರುವುದಾಗಿ ಸ್ಥಳೀಯ…

17 hours ago

ಗೀತಕ್ಕ ಗೆಲುವು ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ, ಪ್ರಚಾರ ಸಭೆಯಲ್ಲಿ ನಟ ದುನಿಯಾ ವಿಜಯ್ ಹೇಳಿಕೆ

ಸಾಗರ: ಕ್ಷೇತ್ರದ ಅಭಿವೃದ್ಧಿಗೆ ಆಸರೆಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಕೊಡುಗೆ ಮರೆಯಕೂಡದು. ಇಲ್ಲಿ ಗೀತಕ್ಕ ಅವರ ಗೆಲುವು…

20 hours ago