ರಿಪ್ಪನ್ಪೇಟೆ: ಸಮೀಪದ ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾಯನಿರ್ವಾಹಕ ಆಧಿಕಾರಿಯಿಂದ ಲಕ್ಷಾಂತರ ರೂಪಾಯಿಗಳ ಆವ್ಯವಹಾರವನ್ನು ನಡೆಸಿರುವ ಶಂಕೆಯಿಂದಾಗಿ ಕಳೆದ ಎರಡು ಮೂರು ತಿಂಗಳಿಂದ ಕಛೇರಿಗೆ ಹಾಜರಾಗದೇ ನಾಪತ್ತೆಯಾಗಿದ್ದು ಆಡಳಿತ ಮಂಡಳಿಯವರು ಸಾಗರ ಸಹಕಾರ ಸಂಘಗಳ ಸಹಾಯಕ ನಿಂಬಂಧಕರಿಗೆ ಮತ್ತು ಡಿ.ಆರ್.ಇವರಿಗೆ ದೂರು ನೀಡಿದ ಮೇರೆಗೆ ಶಿವಮೊಗ್ಗ ಜಿಲ್ಲಾ ಡಿ.ಆರ್. ಆದೇಶದಂತೆ ಇಂದು ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಲಾಕರ್ಗಳ ಬೀಗ ಒಡೆದು ಪರಿಶೀಲನೆ ನಡೆಸಲಾದ ಘಟನೆ ಇಂದು ನಡೆದಿದೆ.
ಕಳೆದ ಸೆಪ್ಟಂಬರ್–ಅಕ್ಟೋಬರ್ ತಿಂಗಳಿಂದ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಕೃಷ್ಣನಾಯ್ಕ್ ಎಂಬುವರು ಸಹಕಾರ ಸಂಘಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದು ಇದರಿಂದಾಗಿ ಸಂಘದ ಷೇರುದಾರ ಸದಸ್ಯರುಗಳಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿ ನಮ್ಮ ಸಂಘದಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಗುಸು ಗುಸು ಸುದ್ದಿ ಹರಡುತ್ತಿದ್ದಂತೆ ಸಂಘದ ಅಡಳಿತ ಮಂಡಳಿಯವರು ಸಂಘದ ಕಾರ್ಯದರ್ಶಿಯವರ ಸಂಪರ್ಕಕ್ಕೆ ಸಾಕಷ್ಟು ಪ್ರಯತ್ನ ನಡೆಸಲಾಗಿ ವಿಫಲವಾದರೂ ನಂತರ ಷೇರುದಾರರಿಗೆ ಉತ್ತರಿಸಲಾಗದೇ ಕೊನೆಗೆ ಬೇರೆ ದಾರಿ ಕಾಣದೇ ಸಂಬಂಧಿಸಿದ ಸಾಗರ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರಿಗೆ ಮತ್ತು ಜಿಲ್ಲಾ ಸಹಕಾರ ಸಂಘಗಳ ಡಿ.ಆರ್.ಇವರಿಗೆ ಲಿಖಿತ ದೂರು ಅರ್ಜಿಯನ್ನು ಸಲ್ಲಿಸಿದರ ಮೇರೆಗೆ ಡಿ.ಆರ್.ರವರು ಪೊಲೀಸ್ ಇಲಾಖೆಯವರ ಸಹಾಯದೊಂದಿಗೆ ಸಹಕಾರ ಸಂಘದ ಲಾಕರ್ನಲ್ಲಿನ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುವಂತೆ ಆದೇಶಿಸಿದ ಆದೇಶದಂತೆ ಇಂದು ಸಹಕಾರ ಸಂಘದ ಕ್ಷೇತ್ರಾಧಿಕಾರಿ ವೆಂಕಟಾಚಲಪತಿಯವರ ನೇತೃತ್ವದಲ್ಲಿ ಇಂದು ಆಡಳಿತ ಮಮಡಳಿಯವರ ಸಮ್ಮುಖದಲ್ಲಿ ಲಾಕರ್ ಒಡೆದು ಪರಿಶೀಲನೆ ನಡೆಸಿದರು.
ಅವ್ಯವಹಾರದ ಮೊತ್ತದ ಬಗ್ಗೆ ಲೆಕ್ಕಪರಿಶೀಲನಾ ವರದಿಯನ್ನಾದರಿಸಿ ಬಹಿರಂಗ ಪಡಿಸಲಾಗುವುದೆಂದು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯದುವೀರ, ಉಪಾಧ್ಯಕ್ಷ ಕಟ್ಟೆ ಹೆಚ್.ಆರ್.ರಾಘವೇಂದ್ರ, ಸೇರಿದಂತೆ ಸಂಘದ ಸರ್ವಸದಸ್ಯರು ಹಾಜರಿದ್ದರು.
ಆಡಳಿತ ಮಂಡಳಿಯವರ ಬೇಜವಾಬ್ದಾರಿಯೇ ಇದಕ್ಕೆ ಕಾರಣ:
ಕಳೆದ ಮೂರು ನಾಲ್ಕು ವರ್ಷಗಳಿಂದ ಇಲ್ಲಿನ ಸಹಕಾರ ಸಂಘದ ಲೆಕ್ಕ ತಪಾಸಣೆ ಮಾಡಿಸದೇ ನಿರ್ಲಕ್ಷ್ಯ ವಹಿಸಿರುವುದು ಮತ್ತು ಸುಮಾರು 10 ಲಕ್ಷ ಕ್ಕೂ ಅಧಿಕ ಮೊತ್ತದ ಹಣ ಅವ್ಯವಹಾರವಾಗಲು ಆಡಳಿತ ಮಂಡಳಿಯವರ ನಿರ್ಲಕ್ಷ್ಯವೇ ಕಾರಣವೆಂದು ಸಹಕಾರಿ ದುರೀಣ ಸತೀಶ್ ಹುಂಚ ಆರೋಪಿಸಿದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…