ಆಯನೂರಿಗೆ ಮೋದಿ ಭೇಟಿ ಹಿನ್ನೆಲೆ ; ತಾತ್ಕಾಲಿಕ ಮಾರ್ಗ ಬದಲಾವಣೆ
ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಆಯನೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ಹಿತ ದೃಷ್ಟಿಯಿಂದ ದಿನಾಂಕ: 07-05-2023 ರಂದು ಈ ಕೆಳಕಂಡಂತೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ಸಾಗರದಿಂದ ಶಿವಮೊಗ್ಗ ಕಡೆಗೆ ಬರುವ ಲಘು ವಾಹನಗಳು:
ಆನಂದಪುರ ಎಡೆಹಳ್ಳಿ ಸರ್ಕಲ್ – ಚೊರಡಿ – ಕುಂಸಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಎಡಕ್ಕೆ ತಿರುಗಿ ಹಾರ್ನಳ್ಳಿ – ಬೈರನಕೊಪ್ಪ -ಹಿಟ್ಟೂರು ಕ್ರಾಸ್ ಬಲಕ್ಕೆ ತಿರುಗಿ ಶಿವಮೊಗ್ಗಕ್ಕೆ ಬಂದು ಸೇರುವುದು.
ಸಾಗರದಿಂದ ಶಿವಮೊಗ್ಗದ ಕಡೆಗೆ ಬರುವ ಭಾರಿ ಮತ್ತು ಸರಕು ವಾಹನಗಳು:
ಆನಂಪುರ – ಶಿಕಾರಿಪುರ – ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಲಘು ವಾಹನಗಳು:
ಶಿವಮೊಗ್ಗದಿಂದ ಸೋಮಿನಕೊಪ್ಪ – ಗೆಜ್ಜೇನಹಳ್ಳಿ – ಮುದುವಾಲ – ಹಾರ್ನಳ್ಳಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಬಲಕ್ಕೆ ತಿರುಗಿ ಸಾಗರಕ್ಕೆ ಹೋಗುವುದು.
ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಭಾರಿ ಮತ್ತು ಸರಕು ವಾಹನಗಳು:
ಶಿವಮೊಗ್ಗದಿಂದ ಹೊನ್ನಾಳಿ – ಶಿಕಾರಿಪುರ – ಆನಂದಪುರ ಮೂಲಕ ಸಾಗರಕ್ಕೆ ಹೋಗುವುದು
ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಭಾರಿ ಮತ್ತು ಲಘು ವಾಹನಗಳು:
ಶಿವಮೊಗ್ಗದಿಂದ ಹೊನ್ನಾಳಿ ಮೂಲಕ ಶಿಕಾರಿಪುರಕ್ಕೆ ಹೋಗುವುದು.
ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು:
ಶಿಕಾರಿಪುರ ದಿಂದ ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
ಶಿವಮೊಗ್ಗದಿಂದ ರಿಪ್ಪನ್ಪೇಟೆ ಹಾಗೂ ಹೊಸನಗರ ಕಡೆಗೆ ಹೋಗುವ ಭಾರಿ ಮತ್ತು ಲಘು ವಾಹನಗಳು:
ಶಿವಮೊಗ್ಗದಿಂದ ಮಂಡಗದ್ದೆ – ಕೋಣಂದೂರು – ರಿಪ್ಪನ್ಪೇಟೆ ಮೂಲಕ ಹೊಸನಗರಕ್ಕೆ ಹೋಗುವುದು.
ರಿಪ್ಪನ್ಪೇಟೆ ಹೊಸನಗರದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು:
ಕೋಣಂದೂರು – ಸಿ. ಕೆ. ರಸ್ತೆ – ಮಂಡಗದ್ದೆ – ಮಾಳೂರು ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.