Categories: Shivamogga

ಕಾಂಗ್ರೆಸ್ ಹೌಸ್ ಕಾದಂಬರಿ ಯಾವುದೇ ಪಕ್ಷ ಪ್ರತಿನಿಧಿಸದೆ ನೊಂದ ಲೈಂಗಿಕ ಕಾರ್ಯಕರ್ತೆಯ ಬದುಕನ್ನು ವಿವರಿಸುತ್ತಾ ಹೋಗುತ್ತದೆ

ಶಿವಮೊಗ್ಗ: ಕನ್ನಡ ಕಾದಂಬರಿ ಲೋಕಕ್ಕೆ ಲೇಖಕಿ ವಾಣಿ ಗೌಡ ಅವರ ಕಾಂಗ್ರೆಸ್ ಹೌಸ್ ಕಾದಂಬರಿ ಹೊಸರೀತಿಯ ಸೇರ್ಪಡೆ.ಇದೊಂದು ಪ್ರಾಮಾಣಿಕ ಪ್ರಯತ್ನ ಎಂದು ಸಾಹಿತಿ, ಕವಯಿತ್ರಿ ಸವಿತಾ ನಾಗಭೂಷಣ್ ಹೇಳಿದರು.


ಅವರು ಭಾನುವಾರ ಸಂಜೆ ಸರ್ಕಾರಿನೌಕರರ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಹೌಸ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಹೌಸ್ ಕಾದಂಬರಿ ಯಾವುದೇ ಪಕ್ಷವನ್ನು ಪ್ರತಿನಿಧಿಸದೆ ಒಂದು ನೊಂದ ಲೈಂಗಿಕ ಕಾರ್ಯಕರ್ತೆಯ ಬದುಕನ್ನು ವಿವರಿಸುತ್ತಾ ಹೋಗುತ್ತದೆ. ಈ ಕೃತಿಯನ್ನು ಓದುತ್ತಾ ಹೋದ ಹಾಗೆ ಗೆಜ್ಜೆಪೂಜೆ, ಅಮರಪ್ರೇಮ, ಮಸಣದ ಹೂವು, ನಾಗರಹಾವು ಮುಂತಾದ ಸಿನಿಮಾಗಳನ್ನು ನೆನಪಿಗೆ ತರುತ್ತದೆ. ಒಂದು ಕೃತಿ ಹೀಗೆ ದಟ್ಟವಾಗಿ ಕಾಡುತ್ತದೆ. ಆದರೆ ಈ ಕಾದಂಬರಿ ಸಿನಿಮೀಯವಾಗಿ ಇಲ್ಲ. ಅದು ವಾಸ್ತವದ ನೆಲೆಯಲ್ಲಿದೆ ಎಂದರು.


ಈ ಕಾದಂಬರಿಯು ಒಂದು ಆತ್ಮ ನಿವೇದನೆಯಾಗಿದೆ. ಇದು ಸೋಲು ಕಾಣದ ಕಾದಂಬರಿ. ಲೈಂಗಿಕ ಕಾರ್ಯಕರ್ತೆಯ ನೋವು ಇದರಲ್ಲಿ ಅಡಗಿದೆ. ಗರ್ಭದಲ್ಲೂ ಹೆಣ್ಣು ಮಗು ಸುರಕ್ಷಿತವಾಗಿ ಇಲ್ಲದ ಈ ಹೊತ್ತಿನಲ್ಲಿ  ಒಂದು ಹೆಣ್ಣಿನ ಬಗ್ಗೆ ಗೌರವ ತರುವ ಅದರಲ್ಲೂ ಲೈಂಗಿಕ ಕಾರ್ಯಕರ್ತೆಯನ್ನು ಒಂದು ರೀತಿಯಲ್ಲಿ ದೇವತೆಯಾಗಿ ಚಿತ್ರಿಸುವ ಅವರ ಪರಯತ್ನ ಮೆಚ್ಚಿಕೊಳ್ಳುವಂತದ್ದು ಎಂದರು.


ಇಂತಹ ಕೃತಿಗಳು ಹೆಚ್ಚುಹೆಚ್ಚಾಗಿ ಬರಬೇಕು. ಅದರಲ್ಲ ಮಹಿಳೆಯರು ಕಾದಂಬರಿ ಲೋಕವನ್ನು  ಪ್ರವೇಶಿಸುತ್ತಿರುವುದು ಅತ್ಯಂತ ಸ್ವಾಗತದ ವಿಷಯವಾಗಿದೆ. ಏನೇನೋ ಬರೆಯುವುದಕ್ಕಿಂತ ಸಾಮಾಜಿಕ ಬದಲಾವಣೆ ತರುವ ಹೆಣ್ಣಿನ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವ ಲೇಖನಗಳು ಇಂದು ಬೇಕಾಗಿವೆ. ಈ ಹಿನ್ನೆಲೆಯಲ್ಲಿ ಲೇಖಕಿ ಅವರ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಇಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಬಹಳಷ್ಟು ಲೇಖಕಿಯರ ಉಳಿಸಿಕೊಳ್ಳುವುದಿಲ್ಲ. ಹಾಗಾಗಿ ಅಂತಹ ಸಂದರ್ಭ ಬಂದರೆ ಬರವಣಿಗೆಯನ್ನು ನಿಲ್ಲಿಸುವುದೇ ಒಳಿತು. ಈ ನಿಟ್ಟಿನಲ್ಲಿ ಲೇಖಕಿ ವಾಣಿ ಗೌಡ ಎಚ್ಚರಿಕೆ ವಹಿಸುತ್ತಾರೆ ಎಂದರು. 


ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಎಸ್.ವಿ. ಚಂದ್ರಕಲಾ ಮಾತನಾಡಿ, ಹೆಣ್ಣಿನ ಹೋರಾಟದ ಬದುಕನ್ನು ಅದರಲ್ಲು ನತದೃಷ್ಟರ ಬದುಕನ್ನು, ಅಸಹಾಯಕತೆಯನ್ನು, ಬಾಂಬೆಯಂತಹ ಕಾಮಾಟಿಪುರದ ಸಂಕಷ್ಟದ ಬದುಕನ್ನು ಕಾಂಗ್ರೆಸ್ ಹೌಸ್ ಕಾದಂಬರಿಯಲ್ಲಿ ಲೇಖಕಿ ಬಹಳ ವಾಸ್ತವವಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಬದುಕೇ ಛಿದ್ರವಾಗಿರುವಾಗ ಅದನ್ನು ಮತ್ತೆ ಜೋಡಿಸುವ ಆಶಾವಾದ ಇದರಲ್ಲಿದೆ ಎಂದರು.


ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಓದುವ ಸಂಸ್ಕೃತಿ ಹೆಚ್ಚಾಗಬೇಕು. ಅಭಿರುಚಿಯ ಪುಸ್ತಕಗಳು ಬರಬೇಕು. ಯಾವುದೇ ಸರ್ಕಾರಗಳು ತಮ್ಮ ಇಚ್ಛೆಗೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ಬದಲಾಯಿಸುವುದು ಸರಿಯಲ್ಲ ಮತ್ತು ಆಂಗ್ಲ ಮಾಧ್ಯಮದ ವಿಜೃಂಭಣೆಯಲ್ಲಿ ಕನ್ನಡದ ಸೃಜನಶೀಲತೆ ಕಳೆದುಹೋಗುತ್ತಿರುವುದು ವಿಷಾದನೀಯ ಎಂದರು


ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹೌಸ್ ಲೇಖಕಿ ವಾಣಿಗೌಡ, ಪ್ರಕಾಶಕ ಶರವಣಕುಮಾರ್, ಪ್ರತಿಮಾ ಢಾಕಪ್ಪ ಇದ್ದರು.

Malnad Times

Recent Posts

Arecanut Today Price | ಮೇ 5ರ ಅಡಿಕೆ ರೇಟ್

ತೀರ್ಥಹಳ್ಳಿ: ಮೇ 5 ಭಾನುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

19 hours ago

ಕಾಂಗ್ರೆಸ್ ಮೀಸಲಾತಿ ಜಾರಿಗೊಳಿಸಿದ್ದರಿಂದ ಕೆಳ ವರ್ಗದವರಿಗೂ ಸರ್ಕಾರಿ ಉದ್ಯೋಗ ಲಭಿಸಿದೆ ; ಬೇಳೂರು ಗೋಪಾಲಕೃಷ್ಣ

ಹೊಸನಗರ : ಕಾಂಗ್ರೆಸ್ ಪಕ್ಷದೇಶದ ಪ್ರಗತಿಯಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಮೀಸಲಾತಿ ಜಾರಿಗೊಳಿಸಿದ ಪರಿಣಾಮ ಇಂದು ಕೆಳಜಾತಿಯವರು ಸರ್ಕಾರಿ ಉದ್ಯೋಗ…

20 hours ago

ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರಿಂದ ಭರ್ಜರಿ ರೋಡ್ ಷೋ

ರಿಪ್ಪನ್‌ಪೇಟೆ : ನಾಡಿದ್ದು ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರು ಇಂದು ಭರ್ಜರಿ…

20 hours ago

ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಹಸ್ತಕ್ಷೇಪವಿಲ್ಲ ; ಸುಧೀರ್‌ಕುಮಾರ್ ಮುರೊಳ್ಳಿ ಸ್ಪಷ್ಟನೆ

ಹೊಸನಗರ : ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಹಾಸನದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಅತ್ಯಂತ ಹೇಯವಾದದ್ದು. ಹೆಣ್ಣು ಮಕ್ಕಳ ಮಾನಹಾನಿಯಾಗುವಂತಹ…

22 hours ago

ಕಾಡಾನೆ ದಾಳಿಯಿಂದ ಮೃತಪಟ್ಟ ತಿಮ್ಮಪ್ಪ ನಿವಾಸಕ್ಕೆ ಬಿವೈಆರ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ರಿಪ್ಪನ್‌ಪೇಟೆ : ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಕಾಡಾನೆ ದಾಳಿಗೆ ತುತ್ತಾಗಿದ್ದ ಮೃತಪಟ್ಟ ತಿಮ್ಮಪ್ಪ ನಿವಾಸಕ್ಕೆ…

1 day ago

Shivamogga | ನಗರದಲ್ಲಿ ಗಮನ ಸೆಳೆದ ಮತದಾನ ಜಾಗೃತಿ ‘ಮ್ಯಾರಾಥಾನ್’

ಶಿವಮೊಗ್ಗ : ನಮ್ಮನ್ನು ಯಾರು ಆಳಬೇಕೆಂಬ ತೀರ್ಮಾನ ಮತದಾರರ ಕೈಯಲಿದೆ. ಆದ್ದರಿಂದ ಎಲ್ಲ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ…

1 day ago