ರಿಪ್ಪನ್ಪೇಟೆ: ಯುವ ಜನಾಂಗವನ್ನು ನಾಚಿಸುವಂತೆ ಮೂವರು ಯುವಕರೊಂದಿಗೆ ನಾವುಗಳೇನು ಯಾವುದರಲ್ಲಿಯೂ ಕಮ್ಮಿಯಿಲ್ಲ ಎಂಬಂತೆ 60-70 ವರ್ಷದ ಟಿ.ಆರ್.ಕೃಷ್ಣಪ್ಪ ಮತ್ತು ಹಾಲುಗುಡ್ಡೆಯ ತಮ್ಮಯ್ಯ ಇಬ್ಬರು ಸೈಕಲ್ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.
ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದವರು ಆಯೋಜಿಸಲಾದ “ಕನ್ನಡ ರಾಜ್ಯೋತ್ಸವ’’ ಕಾರ್ಯಕ್ರಮದಲ್ಲಿ ಏರ್ಪಡಿಸಲಾದ ತಾಲ್ಲೂಕ್ ಮಟ್ಟದ ಸೈಕಲ್ ಸ್ಪರ್ಧೆಗೆ ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆ ಲೀಲಾ ಉಮಾಶಂಕರ್ ಕನ್ನಡ ಧ್ವಜವನ್ನು ಹಿಡಿಯುವ ಮೂಲಕ ಚಾಲನೆ ನೀಡಿ ಸ್ಪರ್ಧೆಯಲ್ಲಿ ಬಹುಮಾನ ಮುಖ್ಯವಾಗದೇ ಭಾಗವಹಿಸುವಂತೆ ಪ್ರೋತ್ಸಾಹಿಸುವುದು ಮುಖ್ಯ. ಹಾಗೆಯೇ ವಯಸ್ಸಾಯಿತು ಎಂದು ಹೇಳಿ ಹಿಂದೆ ಉಳಿಯದೇ ಯುವಕರನ್ನು ಮೀರಿಸುವಂತೆ ಇಂದಿನ ಸ್ಪರ್ಧೆಯಲ್ಲಿ ವಯೋವೃದ್ಧರು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಿಟ್ಟಿಸುವಲ್ಲಿ ಹಾಲುಗುಡ್ಡೆ ತಮ್ಮಯ್ಯ ಯಶಸ್ವಿಯಾಗಿದ್ದಾರೆಂದು ಸಾರ್ವಜನಿಕರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಲಾಕೌಸ್ತುಭ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶೈಲಾ ಆರ್.ಪ್ರಭು, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನದೇವರಾಜ್, ಎಂ.ಸುರೇಶ್ಸಿಂಗ್, ಪದ್ಮಾ ಸುರೇಶ್, ಅಶ್ವಿನಿ ರವಿಶಂಕರ್, ಉಮಾಸುರೇಶ್, ಮುರುಳಿ ಕೆರೆಹಳ್ಳಿ, ಹಿರಿಯಣ್ಣ ಭಂಡಾರಿ, ಗೀತಾ, ವೇದಾ, ರೇಖಾರವಿ, ಲಕ್ಷ್ಮಿ ಶ್ರೀನಿವಾಸ್ ಆಚಾರ್, ರಾಮು ಬಳೆಗಾರ್, ಅರುಣ್ ಕಾಳಮುಖಿ ಇನ್ನಿತರರು, ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…