Categories: Shivamogga

‘ನಗು ಹೊತ್ತ ಧೀಮಂತನ ನಗು ಕಸಿಯದಿರಿ….’

ಒಮ್ಮೊಮ್ಮೆ ಹೀಗಾಗಿಬಿಡುತ್ತದೆ.. ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಡುತ್ತದೆ.ಅಸಲಿಗೆ ಉದ್ದೇಶಪೂರ್ವಕವಾಗಿ ಮಾಡಿಲ್ಲವಾದರೂ ಪರಿಣಾಮ ಮಾತ್ರ ವ್ಯತಿರಿಕ್ತವಾಗಿ ಬಿಡುತ್ತದೆ.

ಆಭರಣ ಜ್ಯೂವೆಲರಿ ತನ್ನ ಜಾಹೀರಾತು ಫಲಕದಲ್ಲಿ ಅಡಿಕೆ ಬೆಳೆಗಾರ ರೈತನ ಫೋಟೋ ಹಾಕಿ ಅವನ ಮೈ ತುಂಬಾ ಬಂಗಾರದ ಆಭರಣ ಹಾಕಿ ನಿಲ್ಲಿಸಿ ಬಿಟ್ಟಿದೆ.
ಮೇಲ್ನೋಟಕ್ಕೆ ಇದು ಆಭರಣ ಜ್ಯುವೆಲರಿ ರೈತರ ಫೋಟೋ ಹಾಕಿ ತನ್ನ ದೊಡ್ಡತನ ಮೆರೆದಿದೆ ಅನ್ನಿಸದಿರಲಾರದು..
ಆದರೆ ಇದರ ಪರಿಣಾಮ ಬಹುಷಃ ಯಾರೂ ಊಹಿಸಿರದ ಸಂದೇಶವನ್ನು ಸಾರ್ವಜನಿಕರಿಗೆ ನೀಡುವುದು ಮಾತ್ರ ಸತ್ಯ. ಇಲ್ಲಿ ಉದ್ದೇಶ ಬೇರೆಯದೇ ಆದರೂ ಪರಿಣಾಮ ಮಾತ್ರ ಮತ್ತೊಂದು ಆಗಿರುವುದು ನಿಜ.

ಅಡಿಕೆ ಬೆಳೆಗಾರರನ್ನು ಹೊರತುಪಡಿಸಿ ಪಟ್ಟಣದ ಅದೆಷ್ಟೋ ಜನರಿಗೆ ಅಡಿಕೆ ಬೆಳೆ ಬಂಗಾರದ ಬೆಳೆ ಅನ್ನುವ ತಪ್ಪು ಮಾಹಿತಿ ತಲೆಯೊಳಗೆ ಬೇರೂರಿ ಕುಳಿತುಬಿಟ್ಟಿದೆ. ಹಿಂದೊಂದು ಕಾಲ ಹಾಗೆ ಇತ್ತು ಅನ್ನುವುದು ಸತ್ಯವಿರಲೂಬಹುದು. ಆದರೆ ಪ್ರಸ್ತುತ ವಿಚಾರಗಳೆ ಬೇರೆ..
ಒಂದು ಕಾಲದಲ್ಲಿ ಮಲೆನಾಡಿಗೆ ಸೀಮಿತವಾಗಿದ್ದ ಅಡಿಕೆ ಈಗ ಎಲ್ಲಾ ಕಡೆ ರಕ್ಕಸ ಗಾತ್ರದಲ್ಲಿ ಆವರಿಸಿ ತನ್ನ ಎಲ್ಲೆಯನ್ನು ತಾನೇ ಮೀರಿ ಹೊರಟಿದೆ.
ಎಲೆಚುಕ್ಕಿ ರೋಗದಂತ ಮಾರಕ ರೋಗ ಅಡಿಕೆಗೆ ತಗುಲಿ ಸಮಸ್ತ ಮಲೆನಾಡನ್ನೇ ಆಪೋಷನ ತೆಗೆದುಕೊಳ್ಳಲು ತಯಾರಾಗಿ ನಿಂತಿದೆ. ಅಡಿಕೆಯನ್ನೇ ನಂಬಿ, ಅಡಿಕೆಯೇ ಆರ್ಥಿಕ ಆಧಾರವಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳು ಮಾರಕ ಅಡಿಕೆ ರೋಗಕ್ಕೆ ಹೆದರಿ ಮುಂದೇನು ಎಂದು ಅಕ್ಷರಶಃ ಪತರುಗುಟ್ಟಿ ಹೋಗಿದೆ.


ನಾನಾ ಕಾರಣಕ್ಕೆ ಅಡಿಕೆ ಉತ್ಪಾದನಾ ವೆಚ್ಚ ಅಧಿಕವಾಗಿ ಸಾಲದ ಸುಳಿಯಲ್ಲಿ ಬಹುತೇಕ ಬೆಳೆಗಾರ ರೈತರು ಇನ್ನಿಲ್ಲದ ಪರಿಪಾಡಲು ಅನುಭವಿಸುತ್ತಿದ್ದಾರೆ. ಮಲೆನಾಡಿನ ಅರ್ಧ ಎಕರೆ, ಒಂದು ಎಕರೆ ಅಡಿಕೆ ತೋಟ ಉಳ್ಳವರಿಗೆ ಯಾರಿಗೂ ಕೇವಲ ಅಡಿಕೆಯಿಂದ ಜೀವನ ನಡೆಸಲು ಸಾಧ್ಯವೇ ಆಗದ ಸ್ಥಿತಿ ತಲುಪಿದ್ದಾರೆ. ಅಂದಿಗೂ ಇಂದಿಗೂ ಅಡಿಕೆ ದರವೇನೋ ಹೆಚ್ಚಳ ಆದಂತೆ ಕಂಡರೂ ಈಗ ಹತ್ತು ವರ್ಷಗಳ ಹಿಂದೆ ಮಲೆನಾಡ ಬೆಳೆಗಾರರು ಎಕರೆವಾರು ತೆಗೆಯುತ್ತಿದ್ದ ಉತ್ಪತ್ತಿ ಶೇಕಡ 60 ಕಡಿಮೆಯಾಗಿ ಹೋಗಿದೆ. ಇರುವಷ್ಟು ಉತ್ಪತ್ತಿಯೂ ರೋಗಕ್ಕೆ ಬಲಿ ಆದರೆ ಮುಂದಿನ ಜೀವನದ ಗತಿಯೇನು ಎನ್ನುವ ಆತಂಕದಿಂದ ತಿಂದ ಅನ್ನ ಮೈಗೆ ಹತ್ತದಂತಾಗಿಬಿಟ್ಟಿದ್ದಾರೆ.

ಇಂತಹ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರ (ಮಲೆನಾಡಿನ) ಇರಬೇಕಾದರೆ ಜಾಹೀರಾತು ಫಲಕದಲ್ಲಿನ ಮೈ ತುಂಬಾ ಆಭರಣ ಹೊತ್ತ ಅಡಿಕೆ ಬೆಳೆಗಾರ ರೈತನ ಫೋಟೋ ನೋಡುವ ಜನರಿಗೆ
ಬಂಗಾರ ಬೆಳೆಯುವ ಬೆಳೆಗಾರನಿಗೆ ಇದೇನು ಲೆಕ್ಕ ಅನ್ನಿಸದೇ ಇರಲಾರದೇ..? ತಪ್ಪು ಸಂದೇಶ ರವಾನೆ ಆಗದಿರುವುದೇ?? ಅಡಿಕೆ ಬೆಳೆಗಾರ ಆಗರ್ಭ ಶ್ರೀಮಂತ ಅನ್ನುವ ಮೂಡನಂಬಿಕೆಗೆ ಪುಷ್ಟಿ ನೀಡುವುದಿಲ್ಲವೇ…???!! ಸಂತ್ರಸ್ತ ಅಡಕೆ ಬೆಳೆಗಾರನಾಗಿ ನನಗೆ ಅನ್ನಿಸಿದ್ದು ಇಷ್ಟು… ಸರಿಯೋ ತಪ್ಪೋ ಗೊತ್ತಿಲ್ಲ..

ಒಟ್ಟಿನಲ್ಲಿ ಮಾರಕ ಎಲೆಚುಕ್ಕಿ ರೋಗಕ್ಕೆ ಹೆದರಿ ನಗುವುದನ್ನೇ ಮರೆತ ಮಲೆನಾಡ ಅಡಿಕೆ ಬೆಳೆಗಾರರ ನಗುವಿನ ಶ್ರೀಮಂತಿಕೆಯನ್ನಾದರೂ ಕಸಿಯದೆ ಬಿಡಿ ಎಂಬ ವಿನಂತಿಯೊಂದಿಗೆ.

ಬರಹ: ಪುರುಷೋತ್ತಮ ಶಾನುಬೋಗ್

Malnad Times

Recent Posts

ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿದ ಈಚಲುಕೊಪ್ಪ, ಕಾಪೇರಮನೆ ಗ್ರಾಮಸ್ಥರು

ಹೊಸನಗರ: ತಾಲ್ಲೂಕಿನ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ವ್ಯಾಪ್ತಿ ಹಲುಸಾಲೆ - ಮಳವಳ್ಳಿ, ಕಾಪೇರಮನೆ ಗ್ರಾಮದ ಗ್ರಾಮಸ್ಥರು ಸಾಗರ-ಹೊಸನಗರದ ಮಧ್ಯ ಭಾಗದಲ್ಲಿದ್ದು…

28 mins ago

ಆನೆ ದಾಳಿಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ತಕ್ಷಣ ₹ 15 ಲಕ್ಷ ಪರಿಹಾರ ನೀಡಿ ; ಹರತಾಳು ಹಾಲಪ್ಪ ಆಗ್ರಹ

ಹೊಸನಗರ: ಶುಕ್ರವಾರ ಬೆಳಿಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ ರೈತ ತಿಮ್ಮಪ್ಪ ಎಂಬ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಿದ್ದು…

2 hours ago

ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರ ರೋಡ್ ಷೋ | ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ ; ಪ್ರದೀಪ್ ಈಶ್ವರ್

ಶಿವಮೊಗ್ಗ: ರಾಜ್ಯದ ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಆದ್ದರಿಂದ ಕ್ಷೇತ್ರದ ಹಿತ ಕಾಯಲು ಗೀತಕ್ಕಗೆ ಮತ ನೀಡಿ, ಆಶೀರ್ವದಿಸಿ…

2 hours ago

ಬಂಗಾರಪ್ಪರ ಋಣ ತೀರಿಸಲು ಗೀತಾಗೆ ಮತ ನೀಡಿ ; ಮಧು ಬಂಗಾರಪ್ಪ

ಸೊರಬ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವರ ಋಣವನ್ನು…

5 hours ago

ನೈರುತ್ಯ ಶಿಕ್ಷಕರ, ನೈರುತ್ಯ ಪದವೀಧರರ ಕ್ಷೇತ್ರಗಳಿಗೆ ಜೂ. 03 ರಂದು ಚುನಾವಣೆ | ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಮೇ 6 ಕಡೆಯ ದಿನ

ಚಿಕ್ಕಮಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 03 ರಂದು…

17 hours ago

ಆನೆ ದಾಳಿಯಿಂದ ಮೃತನಾದ ರೈತನ ಕುಟುಂಬಕ್ಕೆ 24 ಗಂಟೆಯೊಳಗೆ ಪರಿಹಾರ ನೀಡದಿದ್ದಲ್ಲಿ ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಹಾಲಪ್ಪ

ರಿಪ್ಪನ್‌ಪೇಟೆ: ಇಂದು ಬೆಳಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ್ದ ರೈತ ತಿಮ್ಮಪ್ಬ ಎಂಬ ರೈತ ಆನೆ ದಾಳಿಗೆ ಬಲಿಯಾಗಿದ್ದು ಮೃತ…

18 hours ago