Categories: Shivamogga

ಭಾರತದಲ್ಲಿ ಇಸ್ಲಾಮೀಕರಣ ಯುದ್ಧ ಆರಂಭವಾಗಿದೆ ; ಜಗದೀಶ್ ಕಾರಂತ್

ಶಿವಮೊಗ್ಗ: ಇಸ್ಲಾಮಿಕ್ ಮೂಲಭೂತ ವಾದಿಗಳಿಗೆ ಕಾಂಗ್ರೆಸ್ ಸರ್ಕಾರ ಶರಣಾಗಿದ್ದು, ಭಾರತದಲ್ಲಿ ಇಸ್ಲಾಮೀಕರಣ ಯುದ್ಧ ಆರಂಭವಾಗಿದೆ ಎಂದು ಮಧ್ಯ ಪ್ರಾಂತ್ಯ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್ ಹೇಳಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹಿಂದೂ ಜಾಗರಣಾ ವೇದಿಕೆ ಹಿಂದೂಗಳ ಸ್ವಾಭಿಮಾನದ ಚಳುವಳಿಯಾಗಿದ್ದು, ನಮ್ಮ ನೆಲೆ ಭಾರತದ ಸುರಕ್ಷತೆಯ ಹೊಣೆ ಹಿಂದೂಗಳದ್ದಾಗಿದೆ. ಕಳೆದ 40 ವರ್ಷಗಳಿಂದ ಹಿಂದೂ ಜಾಗರಣಾ ವೇದಿಕೆ ಹಿಂದೂಗಳ ರಕ್ಷಣೆ ಮತ್ತು ಸುರಕ್ಷತೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಶಿವಮೊಗ್ಗದಲ್ಲಿ ಕಳೆದ 10 ವರ್ಷಗಳ ಬೆಳವಣಿಗೆ ಗಮನಿಸಿದಾಗ, ಇಸ್ಲಾಮಿಕ್ ಬೆಳವಣಿಗೆ ಇತಿಹಾಸ ಇಲ್ಲಿ ಕಂಡುಬರುತ್ತಿದ್ದು, ಪ್ರತಿಶತ 25ರ ಗಡಿಯನ್ನು ಈಗಾಗಲೇ ಮುಸ್ಲಿಮರು ದಾಟಿದ್ದಾರೆ. ಈಗ ಹಿಂದೂಗಳು ಅವರನ್ನು ಎದುರಿಸಬೇಕು. ಇಲ್ಲ ಶರಣಾಗತರಾಗಬೇಕು. ಅಥವಾ ಪಲಾಯನ ಮಾಡಬೇಕೋ ಎಂಬ ಜಿಜ್ಞಾಸೆಯಲ್ಲಿದ್ದಾರೆ. ಇವರ ಹಿಂದೆ ಇರುವ ಮೂಲವನ್ನು ಗುರುತಿಸಬೇಕಾಗಿದೆ. ಕಾಶ್ಮೀರದ ಕಣಿವೆಯಲ್ಲಿ ಯಾವ ರೋಗದಿಂದ ಹಿಂದುಗಳು ನರಳಿ ನರಳಿ ಸಾಯುತ್ತಿದ್ದಾರೋ ಬಂಗಾಳದ ಕೆಲವೆಡೆ ಮತ್ತು ಕೇರಳದಲ್ಲಿ ಹಿಂದೂಗಳ ಮೇಲೆ ಏನು ನಡೆಯುತ್ತಿದೆಯೋ ಅದು ಎಲ್ಲಾ ಭಾಗಗಳಲ್ಲಿ ವಿಸ್ತರಿಸಿ ಬಿಡಿಬಿಡಿಯಾಗಿ ಇಸ್ಲಾಮೀಕರಣಗೊಳಿಸುವ ರಣನೀತಿಯಾಗಿದ್ದು, ಅದರ ಪ್ರಯೋಗ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎಂದರು.


ಅವರ ಪ್ರಯೋಗದ ಭಯಾನಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಮಕ್ಕಳ, ಮೊಮ್ಮಕ್ಕಳ ಬದುಕನ್ನು ಚಿಂತಿಸುವ ಕಾಳಜಿ ತೋರಿಸದಿದ್ದರೆ ಹಿಂದೂಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ರಾಜ್ಯ ಸರ್ಕಾರದ ನಿಲುವು ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ನೂರಕ್ಕೆ ನೂರು ಪಕ್ಷಪಾತಿ ಧೋರಣೆಯಿಂದ ಕೂಡಿದೆ. ಡಿಜೆಹಳ್ಳಿ, ಕೆ.ಜೆ.ಹಳ್ಳಿ, ಮಡಿಕೇರಿ, ಹುಬ್ಬಳ್ಳಿಯ ಗಲಭೆ ಮಾಡಿದವರನ್ನು ಸರ್ಕಾರ ರಕ್ಷಿಸಿ ಮೊಕದ್ದಮೆ ಹಿಂಪಡೆಯುತ್ತಿದೆ. ಈ ಮೂಲಕ ಇಸ್ಲಾಮಿಕ್ ಮೂಲಭೂತ ವಾದಿಗಳಿಗೆ ಸಿದ್ದರಾಮಯ್ಯ ಸರ್ಕಾರ ಶರಣಾಗಿದೆ ಎಂದರು.


ಸರ್ಕಾರ ತೇಪೆ ಹಾಕುವ ಕೆಲಸ ಮಾಡುತ್ತಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳು ಒತ್ತಡಕ್ಕೆ ಮಣಿದು ಹಿಂದೂ, ಮುಸ್ಲಿಂ, ಕ್ರೈಸ್ತ ಈ ಮೂರು ಸಮಾಜದವರು ಗಲಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಖುರ್ಚಿಯಲ್ಲಿ ಕುಳಿತವರು ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣಬೇಕು. ಹಿಂದೂಗಳಿಗೆ ಅನ್ಯಾಯವಾಗುವುದನ್ನು ತಡೆಹಿಡಿಯಿರಿ ಎಂದು ನಾವು ಮತ್ತೊಮ್ಮೆ ಸರ್ಕಾರಕ್ಕೆ ಆಗ್ರಹಿಸುತ್ತೇವೆ. ಅಲ್ಲದೆ ಹಿಂದೂಗಳಿಗೆ ನಿಮ್ಮ ಆತ್ಮರಕ್ಷಣೆಯನ್ನು, ನಿಮ್ಮ ಕುಟುಂಬದ ಸುರಕ್ಷತೆಯನ್ನು ನೀವೇ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೀಡಾಗುತ್ತೀರಿ ಎಂಬ ಎಚ್ಚರಿಕೆ ನೀಡುತ್ತೇನೆ ಎಂದರು.


ದಕ್ಷಿಣ ಪ್ರಾಂತ್ಯ ಕಾರ್ಯಕಾರಿ ಸಮಿತಿ ಸದಸ್ಯ ಉಲ್ಲಾಸ್ ಜಿ. ಮಾತನಾಡಿ, ರಾಗಿಗುಡ್ಡ ಘಟನೆ ಅವಲೋಕನ ಮಾಡಿದಾಗ ಉದ್ದೇಶಪೂರ್ವಕವಾಗಿ ಮಾಡಿದ ಪೂರ್ವನಿಯೋಜಿತ ಕೃತ್ಯ ಎಂಬುದು ತಿಳಿಯುತ್ತಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವುದು, ಹಿಂದೂಗಳನ್ನೆ ಗುರಿಯಾಗಿಸಿ ಕೊಲೆಯತ್ನ, ದಾಳಿ ಕಲ್ಲು ತೂರಾಟ ಮಾಡುವುದರ ಮೂಲಕ ಭಯಗ್ರಸ್ತರನ್ನಾಗಿ ಮಾಡುವುದು ಅವರ ಮೂಲ ಉದ್ದೇಶ. ಹಿಂದೆ ಟಿಪ್ಪು ಜಯಂತಿ ಸಂದರ್ಭದಲ್ಲಿ ಪಿಎಫ್‌ಐ ಸಂಘಟನೆಯ ರೀತಿಯಲ್ಲಿ ಇನ್ನೊಂದು ಮುಖ ಇದು. ಔರಂಗಜೇಬ ಅತ್ಯಂತ ಕ್ರೂರಿ. ಮತಾಂಧ ರಾಜ ಎಂದು ಚರಿತ್ರೆಯೇ ಹೇಳುತ್ತದೆ. ದೇಶದ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ನೂರಾರು ಹಿಂದೂ ದೇಗುಲಗಳನ್ನು ಧ್ವಂಸ ಮಾಡಿದವನ ಕಟೌಟ್  ಇಟ್ಟು ವೈಭವೀಕರಣ ಮಾಡುವುದರ ಉದ್ದೇಶ ಗಲಭೆಗೆ ಪ್ರಚೋದನೆ ನೀಡುವುದಾಗಿದೆ. ಇದು ಮುಂದೆ ನಡೆಯುವ ಅಪಾಯದ ಮುನ್ಸೂಚನೆ. ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಮಾನಸಿಕತೆಯನ್ನು ಹಿಂದೂ ಜಾಗರಣಾ ವೇದಿಕೆ ಅತ್ಯುಗ್ರವಾಗಿ ಖಂಡಿಸುತ್ತದೆ. ಒಂದು ಕೋಮಿನ ಕಡೆಯಿಂದ ಪೂರ್ವನಿಯೋಜಿತವಾಗಿ ನಡೆದ ಈ ಕೃತ್ಯವನ್ನು ಇದು ಎರಡೂ ಕೋಮಿನಿಂದ ನಡೆದಿದೆ ಎಂದು ಬಿಂಬಿಸಲು ಸರ್ಕಾರ ಹೊರಟಿದೆ ಎಂದರು.


ರಾಗಿಗುಡ್ಡದಲ್ಲಿ ನಡೆದ ಘಟನೆ ಭಯೋತ್ಪಾದನೆಯಿಂದ ಪ್ರೇರಿತರಾದ ಶಕ್ತಿಗಳು ಮಾಡಿದ್ದಾರೆ. ಇದರ ಹಿಂದೆ ಇರುವ ಕೈಗಳು ಯಾವುವು ಎಂದು ಸರ್ಕಾರ ತನಿಖೆ ಮಾಡಲಿ. ಒತ್ತಡದಿಂದ ದ್ರೋಹಿಗಳನ್ನು ಬಜಾವ್ ಮಾಡುವ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಹಿಂದೂ ಸಮಾಜ ಎಚ್ಚರಿಕೆಯಿಂದ ಎಲ್ಲವನ್ನೂ ಗಮನಿಸಬೇಕು ಎಂದರು.


ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಶಿವು, ಸತೀಶ್ ದಾವಣಗೆರೆ, ದೇವರಾಜ್ ಹರಳಹಳ್ಳಿ ಮೊದಲಾದವರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

10 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

14 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

14 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

16 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

17 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

1 day ago