ರಿಪ್ಪನ್ಪೇಟೆ: ಡಿಸೆಂಬರ್ 12 ರಂದು ನಡೆಯುವ 2023ನೇ ಸಾಲಿನ ಮುರುಘಾರಾಜೇಂದ್ರ ಮಠದ ಕಾರ್ತಿಕ ದೀಪೋತ್ಸವ ಸಮಿತಿಯ ಅಧ್ಯಕ್ಷರಾಗಿ ನಾಗರಾಜಗೌಡ ಹರತಾಳು, ಪ್ರಧಾನ ಕಾರ್ಯದರ್ಶಿಯಾಗಿ ದೇವೇಂದ್ರಪ್ಪಗೌಡ ನೆವಟೂರು ಆಯ್ಕೆಯಾಗಿದ್ದಾರೆ.
ಆನಂದಪುರ ಮುರುಘಾರಾಜೇಂದ್ರ ಮಠದಲ್ಲಿ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಮತ್ತು ಕಂಚಿನ ರಥೋತ್ಸವ ಭಾವೈಕ್ಯ ಧರ್ಮ ಸಮಾರಂಭದ ಪೂರ್ವ ಸಿದ್ದತಾ ಸಭೆಯಲ್ಲಿ 2023ನೇ ಸಾಲಿನ ದೀಪೋತ್ಸವ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಜೆ.ಎಸ್.ಚಂದ್ರಪ್ಪ ರಿಪ್ಪನ್ಪೇಟೆ ಇವರನ್ನು ಖಜಾಂಚಿಯನ್ನಾಗಿ ಹಾಗೂ ಸ್ವಾಗತ ಸಮಿತಿ, ದಾಸೋಹ ಸಮಿತಿ ಪ್ರಚಾರ ಸಮಿತಿ ಹೀಗೆ ವಿವಿಧ ಸಮಿತಿಗಳಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚಿತ್ರಟ್ಟೆ ಮಠದ ಲಿಂಗರಾಜಯ್ಯ, ಜಯಶೀಲಗೌಡ ಹರತಾಳು, ಎಲ್.ವೈ.ದಾನೇಶಪ್ಪಗೌಡ,
ಹೆಚ್.ಎಂ.ವರ್ತೇಶಗೌಡ, ಆಚಾಪುರ ಶಾಂತಕುಮಾರ್, ಬಿ.ಸಿ.ನಿಜಲಿಂಗಪ್ಪಗೌಡ, ಲಕ್ಕವಳ್ಳಿ ಮುರುಗೇಶಪ್ಪಗೌಡ, ಕೆ.ಆರ್.ರಾಜು ಖೈರಾ, ಮುರುಗೇಶಪ್ಪಗೌಡ ಖೈರಾ, ಶಿವಕುಮಾರಗೌಡ ಚನ್ನಕೊಪ್ಪ, ದುಶ್ಯಂತಗೌಡ ಕೋಣೆಹೊಸೂರು, ಶಿವಕುಮಾರಗೌಡ ದೂನ, ಮಲ್ಲಂದೂರು ನಾಗಭೂಷಣ ಇನ್ನಿತರ ಸುತ್ತಮುತ್ತಲಿನ ಸದ್ಭಕ್ತರು ಭಾಗವಹಿಸಿದರು.
ಕಾರ್ತಿಕ ದೀಪೋತ್ಸವಕ್ಕೆ ಹೊಂಬುಜ ಶ್ರೀಗಳಿಗೆ ಆಹ್ವಾನ
ರಿಪ್ಪನ್ಪೇಟೆ: ಡಿಸೆಂಬರ್ 12 ರಂದು ಆಯೋಜಿಸಲಾಗಿರು ಮುರುಘಾರಾಜೇಂದ್ರ ಮಠದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಹೊಂಬುಜ ಜೈನಮಠದ ಜಗದ್ಗುರು ಡಾ.ದೇವೇಂದ್ರ ಕೀರ್ತೀ ಭಟ್ಟಾರಕ ಮಹಾಸ್ವಾಮಿಜಿಯವರನ್ನು ದೀಪೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜಗೌಡ ಹರತಾಳು, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪಗೌಡ ನೆವಟೂರು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಖಜಾಂಚಿ ಜೆ.ಎಸ್.ಚಂದ್ರಪ್ಪ, ಹೆಚ್.ಎಂ.ವರ್ತೇಶಗೌಡರು, ಹಾಜರಿದ್ದರು.
ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…
ಕಳಸ : ತಾಲ್ಲೂಕಿನ ಹೆಮ್ಮಕ್ಕಿಯ ಶ್ರೀ ಭದ್ರಕಾಳಿ ಅಮ್ಮನವರಿಗೆ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಮೇ 01 ರಿಂದ ಮೇ…
ರಿಪ್ಪನ್ಪೇಟೆ: ನಾಳೆ ನಡೆಯುವ ಶ್ರೀಸಿದ್ದಿವಿನಾಯಕ ಸ್ವಾಮಿ ಶ್ರೀಮನ್ಮಹಾರಥೋತ್ಸವಕ್ಕೆ ಇಲ್ಲಿನ ಗಣೇಶಪ್ರಸಾದ್ ಹೋಟೆಲ್ನ ದಿ.ರೇವತಿ ಹೆಬ್ಬಾರ್ ಮತ್ತು ಸತ್ಯನಾರಾಯಣ ಹೆಬ್ಬಾರ್ ಸ್ಮರಣಾರ್ಥ…
ರಿಪ್ಪನ್ಪೇಟೆ: ಕಾಂಗ್ರೆಸ್ ಅಭ್ಯರ್ಥಿಗೆ ಸ್ಥಳೀಯ ಭೌಗೋಳಿಕ ಹಿನ್ನಲೆಯ ಅರಿವೇ ಇಲ್ಲದೆ, ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಸರೇ ಇಲ್ಲದ…
ಹೊಸನಗರ : ತಾಲೂಕಿನ ಪುಣಜೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ನೂತನ ಮನೆಗೆ ಅಕ್ರಮ ನಾಟಾ ಸರಬರಾಜು ಆಗಿರುವುದಾಗಿ ಸ್ಥಳೀಯ…
ಸಾಗರ: ಕ್ಷೇತ್ರದ ಅಭಿವೃದ್ಧಿಗೆ ಆಸರೆಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಕೊಡುಗೆ ಮರೆಯಕೂಡದು. ಇಲ್ಲಿ ಗೀತಕ್ಕ ಅವರ ಗೆಲುವು…