Categories: Shivamogga

ರಾಜ್ಯ ಮಟ್ಟದ ಎಕ್ಸಲೆಂಟ್ ಫೋಟೋ, ವಿಡಿಯೋ ಕಂಟೆಸ್ಟ್

ಶಿವಮೊಗ್ಗ : ತಾಲ್ಲೂಕು ವಿಡಿಯೋ ಮತ್ತು ಫೋಟೋಗ್ರಾಫರ‍್ಸ್ ಅಸೋಸಿಯೇಷನ್ (ಎಸ್‌ವಿಪಿಎ) ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಎಕ್ಸಲೆಂಟ್ ಫೋಟೋ ವಿಡಿಯೋ ಕಾಂಟೆಸ್ಟ್ -2023 ಏರ್ಪಡಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ವಿ. ಸತೀಶ್ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಛಾಯಾಗ್ರಾಹಕರಿಗೆ ಎಕ್ಸಲೆಂಟ್ ಕ್ಯಾಂಡಿಡ್,‌ ಪೋಟ್ರೆಟ್, ಆ್ಯಕ್ಷನ್ ವೆಡ್ಡಿಂಗ್, ಔಟ್‌ಡೋರ್ ಪ್ರಿ ವೆಡ್ಡಿಂಗ್, ಲೈಟಿಂಗ್, ನ್ಯೂ ಬಾರ್ನ್ ಬೇಬಿ ಫೋಟೋಗ್ರಪಿ ಸ್ಪರ್ಧೆ ಇದ್ದು, ಸ್ಪರ್ಧೆಗೆ 8X12 ಅಳತೆಯ ವಿವಿಧ ಮೂರು ಫೋಟೋಗಳನ್ನು‌ ಕಳುಹಿಸಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ರಾಜ್ಯದ ಯಾವುದಾದರೂ ಛಾಯಾಗ್ರಾಹಕರ ಸಂಘದಲ್ಲಿ ಕಡ್ಡಾಯವಾಗಿ ಸದಸ್ಯತ್ವ ಹೊಂದಿರಬೇಕು ಎಂದರು.

ವಿಡಿಯೋಗ್ರಾಫರ್‌ಗಳಿಗೆ:

ಎಕ್ಸಲೆಂಟ್ ಟ್ರೆಡಿಷನಲ್-ಸಿನಿಮ್ಯಾಟಿಕ್ ವಿಡಿಯೋ ಶೂಟರ್, ಡ್ರೋನ್-ಪ್ರಿ ವೆಡ್ಡಿಂಗ್ ಶೂಟರ್ ಸ್ಪರ್ಧೆ ಇದ್ದು, ಪ್ರತಿಯೊಂದು ಸ್ಪರ್ಧೆಗೆ ಮೂರು ನಿಮಿಷದ ವಿಡಿಯೋ ಚಿತ್ರಣವನ್ನು ವಾಟ್ಸಾಪ್ ಮೂಲಕ ಡಾಕ್ಯುಮೆಂಟ್ ಫೈಲ್‌ನಲ್ಲಿ ಕಳುಹಿಸಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ರಾಜ್ಯದ ಯಾವುದಾದರೂ ಛಾಯಾಗ್ರಾಹಕರ ಸಂಘದಲ್ಲಿ ಕಡ್ಡಾಯವಾಗಿ ಸದಸ್ಯತ್ವ ಹೊಂದಿರಬೇಕು ಎಂದರು.

ಎಡಿಟರ್‌ಗಳಿಗೆ:

ಎಕ್ಸಲೆಂಟ್ ಟ್ರೆಡಿಷನಲ್-ಪ್ರಿ ವೆಡ್ಡಿಂಗ್ ವೀಡಿಯೋ ಎಡಿಟರ್, ಸಿನಿಮ್ಯಾಟಿಕ್ ವೆಡ್ಡಿಂಗ್ ಎಡಿಟರ್ ಹಾಗೂ ಆಲ್ಬಮ್ ಡಿಸೈನರ್ ಸ್ಪರ್ಧೆ ಇದ್ದು, ಸ್ಪರ್ಧೆಗೆ 8X12 ಅಳತೆಯ ವಿವಿಧ ಮೂರು ಫೋಟೋಗಳನ್ನು ಕಳುಹಿಸಬೇಕು. ಛಾಯಾಗ್ರಾಹಕರು ವಿಡಿಯೋ ಕಳುಹಿಸಬೇಕಾದ ವಾಟ್ಸಾಪ್ ನಂ. 9353260431ರಲ್ಲಿ ಕಳುಹಿಸಬೇಕು. ಎಲ್ಲಾ ವಿಭಾಗದಲ್ಲಿ ವಿಜೇತರಾದವರಿಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.


ಫೋಟೋಗಳನ್ನು ಶಿವಮೊಗ್ಗ ತಾಲ್ಲೂಕು ವಿಡಿಯೋ ಮತ್ತು ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಂ.14, 4ನೇ ತಿರುವು, ಜಿ.ಎಸ್.ಕೆ.ಎಂ. ರಸ್ತೆ ಶಿವಮೊಗ್ಗ ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9844058100, 9945391114 ಅಥವಾ 9880800987ರಲ್ಲಿ ಸಂಪರ್ಕಿಸಿ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಬಿ.ಕೆ.ಜಿ. ಪ್ರಸಾದ್, ಹೆಚ್.ಎಸ್.ಚೇತನ್, ಎಸ್.ಎಲ್ ಧನಂಜಯ್, ಪರಮೇಶ್, ಕೆ.ಸಿ. ಮೋಹನ್ ಇತರರಿದ್ದರು.

Malnad Times

Recent Posts

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 hours ago

Rain Alert | ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…

4 hours ago

ಕಾಫಿನಾಡಿನಲ್ಲಿ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಸುರಿದ ಭಾರಿ ಮಳೆ

ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬೇಸಿಗೆಯ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಭಾರಿ…

5 hours ago

ಪತಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಹಿಳೆ !

ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…

15 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ | ಶೇ. 78.24 ಮತದಾನ

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ…

17 hours ago

Accident | ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಸಾವು !

ಶಿವಮೊಗ್ಗ : ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…

18 hours ago