ಹೊಸನಗರ: ತಾಲ್ಲೂಕು ಒಕ್ಕಲಿಗ ಸಂಘ ರಿಪ್ಪನ್ಪೇಟೆ ಇದರ ಆಡಳಿತ ಮಂಡಳಿಯ ಚುನಾವಣೆ ಭಾನುವಾರ ನಡೆದಿದ್ದು ಎಂ.ಬಿ.ಲಕ್ಷ್ಮಣಗೌಡ ಮತ್ತು ಎಂ.ಎಂ. ಪರಮೇಶ್ರವರ ತಂಡ ಪ್ರಚಂಡ ಜಯಗಳಿಸಿದೆ.
2023ರ ಅ.29ಕ್ಕೆ ಚುನಾವಣೆ ನಿಗದಿಯಾಗಿತ್ತು 2 ಜನ ಆಡಳಿತ ಮಂಡಳಿಯಲ್ಲಿದ್ದ ಸದಸ್ಯರು ಹೈಕೋರ್ಟಿನಿಂದ ಚುನಾವಣೆಗೆ ತಡೆಯಾಜ್ಞೆ ತಂದಿದ್ದರು ನಂತರ ಹೈಕೋರ್ಟ್ ಅರ್ಜಿಯನ್ನು ವಜಾಗೊಂಡು ಚುನಾವಣೆಗೆ ಆದೇಶ ಮಾಡಿತ್ತು, ಆದೇಶದಂತೆ ಫೆ.04ರಂದು ಚುನಾವಣೆ ನಡೆದು 2 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿ 17 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಎಂ.ಬಿ.ಲಕ್ಷ್ಮಣ ಗೌಡ ಮತ್ತು ಎಂ.ಎಂ. ಪರಮೇಶ್ರವರ ತಂಡ ಎಲ್ಲಾ ಸ್ಥಾನಗಳನ್ನು ಗೆದ್ದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕಲ್ಲೂರು ವಾಸಪ್ಪಗೌಡರ ತಂಡಕ್ಕೆ ತೀವ್ರ ಮುಖಭಂಗವಾಗಿದೆ.
ರಿಪ್ಪನ್ಪೇಟೆ ಕ್ಷೇತ್ರದಿಂದ ಎಂ.ಬಿ.ಲಕ್ಷ್ಮಣ ಗೌಡ ಎಂ.ಎಂ.ಪರಮೇಶ್, ಸುಮಂಗಳ ಹರೀಶ್, ಹಾಲುಗುಡ್ಡೆ ಕ್ಷೇತ್ರದಿಂದ ಹೆಚ್.ವಿ.ಹರೀಶ್, ಹೆಚ್.ಆರ್.ಅಶೋಕ, ಹೆಚ್ ವೈ ಸಂತೋಷ್ಕುಮಾರ್ (ಚಿಂತು) ಹೆಚ್.ಎಸ್. ರಾಜು, ಶಿಲ್ಪ ರಾಜೇಶ್ ಕಲ್ಲೂರು ಕ್ಷೇತ್ರದಿಂದ ಕೆ.ಸಿ.ತೇಜಮೂರ್ತಿ, ಈ.ಡಿ.ಮಂಜುನಾಥ, ಸತ್ಯವತಿ ಶ್ರೀಧರ, ಕೋಟೆತಾರಿಗ ಕ್ಷೇತ್ರದಿಂದ ಪಿ.ಮಂಜುನಾಥ ಕೆ ಸಿ ಮಹೇಶ, ವಜ್ರಾಕ್ಷಿ, ಹೋ.ಮ. ಲೋಕಪ್ಪಗೌಡ, ಕೆರೆಹಳ್ಳಿ ಕ್ಷೇತ್ರದಿಂದ ಬಿ.ಹೆಚ್.ಷಣ್ಮುಖಪ್ಪಗೌಡ, ಹೆದ್ದಾರಿಪುರ ಕ್ಷೇತ್ರದಿಂದ ಹೆಚ್.ಪಿ.ರಾಜೇಶ್, ಗುಬ್ಬಿಗ ಕ್ಷೇತ್ರದಿಂದ ಜಿ.ದಿನೇಶ್ ಆಯ್ಕೆಯಾಗಿದ್ದಾರೆ
ಗರ್ತಿಕೆರೆ ಕ್ಷೇತ್ರದಿಂದ ಟಿ.ಎಂ.ಕೃಷ್ಣಮೂರ್ತಿ ಮತ್ತು ಬುಕ್ಕಿವರೆ ಕ್ಷೇತ್ರದಿಂದ ಹೆಚ್.ಸಿ.ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…