Categories: RipponpeteShivamogga

ವರಪ್ರದಾಯಿನಿ ಕಳಸೆ ಗೌರಿ ಹೊಂಡದ ಗೌರಿಮಾತೆಗೆ ಮುತ್ತೈದೆಯರಿಂದ ಬಾಗಿನ ಸಮರ್ಪಣೆ

ರಿಪ್ಪನ್‌ಪೇಟೆ: ಪುರಾತನ ಕಾಲದ ದೇವಾಲಯಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮೂಲಧಾರಗಳು ಹಾಗೆಯೇ ಅಲ್ಲಿ ವಾಸಿಸಿದ್ದ ಋಷಿಮುನಿಗಳು ಶಿವಯೋಗ್ಯವರೇಣ್ಯರು ತಮ್ಮ ಪವಾಡ-ಪೂಜೆಗಳಿಂದ ಆಯಾ ಭಾಗದ ಕ್ಷೇತ್ರಗಳನ್ನು ಪಾವನಗೊಳಿಸಿ ಜಗದಿಂದ ಮರೆಯಾಗಿ ಹೋಗಿದ್ದಾರೆ. ಅಂತಹ ಸಾಧಕರ ಪಾದಸ್ಪರ್ಶದ ಸ್ಥಳಗಿಳಿಂದು ಪ್ರಚಾರವಿಲ್ಲದೆ.
ಮೂಲೆಗುಂಪಾಗುತ್ತಾ ಎಷ್ಟೋ ಪ್ರಮುಖ ಇತಿಹಾಸವೂಳ್ಳ ದೇವಸ್ಥಾನಗಳು ಮತ್ತು ಧಾರ್ಮಿಕ ಪವಾಡದ ಹಲವು ಗುಹೆಗಳು ಅಳಿಯುವಂತಾಗಿರುವುದು ಕಾಣಬಹುದಾಗಿದ್ದರೂ ಕೂಡಾ ಅಳಿದುಳಿದಿರುವ ಕೆಲವು ಪ್ರಮುಖ ಧಾರ್ಮಿಕ ಕೇಂದ್ರಗಳಲೊಂದಾದ ಹೊಸನಗರ ತಾಲ್ಲೂಕಿನ ಕಳಸೆ ಗೌರಿ ಹೊಂಡದ ಗೌರಮ್ಮ ತಾಯಿಗೆ ಹರಿಕೆ ಹೊತ್ತು ಪ್ರಾರ್ಥಿಸಿದರೆ ಮುಂದಿನ ಗೌರಿ ಹಬ್ಬದೊಳಗೆ ಪೂರ್ಣಗೊಳ್ಳುವುದು ಎಂಬ ನಂಬಿಕೆಯಿಂದ ಸುತ್ತಮುತ್ತಲಿನ ನೂರಾರು ಹಳ್ಳಿಗಳ ಮಹಿಳೆಯರು ತಮ್ಮ ಆಶೋತ್ತರಗಳ ಈಡೇರಿಸುವಂತೆ ಪ್ರಾರ್ಥಿಸಿಕೊಂಡ ಒಂದು ವರ್ಷದಲ್ಲಿ ಬೇಡಿದ ವರವನ್ನು ಕರುಣಿಸುವ ಮಹಾತಾಯಿಗೆ ಮುತ್ತೈದೆಯರು ಬಾಗಿನ ನೀಡುವುದು ಇಲ್ಲಿನ ವಿಶೇಷವಾಗಿದೆ.


ಸಂತಾನ ಭಾಗ್ಯ ಮತ್ತು ವಿವಾಹಯೋಗ ಹೀಗೆ ಹತ್ತು ಹಲವು ಮಹಿಳೆಯರ ಕೌಟಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಜಗನ್ಮಾತೆ ಗೌರಮ್ಮ ತಾಯಗೆ ಪ್ರಾರ್ಥಿಸಿ ಬರುವ ಗೌರಿ ಹಬ್ಬದೊಳಗೆ ಮಾಡಿಕೊಂಡ ಹರಕೆ ಪೂರ್ಣವಾಗುವುದು ಹರಕೆಯಂತೆಯೇ ಮಹಿಳೆಯರು ವರಪ್ರದಾಯಿನಿ ಗೌರಿ ಮಾತೆಗೆ ಗೌರಿ ಹಬ್ಬದ ಮುಂಜಾನೆ ಬ್ರಾಹ್ಮಿ ಮೂಹೂರ್ತದಲ್ಲಿ ವಿಶೇಷ ಪೂಜೆ ನಡೆದು ಗೌರಿ ಹೊಂಡದ ಬಳಿಯಲ್ಲಿಯೇ ಸಿದ್ದಪಡಿಸಿಕೊಂಡ ಬಂದಂತಹ ಬಾಗಿನವನ್ನು ಮುತ್ತೈದೆಯರು ಗೌರಮ್ಮ ತಾಯಿಗೆ ಅರ್ಪಿಸಿ ನಂತರ ಮುತ್ತೈದೆಯರಿಗೆ ಉಡಿ ತುಂಬಿ ಅರಿಶಿಣ ಕುಂಕುಮ ನೀಡಿ ಶುಭಹಾರೈಸುತ್ತಾರೆ.


ವರ್ಷವಿಡಿ ಗೌರಿ ಹೊಂಡದಲ್ಲಿ ನೀರು ಬತ್ತುವುದಿಲ್ಲ ಈ ಹಿಂದೆ ಶಿವಪಾರ್ವತಿಯವರು ಸಂಚಾರ ಮಾಡುವಾಗ ತನ್ನ ಜಟ್ಟೆಯಿಂದ ನೀರು ಹರಿದ ಕಾರಣ ಈ ಹೊಂಡವನ್ನು ಗೌರಿ ಹೊಂಡವೆಂದು ಕೆರೆಯಲಾಗುತ್ತಿದೆ ಎಂದು ಪುರಾಣ ಹೇಳುತ್ತದೆ. ಅದರಂತೆ ಗಣೇಶ ಚತುರ್ಥಿಯ ಹಿಂದಿನ ದಿನ ಗೌರಿ ಹಬ್ಬದೊಂದು ಮಹಿಳೆಯರು ತಾವು ತಾಯಿ ಗೌರಮ್ಮಗೆ ಬಾಗಿನ ನೀಡುವುದು ಸಂಪ್ರದಾಯವಾಗಿದ್ದು ಇಲ್ಲಿನ ಇತಿಹಾಸದಂತೆ ಕಳಸೆ ಗ್ರಾಮದಲ್ಲಿನ ಗೌರಿಹೊಂಡದ ಗೌರಮ್ಮಳಿಗೆ ತಮ್ಮ ಆಶೋತ್ತರಗಳ ಪರಿಹರಿಸುವಂತೆ ಬೇಡಿಕೊಂಡ ಮುತ್ತೈದೆಯರು ಹಬ್ಬದ ದಿನ ಬಂದು ತಮ್ಮ ಸಂಬಂಧಿಕರ ಮತ್ತು ಅಕ್ಕಪಕ್ಕದವರ ಹೀಗೆ ಹಲವರು ಬಂದು ಗೌರಿಹೊಂಡದಲ್ಲಿನ ಮಹಾತಾಯಿ ಗೌರಮ್ಮಳಿಗೆ ಬಾಗಿನ ಸಮರ್ಪಿಸುತ್ತಾರೆ.


ಮುಡುಬ, ಬೆನವಳ್ಳಿ, ದೊಡ್ಡಿನಕೊಪ್ಪ, ಕಳಸೆ, ಬೆಳಂದೂರು, ಗವಟೂರು, ಹುಂಚ, ಅಚ್ಚೆಕೊಪ್ಪ, ಕಗ್ಗಲಿ, ಹಾರೋಹಿತ್ತಲು, ಶಿವಮೊಗ್ಗ, ಹಾರನಹಳ್ಳಿ, ತಳಲೆ ಹೀಗೆ ಸುತ್ತಮುತ್ತಲಿನ ನೂರಾರು ಗ್ರಾಮಗಳ ಮಹಿಳೆಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಾಮಾತೆ ಗೌರಮ್ಮಳಿಗೆ ಬಾಗಿನ ಸಮರ್ಪಿಸುತ್ತಾರೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

4 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

5 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

5 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

5 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

5 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

5 days ago