Categories: HosanagaraShivamogga

ವಿಜ್ಞಾನ ಸದಾ ಹೊಸತನ್ನು ಅನ್ವೇಷೀಸುತ್ತದೆ ; ಇಸ್ರೋ ವಿಜ್ಞಾನಿ ಸುಬ್ರಹ್ಮಣ್ಯ ಉಡುಪ


ಹೊಸನಗರ: ವಿಜ್ಞಾನ ಸದಾ ಹೊಸತನ್ನು ಅನ್ವೇಷೀಸುತ್ತದೆ ಎಂದು ಸಂಸ್ಥೆಯ ವಿಜ್ಞಾನಿ ಸುಬ್ರಹ್ಮಣ್ಯ ಉಡುಪರವರು ಹೇಳಿದರು.


ಪಟ್ಟಣದ ಖಾಸಗಿ ಶಾಲೆ ಗುರೂಜಿ ಇಂಟರ್ ನ್ಯಾಶನಲ್ ಶಾಲೆಯ ಆವರಣದಲ್ಲಿ ವಿದ್ಯಾರ್ಥಿ ವಿಜ್ಞಾನಿಗಳ ಸಮಾಗಮ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ಇವತ್ತು ಇರುವ ಸ್ಥಿತಿ ನಾಳೆಗೆ ಮತ್ತೇನೋ ಆಗಿರಬಹುದು ಇಂದಿನ ಹೇಳಿಕೆ ನಾಳೆಗೆ ಬದಲಾಗಬಹುದು ಹಾಗಾಗಿ ವಿಜ್ಞಾನ ಸತ್ಯದ ಹುಡುಕಾಟದಲ್ಲಿ ತೊಡಗಿಕೊಂಡು ವಾಸ್ತವದ ವರದಿಯನ್ನು ಸಮಾಜಕ್ಕೆ ಕೊಡಲೇಬೇಕಾಗುತ್ತದೆ ಹಾಗೆ ಚಂದ್ರಯಾನದ ಮೂಲಕ ನಾವು ವಿಜ್ಞಾನಿಗಳು ದಕ್ಷಿಣ ದ್ರುವದಲ್ಲಿ ವಾಸ್ತವತೆಯ ತಿಳುವಿಗಾಗಿ ವಾಸಯೋಗ್ಯ ಪರಿಸರ ಹವಾಮಾನಗಳ ಅಧ್ಯಯನಕ್ಕಾಗಿ ಅವಿರತ ಪರಿಸ್ರಮಿಸುತ್ತಿದ್ದೇವೆ. ಜೀವಿಗಳಿರಬಹುದಾದ ಕುರುಹು ನಾಶವಾಗಿರಬಹುದಾದ ಕುರುಹು ಕುರಿತಂತೆ ಅಧ್ಯಯನ ಶೀಲರಾಗಿದ್ದೇವೆ ಎಂದು ಹೇಳಿದರು.


ಈ ಶಾಲೆಯ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿರುವುದು ಪ್ರತಿ ವಾರ ಓಪನ್ ಮೈಂಡ್ ಕಾರ್ಯಕ್ರಮದ ಮೂಲಕ ಮಕ್ಕಳ ಕುತೂಹಲ ತಣಿಸುವ ಪ್ರಯತ್ನವನ್ನು ಅಭಿನಂದಿಸಿದರು
ಈ ಗುರೂಜಿ ಶಾಲೆಯಲ್ಲಿ ಚಂದ್ರಯಾನ ಯಶಸ್ಸಿನ ಸವಿನೆನಪಿಗೆ ಸನ್ಮಾನ ಮಾಡಲಾಯಿತ್ತು ವಿಜ್ಞಾನದ ಕುರಿತಂತೆ ತಮಗಿದ್ದ ಅನುಮಾನಗಳನ್ನು ಪ್ರಶ್ನೆ ಕೇಳಿ ಉತ್ತರ ಕೊಂಡುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಂಭ್ರಮಪಟ್ಟರು ಮಕ್ಕಳ ಮುಗ್ದ ಪ್ರಶ್ನೆಗಳಿಗೆ ನಗುಮೊಗದ ಉತ್ತರ ನೀಡುತ್ತಿದ್ದ ಅವರ ಮನೋಲಹರಿ ಸಭಿಕರಲ್ಲಿ ಅಭಿಮಾನ ಮೂಡಿಸಿತು.


ಸಭೆಯಲ್ಲಿ ಕೊಡಚಾದ್ರಿ ಕಾಲೇಜು ಪ್ರಿನ್ಸಿಪಾಲ್ ಉಮೇಶ್, ಪ್ರಾಧ್ಯಾಪಕ ಶ್ರೀಪತಿ ಹಳಗುಂದ, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹೆಚ್.ಆರ್, ಸಂಸ್ಥೆಯ ಅಧ್ಯಕ್ಷ ಸುದೇಶ್ ಕಾಮತ್, ಸದಾಶಿವ ಶ್ರೇಷ್ಠಿ, ನಾಗೇಶ್, ಶಾಂತಮೂರ್ತಿ, ಶಿವಕುಮಾರ್, ಸುಷ್ಮಾ, ಚಂದ್ರಕಲಾ, ಉಷಾ, ಸುಮಲತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Malnad Times

Recent Posts

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

4 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

12 hours ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

23 hours ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

23 hours ago

ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…

23 hours ago

ಹಸೆಮಣೆ ಏರುವ‌ ಮುನ್ನ ಹಕ್ಕು ಚಲಾಯಿಸಿದ ವಧು

ಶೃಂಗೇರಿ : ಇಂದು ನಡೆದ ಮತದಾನದಲ್ಲಿ ತಾಲೂಕಿನ ಕೂತಗೋಡಿನಲ್ಲಿ ಹಸೆಮಣೆ ಏರುವ ಮುನ್ನ ಯುವತಿಯೊಬ್ಬಳು ಮತ ಚಲಾಯಿಸಲು ಅಲಂಕಾರಗೊಂಡೆ ಮತಗಟ್ಟೆಗೆ…

1 day ago