Categories: Shivamogga

ವಿಧಾನಸಭಾ ಚುನಾವಣೆ ಘೋಷಣೆ | ಇಂದಿನಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ; ಡಾ.ಸೆಲ್ವಮಣಿ ಆರ್ | Shivamogga | Karnataka Assemble Election 2023


ಶಿವಮೊಗ್ಗ : ಭಾರತೀಯ ಚುನಾವಣಾ ಆಯೋಗವು ಇಂದು ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸಿದ್ದು, ಇಂದಿನಿಂದಲೇ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತಿಯನ್ನು ಕಟುನಿಟ್ಟಿನಿಂದ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.


ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಹಿನ್ನೆಲೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 14,58,680 ಮತದಾರರು ನೋಂದಾಯಿಸಿಕೊಂಡಿದ್ದಾರೆ. 722080 ಪುರುಷ, 736574 ಮಹಿಳೆ, 14773 ಪಿಡಬ್ಲ್ಯುಡಿ(ಪರ್ಸನ್ಸ್ ವಿತ್ ಡಿಸ್‍ಎಬಿಲಿಟಿ) 26 ಇತರೆ ಮತದಾರರಿದ್ದಾರೆ.


ಚುನಾವಣಾ ವೇಳಾಪಟ್ಟಿ :

ದಿನಾಂಕ: 13-04-2023 ಚುನಾವಣಾ ಅಧಿಸೂಚನೆ ದಿನಾಂಕ. ದಿ: 20-04-2023 ಉಮೇದುವಾರಿಕೆ ಸಲ್ಲಿಕೆಗೆ ಕಡೆಯ ದಿನ. ದಿ: 21-04-2023 ಉಮೇದುವಾರಿಕೆ ಪರಿಶೀಲನೆ ದಿನ.
ದಿ: 24-04-2023 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ. ದಿ: 10-05-2023 ಮತದಾನದ ದಿನ. ದಿ: 13-05-2023 ಮತ ಎಣಿಕೆ ದಿನ. ದಿ: 15-05-2023 ಮತದಾನ ಮುಕ್ತಾಯ ದಿನ.


ಮತಗಟ್ಟೆಗಳು :

ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 247 ಮತಗಟ್ಟೆಗಳು, ಭದ್ರಾವತಿ-112 ರಲ್ಲಿ 253 ಮತಗಟ್ಟೆಗಳು, ಶಿವಮೊಗ್ಗ-113 ರಲ್ಲಿ 282 ಮತಗಟ್ಟೆಗಳು, ತೀರ್ಥಹಳ್ಳಿ-114 ರಲ್ಲಿ 258, ಶಿಕಾರಿಪುರ-115 ರಲ್ಲಿ 232, ಸೊರಬ-116 ರಲ್ಲಿ 239, ಸಾಗರ-117 ರಲ್ಲಿ 264 ಒಟ್ಟು 1775 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.


ಚುನಾವಣಾಧಿಕಾರಿಗಳು :

ಶಿವಮೊಗ್ಗ ಗ್ರಾಮಾಂತರ -111 ರ ಚುನಾವಣಾಧಿಕಾರಿ ಕೊಟ್ರೇಶ್ ಹೆಚ್, ಸೂಡಾ ಆಯುಕ್ತರು, ಶಿವಮೊಗ್ಗ ಮೊ.ಸಂ: 9611079416. ಭದ್ರಾವತಿ-112 ರವಿಚಂದ್ರ ನಾಯ್ಕ್ ಶಿವಮೊಗ್ಗ ಉಪವಿಭಾಗಾಧಿಕಾರಿ ಮೊ.ಸಂ: 9916821123. ಶಿವಮೊಗ್ಗ-113 ಶಿವಾನಂದ ಪಿ ಸಾಗರ, ಉಪ ಆಯುಕ್ತರು, ಮಹಾನಗರಪಾಲಿಕೆ ಶಿವಮೊಗ್ಗ ಮೊ.ಸಂ: 9480241088. ತೀರ್ಥಹಳ್ಳಿ-114 ಮಲ್ಲಪ್ಪ ಕೆ ತೊದಲಬಾಗಿ, ಉಪ ಕಾರ್ಯದರ್ಶಿ-1, ಜಿ.ಪಂ ಶಿವಮೊಗ್ಗ ಮೊ.ಸಂ: 9480876010. ಶಿಕಾರಿಪುರ-115 ನಾಗೇಶ್ ಎ ರಾಯ್ಕರ್, ಉಪ ಕಾರ್ಯದರ್ಶಿ-2, ಜಿ.ಪಂ, ಶಿವಮೊಗ್ಗ ಮೊ.ಸಂ: 9480876001. ಸೊರಬ-116 ಪ್ರವೀಣ್ ಜೈನ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಶಿವಮೊಗ್ಗ ಮೊ.ಸಂ: 7353324771. ಸಾಗರ-117 ಪಲ್ಲವಿ ಸಾಥೇನಹಳ್ಳಿ, ಸಾಗರ ಉಪವಿಭಾಗಾಧಿಕಾರಿ, ಮೊ.ಸಂ: 9480760602.


ವಿವಿಧ ತಂಡಗಳ ರಚನೆ :

ಒಟ್ಟು ಸೆಕ್ಟರ್ ಆಫೀಸರ್-166, ಅಸಿಸ್ಟೆಂಟ್ ಎಕ್ಸ್‍ಪೆಂಡಿಚರ್ ಅಬ್ಸರ್ವರ್-07, ಅಕೌಂಟಿಂಗ್ ಟೀಂ-07, ಫ್ಲೈಯಿಂಗ್ ಸ್ಕ್ವಾಡ್-44, ಸ್ಟಾಟಿಕ್ ಸರ್ವೆಲೆನ್ಸ್ ಟೀಂ-36, ಎಂಸಿಸಿ-07, ವಿಡಿಯೋ ಸರ್ವೆಲೆನ್ಸ್ ಟೀಂ-44, ವಿಡಿಯೋ ವ್ಯೂವಿಂಗ್ ಟೀಂ-07.


ನೋಡಲ್ ಅಧಿಕಾರಿಗಳು:

ಕಾನೂನು ಮತ್ತು ಸುವ್ಯವಸ್ಥೆ, ವಿಎಂ ಮತ್ತು ಸುಭದ್ರತೆ ಯೋಜನೆಗೆ ನೋಡಲ್ ಅಧಿಕಾರಿ ಜಿ.ಕೆ.ಮಿಥನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಮೊ.ಸಂ: 9480803301. ಸ್ವೀಪ್(ಎಸ್‍ವಿಇಇಪಿ) ಮತ್ತು ಎಂಸಿಸಿ ಗೆ ನೋಡಲ್ ಅಧಿಕಾರಿ ಎನ್.ಡಿ.ಪ್ರಕಾಶ್, ಸಿಇಓ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಮೊ.ಸಂ: 9480876000. ಸಾಮಗ್ರಿ ನಿರ್ವಹಣೆಗೆ ಚಿದಾನಂದ ವಟಾರೆ, ಎಚಿಡಿ, ಸ್ಮಾರ್ಟ್‍ಸಿಟಿ, ಶಿವಮೊಗ್ಗ ಮೊ.ಸಂ: 9591419817. ತರಬೇತಿ ನಿರ್ವಹಣೆಗೆ ಶಿವಕುಮಾರ್ ಕೆ.ಹೆಚ್ ಸಿಎಓ, ಸಿಮ್ಸ್, ಶಿವಮೊಗ್ಗ ಮೊ.ಸಂ: 9448357490 ಹಾಗೂ ಜಿ.ಸಿ.ಪೂರ್ಣಿಮ, ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಮೊ.ಸಂ: 8277932600. ವೆಚ್ಚ ಮೇಲ್ವಿಚಾರಣೆಗೆ ಜಿ.ಪ್ರಶಾಂತ ನಾಯಕ್, ಮುಖ್ಯ ಲೆಕ್ಕಾಧಿಕಾರಿ ಜಿ.ಪಂ ಶಿವಮೊಗ್ಗ ಮೊ.ಸಂ: 9480876003. ಇವಿಎಂ ನಿರ್ವಹಣೆಗೆ ನಾರಾಯಣಸ್ವಾಮಿ, ಉಪನಿರ್ದೇಶಕರು ಭೂದಾಖಲೆಗಳು, ಶಿವಮೊಗ್ಗ ಮೊ.ಸಂ: 9448895836. ದೂರು ಪರಿಹಾರ ಮತ್ತು ವೋಟರ್ ಹೆಲ್ಪ್ ಲೈನ್‍ಗೆ ಅವಿನ್ ಆರ್. ಉಪನಿರ್ದೇಶಕರು, ಆಹಾರ ಇಲಾಖೆ ಶಿವಮೊಗ್ಗ, ಮೊ.ಸಂ: 9886907455.ಮ್ಯಾನ್‍ಪವರ್ ಮ್ಯಾನೇಜ್‍ಮೆಂಟ್ ನೋಡಲ್ ಅಧಿಕಾರಿ ಮಹೇಶ್ವರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಶಿವಮೊಗ್ಗ ಮೊ.ಸಂ: 9485963165, ಎನ್.ತಾರಾ, ಸಹಾಯಕ ಯೋಜನಾಧಿಕಾರಿ, ಜಿ.ಪಂ ಶಿವಮೊಗ್ಗ ಮೊ.ಸಂ: 9480876005. ಸಾರಿಗೆ ನಿರ್ವಹಣೆಗೆ ಗಂಗಾಧರ ಜಿ.ಪಿ, ಪ್ರಾದೇಶಿಕ ಸಾರಿಗೆ ಅದಿಕಾರಿ, ಶಿವಮೊಗ್ಗ ಮೊ.ಸಂ: 944864014. ಗಣಕೀಕರಣ, ಸೈಬರ್ ಭದ್ರತೆ & ಐಟಿಗೆ ವೆಂಕಟೇಶ್ ಬೆಣಕಟ್ಟಿ, ಡಿಸ್ಟ್ರಿಕ್ಟ್ ಇನ್‍ಫರ್ಮಾಟಿಕ್ಸ್ ಅಧಿಕಾರಿ ಮೊ.ಸಂ: 9242413050. ಬ್ಯಾಲಟ್ ಪೇಪರ್, ಪೋಸ್ಟಲ್ ಬ್ಯಾಲಟ್, ಇಟಿಪಿಬಿಎಸ್‍ಗೆ ಕರಿಭೀಮಣ್ಣನವರ್, ಪಿಡಿ, ಡಿಯುಡಿಸಿ ಶಿವಮೊಗ್ಗ ಮೊ.ಸಂ: 9980125449. ಮೀಡಿಯಾ ನೋಡಲ್ ಅಧಿಕಾರಿ ಡಿ.ಟಿ.ಮಂಜುನಾಥ, ಉಪನಿರ್ದೇಶಕರು, ಕೃಷಿ ಇಲಾಖೆ ಮೊ.ಸಂ: 8277932601. ಕಮ್ಯುನಿಕೇಷನ್ ಪ್ಲಾನಿಂಗ್‍ಗೆ ಎಸ್.ಜಿ.ಶ್ರೀನಿವಾಸ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮೊ.ಸಂ: 9480843044. ಎಲೆಕ್ಟೊರೊಲ್ ರೋಲ್ ನೋಡಲ್ ಅಧಿಕಾರಿ ರವಿಚಂದ್ರ ನಾಯ್ಕ್, ಉಪವಿಭಾಗಾಧಿಕಾರಿ, ಶಿವಮೊಗ್ಗ ಮೊ.ಸಂ: 9916821123. ಅಬ್ಸರ್ವರ್ಸ್ ನೋಡಲ್ ಅಧಿಕಾರಿ ಸಂಪತ್ ಕುಮಾರ್ ಪಿಂಗಳೆ ಎಂ, ಕಾರ್ಯಪಾಲಕ ಅಭಿಯಂತರ ಪಿಡಬ್ಲ್ಯುಡಿ ಮೊ.ಸಂ: 9986843601.


ಕಂಟ್ರೋಲ್ ರೂಂ ವಿವರ :

ಜಿಲ್ಲೆಯಲ್ಲಿ 1950 ಸಹಾಯವಾಣಿಯೊಂದಿಗೆ ಶಿವಮೊಗ್ಗ ಗ್ರಾಮಾಂತರ -111 ದೂ.ಸಂ: 08182-200508. ಭದ್ರಾವತಿ-112 08282-263466, ಶಿವಮೊಗ್ಗ-113 08182-277906 ತೀರ್ಥಹಳ್ಳಿ-114 ದೂ.ಸಂ: 08181-200925. ಶಿಕಾರಿಪುರ-115 ದೂ.ಸಂ: 08187-222239. ಸೊರಬ-116 ದೂ.ಸಂ: 08184-272241., ಸಾಗರ-117 ದೂ.ಸಂ: 08183-226601.


ಮಸ್ಟರಿಂಗ್, ಡಿಮಸ್ಟರಿಂಗ್ ಮತ್ತು ಮತ ಎಣಿಕೆ ಸ್ಥಳ :

ಶಿವಮೊಗ್ಗ ಗ್ರಾಮಾಂತರ -111 ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹೆಚ್ ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಶಿವಮೊಗ್ಗ. ಭದ್ರಾವತಿ-112 ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜು ಭದ್ರಾವತಿ. ಶಿವಮೊಗ್ಗ-113 ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಶಿವಮೊಗ್ಗ. ತೀರ್ಥಹಳ್ಳಿ-114 ಯುಆರ್ ಅನಂತಮೂರ್ತಿ ಕಾಲೇಜು ತೀರ್ಥಹಳ್ಳಿ. ಶಿಕಾರಿಪುರ-115 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ. ಸೊರಬ-116 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ. ಸಾಗರ-117 ಸರ್ಕಾರಿ ಪದವಿಪೂರ್ವ ಕಾಲೇಜು ಸಾಗರ. ಮತ ಎಣಿಕೆ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ.


ಜಿಲ್ಲೆಯಲ್ಲಿ 2023 ರ ವಿಧಾನಸಭಾ ಚುನಾವಣೆಯನ್ನು ವಿದ್ಯುನ್ಮಾನ ಮತಯಂತ್ರ ಬಳಸಿ ನಿರ್ವಹಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 3350 ಬ್ಯಾಲೆಟ್ ಯೂನಿಟ್‍ಗಳು, 2352 ಕಂಟ್ರೋಲ್ ಯುನಿಟ್ ಹಾಗೂ 2417 ವಿವಿ ಪ್ಯಾಟ್ (VVPATs) ಲಭ್ಯವಿರುತ್ತದೆ.


ಜಿಲ್ಲೆಯಲ್ಲಿ ಚುನಾವಣಾ ದಿನದಂದು ಚುನಾವಣಾ ಕಾರ್ಯ ನಿರ್ವಹಿಸಲು 8520 ಅಧಿಕಾರಿ/ಸಿಬ್ಬಂದಿಗಳ ಅವಶ್ಯಕತೆ ಇದ್ದು ಈಗಾಗಲೇ 10700 ಸಿಬ್ಬಂದಿಗಳ ಮಾಹಿತಿ ಸಂಗ್ರಹಿಸಲಾಗಿದೆ.
ಉಮೇದುವಾರಿಕೆ ಸಲ್ಲಿಕೆಯ ಅವಧಿಯವರೆಗೆ ಅಂದರೆ ಏಪ್ರಿಲ್ 20 ರವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಹಾಗೂ ನಮೂನೆ 8 ರಲ್ಲಿ ತಿದ್ದುಪಡಿಗೆ ಅವಕಾಶವಿರುತ್ತದೆ.


ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 36 ಕಡೆ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿದ್ದು, 7 ಚೆಕ್‍ಪೋಸ್ಟ್ ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಚುನಾವಣೆಗೆ 6 ಸಿ.ಆರ್‍.ಪಿ.ಎಫ್ ತಂಡಗಳು ಬರಲಿವೆ. ಸ್ಟ್ರಾಂಗ್ ರೂಂ, ಮತ ಎಣಿಕೆ ಕೇಂದ್ರಗಳಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ 55 ಜನರಿಗೆ ಗಡೀಪಾರು ಆದೇಶ ಮತ್ತು ಕಳೆದ 5-6 ತಿಂಗಳಿಂದ 6 ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆಗೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ವಹಿಸಲಾಗಿದೆ ಎಂದರು.


ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದರ್ ಹಾಜರಿದ್ದರು.

Malnad Times

Recent Posts

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

1 hour ago

Rain Alert | ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…

2 hours ago

ಕಾಫಿನಾಡಿನಲ್ಲಿ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಸುರಿದ ಭಾರಿ ಮಳೆ

ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬೇಸಿಗೆಯ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಭಾರಿ…

3 hours ago

ಪತಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಹಿಳೆ !

ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…

13 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ | ಶೇ. 78.24 ಮತದಾನ

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ…

14 hours ago

Accident | ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಸಾವು !

ಶಿವಮೊಗ್ಗ : ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…

16 hours ago