Categories: Shivamogga

03 ತಂಡಳಿಂದ ಪ್ರತ್ಯೇಕ ದಾಳಿ ; ಮರಳು ಮತ್ತು ಕಲ್ಲು ತುಂಬಿದ್ದ 13 ವಾಹನಗಳು ವಶಕ್ಕೆ !

ಶಿವಮೊಗ್ಗ : ಡಿಸಿ ಡಾ. ಸೆಲ್ಬಮಣಿ ಆರ್ ಮತ್ತು ಎಸ್ಪಿ ಮಿಥುನ್ ಕುಮಾರ್ ಜಿ.ಕೆ‌ ಇವರ ಸೂಚನೆಯ ಮೇರೆಗೆ, ಗಜಾನನ ವಾಮನ ಸುತರ ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪ ವಿಭಾಗ ಮತ್ತು ಅಮೃತ್ ಅತ್ರೇಶ್, ತಹಸಿಲ್ದಾರ್, ತೀರ್ಥಹಳ್ಳಿ, ತಾಲ್ಲೂಕು ರವರ ಮಾರ್ಗದರ್ಶನದಲ್ಲಿ 03 ತಂಡಗಳು ಪ್ರತ್ಯೇಕ ದಾಳಿ ನಡೆಸಿ, ಒಟ್ಟು 11 ಮರಳು ತುಂಬಿದ ಮತ್ತು 02 ಜಲ್ಲಿಕಲ್ಲು ತುಂಬಿದ್ದ ಒಟ್ಟು 13 ವಾಹನಗಳನ್ನು ವಶಕ್ಕೆ ಪಡೆದು, ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ತಂಡ-1: ಪ್ರವೀಣ್ ನೀಲಮ್ಮ ನವರ್, ಪೊಲೀಸ್ ವೃತ್ತ ನಿರೀಕ್ಷಕರು, ಮಾಳೂರು ವೃತ್ತ ರವರ ಮೇಲ್ವಿಚಾರಣೆಯಲ್ಲಿ, ಶಿವಕುಮಾರ್, ಪೊಲೀಸ್ ಉಪ ನಿರೀಕ್ಷಕರು, ಆಗುಂಬೆ ಪೊಲೀಸ್ ಠಾಣೆ, ಯಶವಂತ್, ಆರ್.ಐ ಮೇಘರವಳ್ಳಿ, ಕುಮಾರ್, ಪಿಡಿಓ ಹೊನ್ನೆತಾಳು ರವರ ನೇತೃತ್ವದ ತಂಡವು, ಅರೇಹಳ್ಳಿ, ಮಳಲೂರು, ಬಗ್ಗೋಡಿಗೆ ಮತ್ತು ಆಗುಂಬೆಯಲ್ಲಿ ಜಂಟಿ ದಾಳಿ ನಡೆಸಿ 03 ಮರಳು ತುಂಬಿದ ಮತ್ತು 02 ಜಲ್ಲಿಕಲ್ಲು ತುಂಬಿದ್ದ ಒಟ್ಟು 05 ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ‌.

ತಂಡ-2: ಪ್ರವೀಣ್ ನೀಲಮ್ಮನವತ್ ವೃತ್ತ ನಿರೀಕ್ಷಕರು, ಮಾಳೂರು ವೃತ್ತ ರವರ ಮೇಲ್ವಿಚಾರಣೆಯಲ್ಲಿ, ನವೀನ್ ಮಠಪತಿ ಮತ್ತು ಶಿವಾನಂದ್ ಡಿ, ಪೊಲೀಸ್ ಉಪ ನಿರೀಕ್ಷಕರು, ಮಾಳೂರು ಪೊಲೀಸ್ ಠಾಣೆ, ಸುಗುಣೇಶ್, ಆರ್.ಐ ಮತ್ತೂರು, ಸುರೇಶ್, ಪಿಡಿಓ ಕನ್ನಂಗಿ ರವರ ನೇತೃತ್ವದ ತಂಡವು, ಜಂಟಿ ದಾಳಿ ನಡೆಸಿ ಮುಡುಬಾದ ಬಳಿ 07 ಮರಳು ತುಂಬಿದ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.

ತಂಡ-3: ಅಶ್ವತ್ ಗೌಡ, ಪೊಲೀಸ್ ನಿರೀಕ್ಷಕರು, ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ಮೇಲ್ವಿಚಾರಣೆಯಲ್ಲಿ, ಸಾಗರ್ ಅತರವಾಲ, ಪೊಲೀಸ್ ಉಪ ನಿರೀಕ್ಷಕರು, ತೀರ್ಥಹಳ್ಳಿ, ಮೌನೀಶ್, ವಿಎ, ಕುರುವಳ್ಳಿ ವೃತ್ತ, ಸಿದ್ದಾರೂಡ, ವಿಎ, ಆರಗ ವೃತ್ತ ಮತ್ತು ರೇಣುಕಾರಾಧ್ಯ, ಪಿಡಿಓ, ದೇವಂಗಿ ರವರ ನೇತೃತ್ವದ ತಂಡವು, ಜಂಟಿ ದಾಳಿ ನಡೆಸಿ ಬುಕ್ಲಾಪುರದ ಹತ್ತಿರ ಮರಳು ತುಂಬಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Malnad Times

Recent Posts

Rain Alert | ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಮೇ 7ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ…

1 hour ago

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ನದಿಯಲ್ಲಿ ಮುಳುಗಿ ಸಾವು !

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ ನದಿಯಲ್ಲಿ ಮುಳುಗಿ ಸಾವು ! ಕಳಸ : ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿಯೊಬ್ಬಳು ಸ್ನಾನ…

4 hours ago

ತನ್ನೊಂದಿಗೆ ಚರ್ಚೆಗೆ ಬರುವಂತೆ ಅಣ್ಣಾಮಲೈಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್ !

ಶಿವಮೊಗ್ಗ : ಗ್ಯಾರಂಟಿ ಯೋಜನೆಯ ಮೂಲಕ ಕೋಟ್ಯಂತರ ಬಡವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ಸಿನ ಐತಿಹಾಸಿಕ ಕೊಡುಗೆಯಾಗಿದೆ. ಈ…

12 hours ago

ಮತದಾನದಲ್ಲೂ ಶಿವಮೊಗ್ಗ ಎತ್ತರಕ್ಕೇರಲಿ ; ಸ್ನೇಹಲ್ ಸುಧಾಕರ್ ಲೋಖಂಡೆ

ಶಿವಮೊಗ್ಗ : ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಮತದಾನ ಪ್ರಮಾಣ ಏರ್ ಬಲೂನ್ ರೀತಿಯಲ್ಲಿ ಆಕಾಶದ ಎತ್ತರಕ್ಕೆ ಏರಲಿ ಎಂದು ಜಿಲ್ಲಾ…

13 hours ago

ಹೃದಯಾಘಾತ ; ಮಮತಾ ನಿಧನ

ಹೊಸನಗರ : ಪಟ್ಟಣದ ಮಾರಿಗುಡ್ಡ ನಿವಾಸಿ ಮಮತಾ ಚಂದ್ರಶೇಖರ್ (43) ಶನಿವಾರ ಬೆಳಿಗ್ಗೆ ತಮ್ಮ ಸ್ವಂತ ಮನೆಯಲ್ಲಿ ಹೃದಯಘಾತದಿಂದ ನಿಧನರಾದರು.…

13 hours ago

ಶ್ರೀಮನ್ಮಹಾರಥೋತ್ಸವ ಜಾತ್ರೋತ್ಸವ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಹಾಗೂ ಜಾತ್ರೋತ್ಸವವು…

14 hours ago