Accident | Shivamogga | ಬಸ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಚಾಲಕ ಸೇರಿ 5 ಮಂದಿ ಸಾವಿನ ಶಂಕೆ ; 50 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ !

0 44

ಶಿವಮೊಗ್ಗ : ಜಿಲ್ಲೆಯ ಚೋರಡಿ ಬಳಿ ಎರಡು ಖಾಸಗಿ ಬಸ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿ 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಇದುವರೆಗೂ ಐವರು ಸಾವನ್ನಪ್ಪಿರುವ ಸಾಧ್ಯತೆ ಇದ್ದು ಸಾವಿನ ಸಂಖ್ಯೆ ಇನ್ನಷ್ಟು ಜಾಸ್ತಿ ಆಗುವ ಸಂಭವವಿದೆ.

ಘಟನೆಯಲ್ಲಿ ಹಲವರು ಇನ್ನೂ ಬಸ್ಸಿನಲ್ಲಿಯೇ ಸಿಲುಕಿದ್ದು ಅವರನ್ನ ರಕ್ಷಿಸುವ ಕಾರ್ಯಚರಣೆ ಮುಂದುವರೆದಿದೆ ಸ್ಥಳಕ್ಕೆ ಅಂಬುಲೆನ್ಸ್ ಗಳು ದೌಡಾಯಿಸಿವೆ. ಗಾಯಾಳುಗಳನ್ನ ಶಿವಮೊಗ್ಗದ ವಿವಿಧ ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೀಡು ಬಿಟ್ಟಿದ್ದು ರಕ್ಷಣಾ ಕಾರ್ಯಕರ್ತರಲ್ಲಿ ತೊಡಗಿದ್ದಾರೆ. ಬಸ್‌ಗಳನ್ನು ಬೇರ್ಪಡಿಸಲು ಜೆಸಿಬಿಯನ್ನ ಬಳಸಿಕೊಳ್ಳಲಾಗುತ್ತಿದೆ.

ಕುಂಸಿ ಠಾಣೆಯ ಪೊಲೀಸರು ಸ್ಥಳದಲ್ಲಿದ್ದು ಸ್ಥಳೀಯರ ಸಹಾಯದೊಂದಿಗೆ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸುತ್ತಿದ್ದಾರೆ ಘಟನೆಯಿಂದಾಗಿ ಸಾಗರ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಎರಡು ಬಸ್‌ಗಳು ಶಿಕಾರಿಪುರ ಶಿವಮೊಗ್ಗದ ನಡುವೆ ಸಂಚರಿಸುವ ಬಸ್‌ಗಳಾಗಿದ್ದು ಒಂದು ಬಸ್‌ನ ಚಾಲಕ ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಕುಮದ್ವತಿ ಸೇತುವೆ ಬಳಿಯಲ್ಲಿ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.

Leave A Reply

Your email address will not be published.

error: Content is protected !!