Hosanagara | ಆಯುಧ ಪೂಜೆಯ ಸಂಭ್ರಮ
ಹೊಸನಗರ: ನವರಾತ್ರಿ 9ನೇ ದಿನವಾದ ಇಂದು ಮಹಾನವಮಿ ಮತ್ತು ಆಯುಧ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸರ್ಕಾರಿ ಹಾಗೂ ಖಾಸಗಿ ವಾಹನಗಳನ್ನು ಚೆಂಡು ಹೂಗಳಿಂದ ಅಲಂಕರಿಸಿ ಕುಂಬಳಕಾಯಿಯನ್ನು ನಿವಾಳಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ ಜಯನಗರ ಚಾಮುಂಡಿ ಬೆಟ್ಟದಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಚಂಡಿಕಾ ಹೋಮ ನಡೆಸುವ ಮೂಲಕ ನವರಾತ್ರಿಯ 9 ದಿನಗಳ ಕಾಲ ಅನ್ನಸಂತರ್ಪಣೆ ನಡೆಸುವ ಮೂಲಕ ಭಕ್ತವೃಂದವನ್ನು ಚಾಮುಂಡಿ ತಾಯಿ ತನ್ನ ಸನ್ನಿಧಾನಕ್ಕೆ ಬರುವಂತೆ ಮಾಡಿದ್ದಾರೆ.