MAMCOS ನಿಂದ ಅಭಿರಕ್ಷೆ ಯೋಜನೆಯಡಿ ₹ 1.49 ಲಕ್ಷ ಪರಿಹಾರದ ಚೆಕ್ ವಿತರಣೆ


ಹೊಸನಗರ: ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ಶಿವಮೊಗ್ಗ ಇದರ ಷೇರುದಾರರಿಗೆ ಹಾಗೂ ಸಂಘದ ಸದಸ್ಯರಿಗೆ ಶೇ. 60 ಲಾಭಾಂಶ ನೀಡುತ್ತಿದ್ದು ಇದರ ಉಪಯೋಗವನ್ನು ಎಲ್ಲ ರೈತರು ಉಪಯೋಗ ಪಡಿಸಿಕೊಳ್ಳಬೇಕೆಂದು ಮಾಮ್ ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ಹೇಳಿದರು.

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ಹೊಸನಗರ ಶಾಖೆ ವತಿಯಿಂದ ಸಂಘದ ಆವರಣದಲ್ಲಿ ಕೂಲಿ ಕಾರ್ಮಿಕರಾದ ಸೋಮಶೇಖರ ಎಂ.ಡಿ ಎಂಬುವವರು ಮಾಮ್ ಕೋಸ್ ಷೇರುದಾರರಾದ ಗವಟೂರು ಗ್ರಾಮದ ಮಹೇಂದ್ರ ಎಂಬುವವರ ತೋಟದಲ್ಲಿ ಅಡಿಕೆ ಮರಕ್ಕೆ ಔಷಧಿ ಹೊಡೆಯುವ ಸಂದರ್ಭದಲ್ಲಿ ಮರದಿದ್ದ ಕೆಳಗೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆ ವೆಚ್ಚ ನೀಡಬೇಕೆಂದು ಸಂಘಕ್ಕೆ ಮಹೇಂದ್ರ ಅರ್ಜಿ ಸಲ್ಲಿಸಿದ್ದು ಸಂಘದ ಗುಂಪು ವಿಮಾ ಅಭಿರಕ್ಷೆ ಯೋಜನೆಯಡಿಯಲ್ಲಿ ದಿ ನ್ಯೂ ಇಂಡಿಯ ಇಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ ವತಿಯಿಂದ ಮಂಜೂರಾದ 1,49,178 ರೂ. ಮೊತ್ತದ ಪರಿಹಾರದ ಚೆಕ್‌ನ್ನು ವಿತರಿಸಿ ಅವರು ಮಾತನಾಡಿದರು.

ಅಡಿಕೆ ವ್ಯಾಪಾರಿಗಳು ಕೆಲವು ಆಸೆ ಆಮಿಷಗಳಿಗೆ ಬಲಿಯಾಗಿ ತಾವು ಬೆಳೆದ ಅಡಿಕೆಯನ್ನು ಬೇರೆ-ಬೇರೆ ಕಡೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಅವರು ಕೆ.ಜಿಯ ಮೇಲೆ ಹೆಚ್ಚು ಬೆಲೆ ನೀಡಿ ಕೊಂಡುಕೊಳ್ಳಬಹುದು ಆದರೆ ನಮ್ಮ ಸಂಘದಲ್ಲಿ ನೀವು ಷೇರುದಾರರಾಗಿದ್ದಲ್ಲಿ ನಮ್ಮ ಸಂಸ್ಥೆ ಲಾಭಾಂಶದಲ್ಲಿ ಹೆಚ್ಚು ಕಡಿಮೆ 60% ಲಾಭಾಂಶ ನೀಡುತ್ತಾ ಬರುತ್ತಿದ್ದು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ನೀಡಲು ನಮ್ಮ ಸಂಸ್ಥೆ ಯೋಚಿಸಿದ್ದು ಹೊಸನಗರ ತಾಲ್ಲೂಕಿನ ಅಡಿಕೆ ವ್ಯಾಪಾರಿಗಳು ನಮ್ಮ ಸಂಘದ ಸದಸ್ಯತ್ವ ಪಡೆದು ಸೌಲಭ್ಯವನ್ನು ಪಡೆಯುವಂತಾಗಲಿ ಎಂದರು.

ಈ ಚೆಕ್ ವಿತರಿಸುವ ಸಂಧರ್ಭದಲ್ಲಿ ನಿರ್ದೇಶಕರಾದ ಹೆಚ್.ಟಿ ಸುಬ್ರಹ್ಮಣ್ಯರವರು ಮಾತನಾಡಿ, ನಮ್ಮ ಸಂಘಕ್ಕೆ ಕನಿಷ್ಠ 65 ಕೆ.ಜಿ ಯಷ್ಟು ಅಡಿಕೆ ಹಾಕಿದರೆ ನಮ್ಮ ಸಂಸ್ಥೆಯಲ್ಲಿ ರೈತರಿಗೆ ಎಲ್ಲ ಸೌಲಭ್ಯಗಳು ಸಿಗಲಿದ್ದು ರೈತರು ನಮ್ಮ ಸಂಘದ ಸದಸ್ಯರಾಗಿ ಎಂದರು.

ಮಲೆನಾಡು ಅಡಿಕೆ ಮಾರಾಟಗಾರದ ಸಹಕಾರ ಸಂಘದ ವ್ಯವಸ್ಥಾಪಕರಾದ ಮುರುಗೇಶ್, ದೊಡ್ಡರಾಜಪ್ಪ ಗೌಡ, ಗೋಪಾಲ್, ಶಾಂತ, ರಾಘವೇಂದ್ರ ಕೆ, ಚೇತನ್ ಟಿ.ಕೆ, ದಿವ್ಯಾ, ವಾಣಿಶ್ರೀ, ನಾಗೇಂದ್ರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

9 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

13 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

13 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

15 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

16 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

23 hours ago