ರಿಪ್ಪನ್ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸೇವಾ ಸಮಿತಿಯ 56ನೇ ವರ್ಷ
ಗಣೇಶೋತ್ಸವ ಸಮತಿಯವರು ಪ್ರತಿಷ್ಟಾಪಿಸಲಾಗಿರುವ ಗಣಪತಿ ಸನ್ನಿಧಿಯಲ್ಲಿ ಸಮಾಜ ಸೇವಕರಾದ ನಿವೃತ್ತ ನೌಕರ ಹಾಸ್ಟೆಲ್ ಮಂಜುನಾಥ ಮತ್ತು ಅನಾಥ ಶವಗಳ ಸಂಸ್ಕಾರವನ್ನು ನಿರ್ವಹಿಸುವ ರವಿಶೆಟ್ಟಿ ಇವರನ್ನು ಸೇವಾ ಸಮಿತಿಯವರು ಸನ್ಮಾನಿಸಿ ಗೌರವಿಸಿದರು.
ನಿವೃತ್ತ ನೌಕರ ಮಂಜುನಾಥ ಇವರು ಮುಕ್ತಿವಾಹಿನಿಯನ್ನು ಕೊಡುಗೆಯಾಗಿ ನೀಡುವುದರೊಂದಿಗೆ ಮೃತರಾದವರನ್ನು ರುದ್ರಭೂಮಿಯವರೆಗೆ ಶವ ಸಾಗಿಸುವ ಮೂಲಕ ಸಂಸ್ಕಾರಕ್ಕೆ ವಾಹನವನ್ನು ಲೋಕಾರ್ಪಣೆ ಮಾಡಿರುವುದು ಮತ್ತು ಸಾರ್ವಜನಿಕವಾಗಿ ಜಾತಿ ಬೇಧ-ಭಾವನೆಯಿಲ್ಲದೆ ಮೃತರ ಶವವನ್ನು ಸಂಸ್ಕಾರ ಮಾಡುವ ಕಾಯಕದೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೇ ಇದರಿಂದ ನೆಮ್ಮದಿಯನ್ನು ಕಾಣುತ್ತಿರುವ ಸಮಾಜ ಸೇವಕರನ್ನು ಸಮಿತಿ ಗುರುತಿಸಿ ಸನ್ಮಾನಿಸಿರುವುದನ್ನು ತಿಲಕ್ರಸ್ತೆ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ದೇವಸ್ಥಾನ ಸಮಿತಿಯವರು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಸೇವಾ ಸಮಿತಿಯ ಅಧ್ಯಕ್ಷ ನಾಗರಾಜ್ ಪವಾರ್, ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ, ಎಂ.ಬಿ.ಮಂಜುನಾಥ, ಸುರೇಶ್ಸಿಂಗ್, ವೈ.ಜೆ.ಕೃಷ್ಣ, ನಾಗರಾಜ ಕೆದಲುಗುಡ್ಡೆ,ಯೋಗೀಶ್,ಎಸ್.ದಾನಪ್ಪ, ಸುದೀಂದ್ರಪೂಜಾರಿ, ರವೀಂದ್ರ ಕೆರೆಹಳ್ಳಿ, ಹೆಚ್.ಎನ್.ಉಮೇಶ್, ಬಿ.ಎಸ್.ಎನ್.ಎಲ್.ಶ್ರೀಧರ, ಡಿ.ಈ.ರವಿಭೂಷಣ, ಆರ್.ರಾಘವೇಂದ್ರ ಇನ್ನಿತರರು ಹಾಜರಿದ್ದರು.
ನಿಧನವಾರ್ತೆ
ರಿಪ್ಪನ್ಪೇಟೆ: ಇಲ್ಲಿನ ಬರುವೆ ಗ್ರಾಮದ ಅಡಿಕಟ್ಟು ನಿವಾಸಿ ನಿವೃತ್ತ ವಲಯ ಆರಣ್ಯಾಧಿಕಾರಿ ಮಂಜಪ್ಪ ಅಡಿಕಟ್ಟು (86) ನಿಧನರಾದರು.
ಮೃತರಿಗೆ ಪತ್ನಿ, ಪುತ್ರಿ, ಪುತ್ರ ಇದ್ದು ಮೃತರ ಅಂತ್ಯಸಂಸ್ಕಾರ ಹಿಂದೂ ರುದ್ರಭೂಮಿಯಲ್ಲಿ ಜರುಗಿತು.
ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ…
ಶಿವಮೊಗ್ಗ : ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…
ಹೊಸನಗರ: ಪಟ್ಟಣದ ಹೈಸ್ಕೂಲ್ನಲ್ಲಿನ ಮತಗಟ್ಟೆ ಸಂಖ್ಯೆ 258 ರಲ್ಲಿ ಅಲ್ಪ ಸಮಯದ ಕಾಲ ಇ.ವಿ.ಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡ…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದ್ದು ಸಂಜೆ 5:00 ಗಂಟೆವರೆಗೆ ಶೇ. 72.36 ಮತ ಚಲಾವಣೆಯಾಗಿದೆ.…
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು ಬಿಸಿಲು ಝಳಕ್ಕೆ ಬೆದರಿ ಮತದಾರರು ಬೆಳಗ್ಗೆಯೇ ಮತಗಟ್ಟೆಗಳತ್ತ…