ಶಿವಮೊಗ್ಗ ; ದಸರಾ-ಜಂಬೂ ಸವಾರಿಗೆ ಬಂದ ಆನೆಯೊಂದು ಮರಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ.
ನೇತ್ರಾವತಿ ಎಂಬ ಆನೆ ಶಿವಮೊಗ್ಗ ನಗರದ ವಾಸವಿ ಶಾಲೆ ಆವರಣದಲ್ಲಿ ಮರಿಯಾನೆಗೆ ಜನ್ಮ ನೀಡಿದೆ.
ನಿನ್ನೆ ರಾತ್ರಿ ವೇಳೆ ಹೆಣ್ಣು ಮರಿಗೆ ಜನ್ಮ ನೀಡದ್ದು, ಶಿವಮೊಗ್ಗದ ಜಂಬೂಸವಾರಿಗೆಂದು ನೇತ್ರಾವತಿಯನ್ನು ಕರೆತರವಾಗಿತ್ತು. ಅಂಬಾರಿ ಹೊರುವ ಸಾಗರ್ ಆನೆ ಜೊತೆಗೆ ಕುಮ್ಕಿ ಆನೆಗಳಾಗಿ ನೇತ್ರಾವತಿ ಹಾಗೂ ಹೇಮಾವತಿ ಆನೆ ತರಲಾಗಿತ್ತು.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://fb.watch/nT3BX-qI5c/?mibextid=ZbWKwL
ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಿಂದ ಕರೆತಂದಿದ್ದ ಈ ಮೂರು ಆನೆಗಳು ಕಳೆದ 4 ನಾಲ್ಕು ದಿನದಿಂದ ನಿರಂತರ ತಾಲೀಮು ನಡೆಸಿದ್ದವು. ನಿನ್ನೆ ಸಂಜೆ ಕೂಡ ತಾಲೀಮು ಪ್ರಕ್ರಿಯೆಯಲ್ಲಿ ನೇತ್ರಾವತಿ ಆನೆ ಭಾಗಿಯಾಗಿತ್ತು.
ರಾತ್ರಿ ವೇಳೆ ಏಕಾಏಕಿ ಹೆಣ್ಣು ಮರಿಗೆ ಜನ್ಮ ನೀಡಿದ್ದು ಮರಿ ಹಾಗೂ ನೇತ್ರಾವತಿ ಆನೆಯನ್ನು ಆರೈಕೆಯನ್ನು ಹೇಮಾವತಿ ಆನೆ ಮಾಡುತ್ತಿದೆ.
ಸ್ಥಳಕ್ಕೆ ಡಿಎಫ್ಓ ಪ್ರಸನ್ನ ಪಟಗಾರ್, ವನ್ಯಜೀವಿ ವೈದ್ಯ ಡಾ. ವಿನಯ್ ಭೇಟಿ ನೀಡಿದ್ದಾರೆ. ಪ್ರೆಗ್ನೆನ್ಸಿ ಟೆಸ್ಟ್ ವೇಳೆ ನೆಗೆಟಿವ್ ಕಂಡು ಬಂದಿದ್ದರಿಂದ ಜಂಬೂ ಸವಾರಿಗೆ ಆಯ್ಕೆ ಮಾಡಲಾಗಿತ್ತು.
ಮೈಸೂರು ದಸರಾಗೆ ಆನೆ ಆಯ್ಕೆ ವೇಳೆ ಸಕ್ರೇಬೈಲಿನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ನಡೆಸಲಾಗಿತ್ತು. ಶಿವಮೊಗ್ಗ ದಸರಾ ಕಾರಣಕ್ಕಾಗಿಯೇ ಮೈಸೂರು ದಸರಾಗೆ ನೇತ್ರಾವತಿ ಆನೆ ಕಳಿಸಲು ನಿರಾಕರಿಸಲಾಗಿತ್ತು. ಸದ್ಯ ನೇತ್ರಾ ಆನೆಯನ್ನು ಸಕ್ರೆಬೈಲಿನ ಆನೆ ಬಿಡಾರಕ್ಕೆ ಶಿಫ್ಟ್ ಮಾಡಲಾಗಿದೆ.
ಇನ್ನೂ ಎರಡು ಆನೆಗಳು ಮಾತ್ರ ದಸರಾ ಮೆರವಣಿಗೆಯಲ್ಲಿ ಭಾಗವಹಿಸುತ್ತಿದೆ. ಸಾಗರ್ ಆನೆ ಅಂಬಾರಿ ಹೊರಲು ಬರುವುದಿಲ್ಲ ಎಂದು ತಿಳಿದುಬಂದಿದೆ. ಅಲಂಕೃತ ವಾಹನದಲ್ಲಿ ಈ ಬಾರಿ ದೇವಿಯ ಅಂಬಾರಿ ಸಾಗಲಿದೆ.
ರಿಪ್ಪನ್ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…
ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…
ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ನಗರದ ಫ್ರೀಡಂ ಪಾರ್ಕ್ನಲ್ಲಿ ಗೀತಾಶಿವರಾಜ್ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…
ರಿಪ್ಪನ್ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…
ಶೃಂಗೇರಿ : ಇಂದು ನಡೆದ ಮತದಾನದಲ್ಲಿ ತಾಲೂಕಿನ ಕೂತಗೋಡಿನಲ್ಲಿ ಹಸೆಮಣೆ ಏರುವ ಮುನ್ನ ಯುವತಿಯೊಬ್ಬಳು ಮತ ಚಲಾಯಿಸಲು ಅಲಂಕಾರಗೊಂಡೆ ಮತಗಟ್ಟೆಗೆ…