ಶ್ರೀ ಕ್ಷೇತ್ರ ಮೃಗವಧೆಯಲ್ಲಿ ಅದ್ಧೂರಿ ರಥೋತ್ಸವ: ಕಣ್ತುಂಬಿಕೊಂಡ ಸಾವಿರಾರು ಭಕ್ತಾಧಿಗಳು

0 84

ತೀರ್ಥಹಳ್ಳಿ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಮೃಗವಧೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ವೈಭವದ ರಥೋತ್ಸವ ಜರುಗಿತು.

ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಮಧ್ಯಾಹ್ನದ ಹೊತ್ತಿಗೆ ನಡೆದ ರಥೋತ್ಸವವನ್ನು ಉರಿ ಬಿಸಿಲಿನಲ್ಲಿ ನಿಂತು ಕಂಣ್ತುಂಬಿ ಕೊಂಡರು. ತಾವೇ ಬೆಳೆದ ಅಕ್ಕಿ,ಅಡಿಕೆ, ಕಾಳುಮೆಣಸು, ಏಲಕ್ಕಿ ಸೇರಿದಂತೆ ಅನೇಕ ಧವಸ ಧಾನ್ಯಗಳನ್ನು ರಥಕ್ಕೆ ಎಸೆಯುವುದರ ಮೂಲಕ ಸುತ್ತಮುತ್ತಲಿನ ಊರಿನ ಗ್ರಾಮಸ್ಥರು ಸಂಭ್ರಮಿಸಿದರು.

ರಥವನ್ನು ಎಳೆದ ನಂತರ ಎರಡು ಸಾವಿರಕ್ಕೂ ಅಧಿಕ ಮಂದಿ ಭಕ್ತಾಧಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

Leave A Reply

Your email address will not be published.

error: Content is protected !!