ಭದ್ರಾವತಿ

ರಿಪ್ಪನ್‌ಪೇಟೆಯಲ್ಲಿ 58ನೇ ವರ್ಷದ ಗಣೇಶೋತ್ಸವ ; ಈ ಬಾರಿ ಏನೆಲ್ಲಾ ಕಾರ್ಯಕ್ರಮಗಳಿವೆ?

ರಿಪ್ಪನ್‌ಪೇಟೆ ; ಇದೇ ಆಗಸ್ಟ್ 27 ರಿಂದ ಸೆಪ್ಟೆಂಬರ್ 6ರ ವರೆಗೆ 11 ದಿನಗಳ ಕಾಲ ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿಯವರ 58ನೇ ವರ್ಷದ ಗಣಪತಿ ಪ್ರತಿಷ್ಟಾಪನಾ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮವನ್ನು ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸುಧೀರ್ ಪಿ ಮತ್ತು ಪ್ರಧಾನ ಕಾರ್ಯದರ್ಶಿ ಮುರುಳಿಧರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಕಾರ್ಯಕ್ರಮಗಳು :

  • ಆ. 27 ರಂದು ಬುಧವಾರ ಮಧ್ಯಾಹ್ನ 11.30ಕ್ಕೆ ಗಣಪತಿ ಪ್ರತಿಷ್ಟಾಪನಾ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ
  • ಆ. 28 ರಂದು ಗುರುವಾರ ಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಸ್ಥಳೀಯ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
  • ಆ. 29 ರಂದು ಶುಕ್ರವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಗವಟೂರು ಶ್ರೀರಾಮೇಶ್ವರ ಕಲಾ ತಂಡದವರಿಂದ ಮನರಂಜನಾ ಕಾರ್ಯಕ್ರಮ.
  • ಆ.30 ರಂದು ಶನಿವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಬಟ್ಟೆಮಲ್ಲಪ್ಪ ತೀರ್ಥಕುಮಾರ್ ಶಿಕ್ಷಕರ ಸಾರಥ್ಯದಲ್ಲಿ ಹಂಸವೇಣಿ ಕಲಾ ತಂಡ ಇವರಿಂದ ರಸಮಂಜರಿ ಕಾರ್ಯಕ್ರಮ.
  • ಆ. 31 ರಂದು ಭಾನುವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಕೊಪ್ಪ-ಹೊಸನಗರ ಡೆಸ್ಟಿನಿ ಸ್ಕೂಲ್ ಆಫ್ ಡ್ಯಾನ್ಸ್ ವಿದ್ಯಾರ್ಥಿಗಳಿಂದ ನೃತ್ಯ ರೂಪಕ.
  • ಸೆ.1 ರಂದು ಸೋಮವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಹೆಸರಾಂತ ಜಾನಪದ ಕಲಾ ತಂಡಗಳಾದ ಬೇಸೂರು ಶ್ರೀ ಬಸವೇಶ್ವರ ಗೆಳೆಯರ ಬಳಗ ಮತ್ತು ಹುಂಚ ಶ್ರೀಮಾರಿಕಾಂಬ ಗೆಳೆಯರ ಬಳಗ ಇವರಿಂದ ಬೆಳ್ಳಿ ಬಳೆ ಕೋಲಾಟ ಸ್ಪರ್ಧೆ.
  • ಸೆ. 2 ರಂದು  ಮಂಗಳವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ  ಶ್ರೀ ಶಾರದಾಂಬ ಸಾಂಸ್ಕೃತಿಕ ಕಲಾ ಕೇಂದ್ರ ವಿದ್ಯಾರ್ಥಿಗಳಿಂದ ಭರತನಾಟ್ಯ.
  • ಸೆ. 3 ರಂದು ಬುಧವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಕುಂದಾಪುರದ ಮನು ಹಂದಾಡಿ ಕಲಾ ತಂಡದವರಿಂದ ನಗೆ ಒಡ್ಡೋಲಗ ಹಾಸ್ಯ ಕಾರ್ಯಕ್ರಮ.
  • ಸೆ. 4 ರಂದು ಗುರುವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ  ಕೋಟೇಶ್ವರ ಕಲಾ ಚಂದನ ನಾಟಕ ತಂಡದವರಿಂದ ಲಾಸ್ಟ್ ವಾರ್ನಿಂಗ್ ಹಾಸ್ಯಮಯ ನಾಟಕ ಪ್ರದರ್ಶನ.
  • ಸೆ.5 ರಂದು ಶುಕ್ರವಾರ ಶ್ರೀಗಣಪತಿ ಸನ್ನಿಧಿಯಲ್ಲಿ ರಾತ್ರಿ 8 ಗಂಟೆಗೆ ಮಂಗಳೂರಿನ ಅರೆಹೊಳೆ ಪ್ರತಿಷ್ಟಾನ ನಂದಗೋಕುಲ ಕಲಾವಿದರುಗಳ ತಂಡದಿಂದ ನೃತ್ಯ ವೈಭವ ಕಾರ್ಯಕ್ರಮ.
  • ಸೆ. 6 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ  ಶ್ರೀಗಣಪತಿ ವಿಸರ್ಜನಾ ಪೂಜೆ ನಂತರ ಮಧ್ಯಾಹ್ನ 4 ಗಂಟೆಗೆ ರಾಜಬೀದಿ ಉತ್ಸವ ಜರುಗಲಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>