ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಬೆಂಗಳೂರು–ತಾಳಗುಪ್ಪ ಇಂಟರ್‌ಸಿಟಿ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಹೊಸ ನಿಲುಗಡೆ ಅ.6, ಸೋಮವಾರದಿಂದ ಜಾರಿಗೆ ಬರುವುದಾಗಿ ರೈಲ್ವೆ ಇಲಾಖೆಯು ತಿಳಿಸಿದೆ. ಬೆಂಗಳೂರಿನಿಂದ ಮಧ್ಯಾಹ್ನ ಹೊರಡುವ ರೈಲು ರಾತ್ರಿ 8.20ಕ್ಕೆ ಅರಸಾಳಿಗೆ ಬಂದು, 8.21ಕ್ಕೆ ತಾಳಗುಪ್ಪದತ್ತ ಮುಂದುವರಿಯಲಿದೆ. ತಾಳಗುಪ್ಪದಿಂದ ಬೆಳಿಗ್ಗೆ ಹೊರಡುವ ರೈಲು ಅರಸಾಳಿಗೆ 6.19ಕ್ಕೆ ಬಂದು, 6.20ಕ್ಕೆ ಬೆಂಗಳೂರಿನತ್ತ ಹೊರಡಲಿದೆ.

ಹೊಸ ನಿಲುಗಡೆಯ ಮೂಲಕ ಅರಸಾಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಸ್ಥಳೀಯರಿಂದ ಈ ನಿರ್ಧಾರವನ್ನು ಸ್ವಾಗತಿಸಲಾಗಿದೆ.

Leave a Comment