‘ಕೈ’ಗೆ ಗುಡ್ ಬೈ ಎಂದ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಲೇಖನ !

Written by malnadtimes.com

Published on:

RIPPONPETE | ಕಳೆದ ಎಂ.ಎಲ್.ಎ.ಚುನಾವಣೆಯಲ್ಲಿ ಗೋಪಾಲಕೃಷ್ಣ ಬೇಳೂರು ಪರವಾಗಿ ಹಗಲು, ರಾತ್ರಿ ಎನ್ನದೆ ಗೆಲುವಿಗೆ ಶ್ರಮಿಸಿದ ನಿಷ್ಟಾವಂತ ಸಕ್ರಿಯ ಕಾರ್ಯಕರ್ತೆ ಲೇಖನ ಚಂದ್ರಪ್ಪ ಈಗ ತಮ್ಮನ್ನು ನಿರ್ಲಕ್ಷ್ಯಿಸಲಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಏಕಾಏಕಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸ್ಥಾನಕ್ಕೆ ಮತ್ತು ಸ್ಥಳೀಯ ವಿವಿಧ ಹುದ್ದೆಗಳಿಗೆ ರಾಜೀನಾಮೆಯನ್ನು ನೀಡುವುದಾಗಿ ಘೋಷಿಸಿದ್ದಾರೆ‌‌.

WhatsApp Group Join Now
Telegram Group Join Now
Instagram Group Join Now

Arecanut & Black Pepper Price 06 ಆಗಸ್ಟ್ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

ರಿಪ್ಪನ್‌ಪೇಟೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ನಮ್ಮ ಅಜ್ಜ ಮತ್ತು ತಂದೆಯವರ ಕಾಲದಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದವರು. ಅವರ ದಾರಿಯಲ್ಲಿ ನಾನು ಪಕ್ಷ ನಿಷ್ಟೆಯೊಂದಿಗೆ ಹಿರಿಯರಾದ ಕಾಗೋಡು ತಿಮ್ಮಪ್ಪಾಜಿಯವರ ಮತ್ತು ನಂತರದಲ್ಲಿ ಬೇಳೂರು ಗೋಪಾಲಕೃಷ್ಣರವರೊಂದಿಗೆ ಪಕ್ಷಕ್ಕಾಗಿ ದುಡಿದಿದ್ದು ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮಿ ಮತ್ತು ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಗಣಪತಿ ಇನ್ನಿತರರು ನನ್ನ ವಿರುದ್ದ ಇಲ್ಲಸಲ್ಲದ ಮಾತುಗಳನ್ನಾಡಿ ನನ್ನ ಮನಸಿಗೆ ನೋವುಂಟು ಮಾಡುವುದರೊಂದಿಗೆ ತೇಜೋವಧೆ ಮಾಡುವ ಹುನ್ನಾರ ನಡೆಸಿ ಕ್ಷೇತ್ರದ ಶಾಸಕರಲ್ಲಿ ಸಹ ನನ್ನ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕಡೆಗಣಿಸುಂತೆ ಮಾಡಿದ್ದಾರೆ. ಆದರೂ ನಾನು ಈ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಬಳಿ ಸಹ ಚರ್ಚಿಸಲು ಸಾಕಷ್ಟು ಪ್ರಯತ್ನಪಟ್ಟರು ಕೂಡಾ ನಮಗೆ ಆವಕಾಶ ನೀಡದೆ ನಿರ್ಲಕ್ಷ್ಯಿಸಿದ್ದಾರೆ. ಇದರಿಂದಾಗಿ ಬೇಸರಗೊಂಡು ನಾನು ನನ್ನ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಸ್ಥಾನಕ್ಕೆ ಮತ್ತು ಕಾಲೇಜ್ ಸಿಡಿಸಿ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.

lekhana
lekhana

PMAY :ಮನೆಯಿಲ್ಲದ ಮಹಿಳೆಯರಿಗೆ ಶುಭ ಸುದ್ದಿ ಈ ಯೋಜನೆಯಲ್ಲಿ ಪಡೆಯಬಹುದು ಮನೆ !

ಮುಂದಿನ ನಡೆ ಏನು ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲೇಖನ, ನನ್ನ ಜೊತೆಯಲ್ಲಿ ನೂರಾರು ಬೆಂಬಲಿಗರು ಪಕ್ಷದಿಂದ ಹೊರ ಬರಲು ಸಿದ್ದರಾಗಿದ್ದು ಸದ್ಯದಲ್ಲೇ ಪ್ರಕಟಿಸುವ ನಿರ್ಧಾರವನ್ನು ವ್ಯಕ್ತಪಡಿಸಿ, ಪಕ್ಷದಲ್ಲಿ ನಿಷ್ಟಾವಂತರಿಗೆ ಮತ್ತು ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಗರದ ಮಧುಮತಿ ಹಾಗೂ ಸೊರಬದ ರಾಜೇಶ್ವರಿ ಹಾಜರಿದ್ದರು.

Leave a Comment