ಹೊಸನಗರ : ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ 1985-88ನೇ ಸಾಲಿನ ಪ್ರಥಮ ಬ್ಯಾಚ್ ನ ಕಲಾ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ವಿದ್ಯಾರ್ಥಿಗಳು ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ತಾವು ವ್ಯಾಸಂಗ ಮಾಡಿದ ಕಾಲೇಜಿಗೆ 60 ಸಾವಿರ ರೂ. ಮೌಲ್ಯದ ನೂರು ಪ್ಲಾಸ್ಟಿಕ್ ಕುರ್ಚಿಯನ್ನು ಅಂದಿನ ಕಾಲೇಜು ಸ್ಥಾಪಕ ಅಧ್ಯಕ್ಷ 95ರ ವಯೋಮಾನದ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರ ಸಮ್ಮುಖದಲ್ಲಿ ಪ್ರಾಚಾರ್ಯ ಕೆ. ಉಮೇಶ್ ಅವರಿಗೆ ಹಸ್ತಾಂತರ ಮಾಡಿದರು.
ಈ ವೇಳೆ ಅಂದಿನ ವಿದ್ಯಾರ್ಥಿ ಸಂಘ ಅಧ್ಯಕ್ಷ ಸಿ.ವಿ.ಚಂದ್ರಶೇಖರ, ಹಿರಿಯ ವಿದ್ಯಾರ್ಥಿಗಳಾದ ಕೆ. ಇಲಿಯಾಸ್, ಮಂಡಾನಿ ಲೋಕೇಶ್ವರ, ಕಾರ್ಗಡಿ ಶಂಕರನಾರಾಯಣ, ಗುಳ್ಳೆಕೊಪ್ಪ ಅಣ್ಣಪ್ಪ, ಕುಂಬತ್ತಿ ಕೃಷ್ಣಮೂರ್ತಿ, ರಾಘುನಾಥ ರಾವ್, ಶ್ಯಾಮಲಾ, ಸುಜಾತ , ವಾಸುದೇವ ಆಚಾರ್ಯ, ವಾಸಂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

