ರಿಪ್ಪನ್ಪೇಟೆ ; ಸಂಭ್ರಮದಿಂದ ಜರುಗಿದ ಸಾಮೂಹಿಕ ಋಗುಪಾಕರ್ಮ ಕಾರ್ಯಕ್ರಮ
ರಿಪ್ಪನ್ಪೇಟೆ: ಇಲ್ಲಿನ ಜಿ.ಎಸ್.ಬಿ.ಕಲ್ಯಾಣ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಬಸ್ರೂರು ಸುದರ್ಶನಭಟ್ ನೇತೃತ್ವದಲ್ಲಿ ಋಗುಪಾಕರ್ಮ ನಿಮಿತ್ತ ಜನಿವಾರ ಪೂಜಾ ಕಾರ್ಯಕ್ರಮ ಜರುಗಿತು.
ಈ ಋಗುಪಾಕರ್ಮ ಸಾಮೂಹಿಕ ಜನಿವಾರ ಪೂಜಾ ಕಾರ್ಯಕ್ರಮದ ಅಂಗವಾಗಿ ಹೋಮ ಹವನಾದಿ ಕಾರ್ಯಕ್ರಮವು ಸಂಭ್ರಮದೊಂದಿಗೆ ನೆರವೇರಿತು.
ಜಿ.ಎಸ್.ಬಿ.ಸಮಾಜದ ಅಧ್ಯಕ್ಷ ಗಣೇಶ್ ಎನ್.ಕಾಮತ್, ಹರೀಶ್ ಉಮೇಶ್ಭಟ್, ಜೆ.ರಾಧಾಕೃಷ್ಣ, ಮಂಜುನಾಥ ಕಾಮತ್, ಹರೀಶ್ಪ್ರಭು ಹಾಗೂ ಜಿ.ಎಸ್.ಬಿ.ಸಮಾಜ ಬಾಂಧವರು ಪಾಲ್ಗೊಂಡಿದ್ದರು.