ಹೊಸನಗರ ; ಇಲ್ಲಿನ ಕೊಡಚಾದ್ರಿ ಬಸ್ ಮಾಲೀಕ ಪಿ ಮನೋಹರ್ರ ಸಹೋದರ ಸುರೇಶ್ರವರ ಪುತ್ರ ನಾಗಭೂಷಣ್ (21) ಬೆಂಗಳೂರಿನಲ್ಲಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ನಾಗಭೂಷಣ್ ಬೆಂಗಳೂರಿನ ಇಂಜಿನಿಯರ್ 4ನೇ ವರ್ಷದ ವಿದ್ಯಾರ್ಥಿಯಾಗಿದ್ದು ತಂದೆ ಸುರೇಶ್, ತಾಯಿ ವರಲಕ್ಷ್ಮಿ ಸಹೋದರಿ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ಹೊಸನಗರದ ಶಿವಮೊಗ್ಗ ರಸ್ತೆಯ ಇವರ ಮನೆಯಲ್ಲಿ ಗುರುವಾರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಮಾರಿಗುಡ್ಡದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.

