ಕಳಸ : ಇಡಕಣಿ ಗ್ರಾಮದ ಹೆಮ್ಮಕ್ಕಿಯ ಸುಕನಕೊಳಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ತೋಟದಲ್ಲಿ ಗಿಡ ಕಡಿದು ಬೆಳೆಹಾನಿ ಉಂಟು ಮಾಡಿದ್ದಾರೆ ಎಂದು ಕೃಷಿಕ ಅಣ್ಣಪ್ಪ ಎಂಬುವರು ದೂರಿದ್ದಾರೆ.
ಪರಿಶಿಷ್ಟ ಸಮುದಾಯ ನಾನು ಸರ್ವೆ ನಂಬರ್ 89ರಲ್ಲಿ 1 ಎಕರೆಯಲ್ಲಿ ಹಲವು ವರ್ಷಗಳಿಂದ ಕಾಫಿ, ಕಾಳುಮೆಣಸು ಕೃಷಿ ಮಾಡುತ್ತಿದ್ದೇನೆ. ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ನಮ್ಮ ತೋಟಕ್ಕೆ ನುಗ್ಗಿ 500 ಕಾಫಿ ಗಿಡ ಕಡಿದಿದ್ದಾರೆ. 100ಕ್ಕೂ ಹೆಚ್ಚು ಕಾಳುಮೆಣಸಿನ ಬಳ್ಳಿಗಳನ್ನು ಕೂಡ ಕಿತ್ತಿದ್ದಾರೆ ಎಂದು ಅಣ್ಣಪ್ಪ ಆರೋಪಿಸಿದ್ದಾರೆ.
ನಮ್ಮ ಊರಿನ 10 ಕುಟುಂಬಗಳಿಗೆ 40 ವರ್ಷಗಳ ಹಿಂದೆಯೇ ತಲಾ 1 ಎಕರೆ ಭೂಮಿ ಮಂಜೂರಾಗಿದೆ. ಆದರೆ, ಈಗ ಯಾವುದೇ ನೋಟಿಸ್ ನೀಡದೆ ಅರಣ್ಯ ಇಲಾಖೆ ಸಿಬ್ಬಂದಿ ನಮ್ಮ ತೋಟ ನಾಶ ಮಾಡಿದ್ದಾರೆ ಅವರು ಆರೋಪಿಸಿದ್ದಾರೆ.
ತೆರವು ಮಾಡಿರುವ ಪ್ರದೇಶ ಸೆಕ್ಷನ್ 17ರ ಅನ್ವಯ ಇಡಕಣಿ ಮೀಸಲು ಅರಣ್ಯವಾಗಿದ್ದು ಈ ಬಾರಿ ಹೊಸದಾಗಿ ಒತ್ತುವರಿ ಮಾಡಲಾಗಿದೆ. ಅವರಿಗೆ ಮಂಜೂರಾಗಿದ್ದ ಜಾಗ ಬೇರೆಯೇ ಇದ್ದು ಅಲ್ಲಿ ತೋಟ ಇದೆ. ಇಲ್ಲಿ ಕಡಿದ ಗಿಡಗಳು ಕಾಫಿಯ ಕಾಡು ಗಿಡಗಳೇ ಹೊರತು ಇವರು ಬೆಳೆಸಿದ ಗಿಡಗಳಲ್ಲ ಎಂದು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ತಿಳಿಸಿದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…