Categories: Chikkamagaluru

ಅಡಕಲ್‌ನಲ್ಲಿ ಬೀಡುಬಿಟ್ಟ ಬೀಟಮ್ಮ ಗುಂಪು

ಚಿಕ್ಕಮಗಳೂರು: ಬೀಟಮ್ಮ ಮತ್ತು ಭೀಮ ನೇತೃತ್ವದ ಕಾಡಾನೆಗಳ ಗುಂಪು ಈಗ ಅಡಕಲ್‌ನಲ್ಲಿ ಬೀಡುಬಿಟ್ಟಿವೆ.

ಕಾರೆಮನೆಯತ್ತ ತೆರಳಿದ್ದ ಆನೆಗಳ ಹಿಂಡನ್ನು ಪಟಾಕಿ ಸಿಡಿಸಿ ಓಡಿಸಲಾಯಿತು. ಅವುಗಳು ಮತ್ತೆ ಚಿಕ್ಕೊಳಲೆಯತ್ತ ಪಯಣ ಬೆಳೆಸಿದ್ದವು. ಅಲ್ಲಿಂದ ಶುಕ್ರವಾರ ರಾತ್ರಿ ಗಡಬನಹಳ್ಳಿಗೆ ಹೋಗಿದ್ದ ಇವುಗಳು ಬಳಿಕ ನಲ್ಲೂರು ಗುಡ್ಡದಲ್ಲಿದ್ದವು.

ಶನಿವಾರ ರಾತ್ರಿ ಅಡಕಲ್‌ಗೆ ಬಂದಿವೆ. ಅಲ್ಲಿ ತೋಟದ ಪಕ್ಕದಲ್ಲಿರುವ ಕಾಡಿನಲ್ಲಿ ಕಾಲಕಳೆಯುತ್ತಿವೆ. ಭಾನುವಾರ ರಾತ್ರಿ ಮುಳ್ಳೋರೆ ಮೂಲಕ ವಸ್ತಾರೆ ಕಡೆಗೆ ಸಾಗುವ ಸಾಧ್ಯತೆಗಳಿವೆ. ಅದೇ ಮಾರ್ಗವಾಗಿ ಹೋಗಲು ಆರಂಭಿಸಿದರೆ. ಕೆ.ಆರ್.ಪೇಟೆ ಮೂಲಕ ಮೂಲಸ್ಥಾನಕ್ಕೆ ತೆರಳುವ ಸಾಧ್ಯತೆಗಳಿವೆ.

ಬೀಟಮ್ಮನ ಮುಂದಾಳತ್ವ ಸಾಗುತ್ತಿರುವ ಗಜಪಡೆಗಳು ನೀರುಸಿಗುವ ಜಾಗವನ್ನು ನೋಡಿಕೊಂಡು ಅಲ್ಲೆ ಉಳಿಯುವ ಉಪಾಯ ಮಾಡುತ್ತಿವೆ. ಬಾಳೆ, ಬೈನೆಸೊಪ್ಪು, ಈ ಮರದ ತಿರುಳನ್ನು ಸೇವಿಸುವುದರೊಂದಿಗೆ ಕಾಲ ಕಳೆಯುತ್ತಿವೆ.

ಆನೆ ನಿಗ್ರಹಪಡೆಯ 8 ಮಂದಿ ಇರುವ ಎರಡು ತಂಡಗಳು ಆನೆಗಳು ಇರುವ ಜಾಗದಿಂದ 300 ಮೀಟರ್ ಅಂತರದಲ್ಲಿ ಹಗಲುರಾತ್ರಿ ಪಾಳಿಯಂತೆ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಊರಿನತ್ತ ಮುಖಮಾಡದಂತೆ ಎಚ್ಚರಿಕೆಯಿಂದ ಅವುಗಳನ್ನು ಕಾಡಿನತ್ತ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ನಿರತವಾಗಿವೆ.

ಅಡಕಲ್ ಸುತ್ತಮುತ್ತಲಿರುವ ಗ್ರಾಮಗಳ ಜನರು ತಿರುಗಾಡದಂತೆ ಹಾಗೂ ತೋಟಗಳಿಗೆ ಕೆಲಸ ನಿರ್ವಹಿಸಲು ಮುಂದಾಗದಂತೆ ಮನವರಿಕೆ ಮಾಡಿಕೊಡುವ ಕೆಲಸವೂ ನಡೆದಿದೆ. ಸಾಗುವ ಮಾರ್ಗದಲ್ಲಿ ಸಿಗುವ ಸೊಪ್ಪುಗಳನ್ನು ಸೇವಿಸುತ್ತಾ ಮುನ್ನೆಡೆಯುವ ಗಜಪಡೆಯ ಗುಂಪು ನೀರಿನ ಸ್ಥಳವನ್ನು ನೋಡಿಕೊಂಡು ಜಾಂಡಹೂಡುತ್ತಿವೆ.

ತಿನ್ನಲು ಆಹಾರ ಕುಡಿಯಲು ನೀರು ಸಿಗುತ್ತಿರುವುದರಿಂದ ಮೂಲನೆಲೆಗೆ ತೆರಳಲು ಇವುಗಳು ಮನಸ್ಸು ಮಾಡುತ್ತಿಲ್ಲ, ಚಿಕ್ಕಮಗಳೂರು ತಾಲೂಕಿನಲ್ಲೇ ರೌಂಡ್‌ಹೊಡೆಯುತ್ತಿವೆ. ಭಾನುವಾರ ರಾತ್ರಿ ಎತ್ತಸಾಗುತ್ತವೆ ಎಂಬುದನ್ನು ಕಾದುನೋಡಬೇಕಿದೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

1 day ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

1 day ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

1 day ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

1 day ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

1 day ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago