Categories: Featured-Article

ಇನ್ಮುಂದೆ ಇಂತಹ ಫೋನ್‌ಗಳಲ್ಲಿ WhatsApp ಕೆಲಸ ಮಾಡಲ್ಲ…! ನಿಮ್ಮ ಫೋನ್‌ ಈ ಲಿಸ್ಟ್‌ಗೆ ಸೇರಿದೆಯಾ..?

ವಾಟ್ಸಾಪ್ ಒಂದು ಪ್ರಮುಖ ಮೆಸೇಜಿಂಗ್‌ ಪ್ಲಾರ್ಟ್‌ಫಾರ್ಮ್‌ ಆಗಿದ್ದು, ವಾಟ್ಸಾಪ್ ನ ಬಳಕೆದಾರರು ಹೆಚ್ಚಿನವರಿದ್ದಾರೆ. ವಾಟ್ಸಾಪ್ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಜಾರಿಗೆ ಬರುತ್ತಿದೆ. ಹೊಸ ಹೊಸ ವೈಶಿಷ್ಟಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.

ವಾಟ್ಸಾಪ್ ಒಂದು ಮೆಸೆಜಿಂಗ್‌ ಪ್ಲಾರ್ಟ್‌ಫಾರ್ಮ್‌ ಆಗಿದ್ದು, ಬಳಕೆದಾರರ ಅನುಭವ ಗೌಪ್ಯತೆ ಹಾಗೂ ಸೆಕ್ಯೂರಿಟಿಯನ್ನು ಸುಧಾರಿಸಲು ನಿಯಮಿತವಾಗಿ ತನ್ನ ಹೊಸ ವೈಶಿಷ್ಟ್ಯಗಳನ್ನು ಭದ್ರತಾ ಪರಿಹಾರದೊಂದಿಗೆ ನವೀಕರಿಸುತ್ತದೆ. ವಾಟ್ಸಾಪ್ ನಲ್ಲಿ ಈಗ ಹೊಸದಾಗಿ ಸೇರ್ಪಡೆಯಾಗಿರುವ ಚಾನೆಲ್‌ ಗಳು ಹಾಗೂ ಹೈಲೈಟ್ಸ್‌ ಗಳನ್ನು ಕೂಡ ಹಾಕುವಂತಹ ಪೀಚರ್‌ ಅನ್ನು ಸೇರಿಸಲಾಗಿದೆ.

ಆದರೆ ಹೊಸ ಆಪರೇಟಿಂಗ್ ಸಿಸ್ಟಮ್ಗಳಿಗೆ ಕೆಲವೊಂದು ಫೋನ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಹೊಸ ನವೀಕರಣಗಳೊಂದಿಗೆ ವಾಟ್ಸಾಪ್ ಹಳೆಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್ಗಳಿಗೆ ಬೆಂಬಲಗಳನ್ನು ತೆಗೆದು‌ ಹಾಕುತ್ತದೆ, ಇದರಿಂದಾಗಿ ವಾಟ್ಸಾಪ್ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದೆ. ಇದೇ ಅಕ್ಟೋಬರ್ 24 ರ ನಂತರದಲ್ಲಿ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯ ಸ್ಮಾರ್ಟ್ ಫೋನ್ ಗಳಿಗೆ Whatsapp ತನ್ನ ಬೆಂಬಲವನ್ನು ಕೊನೆಗೊಳಿಸುವುದಾಗಿ ತಿಳಿಸಿದೆ.

ವಾಟ್ಸಾಪ್ ತನ್ನ ಕಾರ್ಯನಿರ್ವಹಿಸದ ಆಂಡ್ರಾಯ್ಡ್ ಫೋನ್ ಗಳ ಪಟ್ಟಿ:
ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯ ಜನಪ್ರಿಯ ಸ್ಮಾರ್ಟ್ ಫೋನ್ ಗಳ ಪಟ್ಟಿ:

  • ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2
  • LG ಆಪ್ಟಿಮಸ್ ಜಿ ಪ್ರೊ
  • ಮೊಟೊರೊಲಾ ಡ್ರಾಯ್ಡ್ ರೇಜರ್
  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್2
  • ಸ್ಯಾಮ್ ಸಂಗ್ ಗ್ಯಾಲಕ್ಸಿ ನೆಕ್ಸಸ್
  • ಸೋನಿ ಎಕ್ಸ್ ಪೀರಿಯಾ ಎಸ್ 2
  • Sony Xperia Z
  • LG ಆಪ್ಟಿಮಸ್ 2X
  • ಮೊಟೊರೊಲಾ ಕ್ಸೂಮ್
  • HTC ಸಂವೇದನೆ
  • ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ 10.1
  • Acer Iconia ಟ್ಯಾಬ್ A5003
  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್
  • HTC ಒನ್
  • ಆಸೂಸ್ ಈ ಪ್ಯಾಡ್ ಟ್ರಾನ್ಸ್ ಫಾರ್ಮರ್
  • HTC ಡಿಸೈರ್ ಫಅ

ವಾಟ್ಸಾಪ್ ತನ್ನ ಬಳಕೆದಾರರಿಗೆ ಸಮಯಕ್ಕಿಂತ ಮುಂಚಿತವಾಗಿಯೇ ಸೂಚನೆಯನ್ನು ನೀಡುತ್ತದೆ. ಹೊಸ ಅಪ್ಡೇಟ್‌ ಮಾಡಲು ಹಲವು ಬಾರಿ ನೆನಪಿಸುತ್ತದೆ. ಸಾಧನವನ್ನು ನವೀಕರಣ ಮಾಡದಿದ್ದರೆ ಇನ್ನು ಆ ಫೋನ್‌ ನಲ್ಲಿ ವಾಟ್ಸಾಪ್ ತನ್ನ ಕೆಲಸವನ್ನು ಮಾಡುವುದಿಲ್ಲ. ಅಂದರೆ ಗ್ರಾಹರರು ಆ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಆಗುವುದಿಲ್ಲ.

Malnad Times

Share
Published by
Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

14 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

18 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

18 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

20 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

21 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

1 day ago