ರಿಪ್ಪನ್ಪೇಟೆ: ಹುಂಚ ಸಮೀಪದ ಶೆಟ್ಟಿಬೈಲು ಗ್ರಾಮದಲ್ಲಿ ಗುಡ್ಡದಮಠದ ಶೀಲವಂತ ಚೌಡೇಶ್ವೇರಿ ಅಮ್ಮನವರ ಮತ್ತು ನಾಗದೇವರು ಹಾಗೂ ಲಿಂ. ಗುರುಗಳ ನೂತನ ಐದು ಗದ್ದುಗೆ ಹಾಗೂ ನಾಗದೇವರತೆಯ ಪುನರ್ ಪ್ರತಿಷ್ಟಾಪನೆಯು ಫೆ. 10 ಮತ್ತ 11 ರಂದು ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎಸ್.ಎ.ದೇವರಾಜ ಪ್ರಕಟಣೆಯಲ್ಲಿ ತಿಳಿಸಿದರು.
ಫೆ. 10 ರಂದು ಸಂಜೆ 7 ಕ್ಕೆ ಹುಂಚ ಅಜಯ್ಶಾಸ್ತ್ರಿಗಳು ಮತ್ತು ಅರ್ಚಕರ ಬಳಗದವರಿಂದ ದೇವತಾ ಪ್ರಾರ್ಥನೆ ವಿಧುರ್ಕ ಆಧ್ಯ, ಗಣಯಾಗ, ತೋರಣ ಮುಹೂರ್ತ, ಕಲಾಹೋಮ, ರುದ್ರಾಭಿಷೇಕ ಕಾರ್ಯಕ್ರಮ ಜರುಗಲಿದೆ.
ಫೆ.10ರ ಭಾನುವಾರ ಬೆಳಗ್ಗೆ 6 ಕ್ಕೆ ಕವಲೇದುರ್ಗ ಭುವನಗಿರಿ ಮಹಾಮಹತ್ತಿನ ಸಂಸ್ಥಾನಮಠದ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಗುಡ್ಡದಮಠದ ಶೀಲವಂತ ಚೌಡೇಶ್ವೇರಿ ಅಮ್ಮನವರ ಮತ್ತು ನಾಗದೇವರು ಹಾಗೂ ಲಿಂ. ಗುರುಗಳ ನೂತನ ಐದು ಗದ್ದುಗೆ ಹಾಗೂ ನಾಗದೇವರತೆಯ ಪುನರ್ ಪ್ರತಿಷ್ಟಾಪನೆ ಮಂತೋಪದೇಶ, ಪೂರ್ಣಾಹುತಿ ನೂತನ ಮಂದಿರದ ಕಳಸಾರೋಹಣ, ಮಹಾಪೂಜೆ ಪರಿವಾರ ಪೂಜೆಯ ವಿಧಿ ವಿಧಾನಗಳು ನಡೆಯಲಿದೆ.
ನಂತರ ಬೆಳಗ್ಗೆ 11 ಕ್ಕೆ ಕವಲೇದುರ್ಗ ಭುವನಗಿರಿ ಮಹಾಮಹತ್ತಿನ ಸಂಸ್ಥಾನಮಠದ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳ ಮತ್ತು ಹೊಂಬುಜ ಜೈನ ಮಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾಕರ ಮಹಾಸ್ವಾಮಿಜಿ ಮತ್ತು ಮೂಲೆಗದ್ದೆ ಸದಾನಂದ ಶೀವಯೋಗಾಶ್ರಮದ ಅಭಿನಯ ಚನ್ನಬಸವ ಮಹಾಸ್ವಾಮಿಗಳು ದಿವ್ಯಸಾನಿಧ್ಯದಲ್ಲಿ ಧರ್ಮ ಜಾಗೃತಿ ಸಮಾರಂಭ ಜರುಗಲಿದೆ.
ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎಸ್.ಎ.ದೇವರಾಜ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…
ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…