ಫೆ.10 ಮತ್ತು 11ಕ್ಕೆ ಗುಡ್ಡದಮಠದ ಶೀಲವಂತ ಚೌಡೇಶ್ವರಿ ಅಮ್ಮನವರ ನೂತನ ಗದ್ದುಗೆ ನಾಗದೇವರ ದೇವಸ್ಥಾನ ಲೋಕಾರ್ಪಣೆ ಮತ್ತು ಧರ್ಮಜಾಗೃತಿ ಸಮಾರಂಭ

0 423

ರಿಪ್ಪನ್‌ಪೇಟೆ: ಹುಂಚ ಸಮೀಪದ ಶೆಟ್ಟಿಬೈಲು ಗ್ರಾಮದಲ್ಲಿ ಗುಡ್ಡದಮಠದ ಶೀಲವಂತ ಚೌಡೇಶ್ವೇರಿ ಅಮ್ಮನವರ ಮತ್ತು ನಾಗದೇವರು ಹಾಗೂ ಲಿಂ. ಗುರುಗಳ ನೂತನ ಐದು ಗದ್ದುಗೆ ಹಾಗೂ ನಾಗದೇವರತೆಯ ಪುನರ್ ಪ್ರತಿಷ್ಟಾಪನೆಯು ಫೆ. 10 ಮತ್ತ 11 ರಂದು ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎಸ್.ಎ.ದೇವರಾಜ ಪ್ರಕಟಣೆಯಲ್ಲಿ ತಿಳಿಸಿದರು.

ಫೆ. 10 ರಂದು ಸಂಜೆ 7 ಕ್ಕೆ ಹುಂಚ ಅಜಯ್‌ಶಾಸ್ತ್ರಿಗಳು ಮತ್ತು ಅರ್ಚಕರ ಬಳಗದವರಿಂದ ದೇವತಾ ಪ್ರಾರ್ಥನೆ ವಿಧುರ್ಕ ಆಧ್ಯ, ಗಣಯಾಗ, ತೋರಣ ಮುಹೂರ್ತ, ಕಲಾಹೋಮ, ರುದ್ರಾಭಿಷೇಕ ಕಾರ್ಯಕ್ರಮ ಜರುಗಲಿದೆ.

ಫೆ.10ರ ಭಾನುವಾರ ಬೆಳಗ್ಗೆ 6 ಕ್ಕೆ ಕವಲೇದುರ್ಗ ಭುವನಗಿರಿ ಮಹಾಮಹತ್ತಿನ ಸಂಸ್ಥಾನಮಠದ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಗುಡ್ಡದಮಠದ ಶೀಲವಂತ ಚೌಡೇಶ್ವೇರಿ ಅಮ್ಮನವರ ಮತ್ತು ನಾಗದೇವರು ಹಾಗೂ ಲಿಂ. ಗುರುಗಳ ನೂತನ ಐದು ಗದ್ದುಗೆ ಹಾಗೂ ನಾಗದೇವರತೆಯ ಪುನರ್ ಪ್ರತಿಷ್ಟಾಪನೆ ಮಂತೋಪದೇಶ, ಪೂರ್ಣಾಹುತಿ ನೂತನ ಮಂದಿರದ ಕಳಸಾರೋಹಣ, ಮಹಾಪೂಜೆ ಪರಿವಾರ ಪೂಜೆಯ ವಿಧಿ ವಿಧಾನಗಳು ನಡೆಯಲಿದೆ.

ನಂತರ ಬೆಳಗ್ಗೆ 11 ಕ್ಕೆ ಕವಲೇದುರ್ಗ ಭುವನಗಿರಿ ಮಹಾಮಹತ್ತಿನ ಸಂಸ್ಥಾನಮಠದ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳ ಮತ್ತು ಹೊಂಬುಜ ಜೈನ ಮಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾಕರ ಮಹಾಸ್ವಾಮಿಜಿ ಮತ್ತು ಮೂಲೆಗದ್ದೆ ಸದಾನಂದ ಶೀವಯೋಗಾಶ್ರಮದ ಅಭಿನಯ ಚನ್ನಬಸವ ಮಹಾಸ್ವಾಮಿಗಳು ದಿವ್ಯಸಾನಿಧ್ಯದಲ್ಲಿ ಧರ್ಮ ಜಾಗೃತಿ ಸಮಾರಂಭ ಜರುಗಲಿದೆ.

ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎಸ್.ಎ.ದೇವರಾಜ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ‌.

Leave A Reply

Your email address will not be published.

error: Content is protected !!