ಸಹೋದರನ ಪರ ಪದ್ಮಾವತಿ ಮನೆಮನೆಗೆ ಭೇಟಿ ಮತಯಾಚನೆ
ರಿಪ್ಪನ್ಪೇಟೆ: ಬರುವೆ ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಅವರ ಸಹೋದರಿ ಪದ್ಮಾವತಿಯವರು ರಿಪ್ಪನ್ಪೇಟೆಯಲ್ಲಿ ತಮ್ಮನ ಪರವಾಗಿ ಮನೆಮನೆಗೆ ಭೇಟಿ ನೀಡಿ ಮತಯಾಚಿಸಿದರು.
ಇಲ್ಲಿನ ವಿಪ್ರ ಮಹಿಳೆಯರೊಂದಿಗೆ ಹೆಬ್ಬಾರ್ ಪಿಕಲ್ಸ್ ಗೆ ಭೇಟಿ ನೀಡಿ ಕಾರ್ಮಿಕರಲ್ಲಿ ಸಹೋದರ ಬಿ.ವೈ.ರಾಘವೇಂದ್ರ ಪರ ಮತಯಾಚಿಸಿ, ಕೇಂದ್ರದ ಮೋದಿ ಸರ್ಕಾರ ಘೋಷಿಸಲಾದ ಮಹಿಳಾ ಸಬಲೀಕರಣ ಮತ್ತು ಮುದ್ರ ಯೋಜನೆಯಿಂದ ಸ್ವಾವಲಂಬನೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನನ್ನ ತಮ್ಮ ಮಾಡಿದಂತಹ ಹಲವು ಜನಹಿತ ಯೋಜನೆಗಳ ಅನುಷ್ಟಾನದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ರೈಲ್ವೆ ವಿಮಾನ ನಿಲ್ದಾಣ ಹಾಗೂ ಸಾಮಾನ್ಯರಿಗೂ ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳು ದೊರಕುವಂತೆ ಮಾಡಿರುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿ, ಈ ಬಾರಿ
ಸಹ ತಾವು ತಮ್ಮ ಮತವನ್ನು ಕಮಲದ ಚಿಹ್ನೆಯ ಬಿಜೆಪಿ ಪಕ್ಷಕ್ಕೆ ನೀಡಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಆರ್.ಟಿ.ಗೋಪಾಲ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯಿತ್ರಿ, ಹೊಸನಗರ ತಾಲ್ಲೂಕು ಬಿಜೆಪಿ ಆಬಧ್ಯಕ್ಷ ಸುಬ್ರಹ್ಮಣ್ಯ ಮಾಜಿ ಅಧ್ಯಕ್ಷ ಗಣಪತಿ ಬಿಳಗೋಡು, ಬಿಜೆಪಿ ಮಹಾಶಕ್ತಿ ಕೆಂದ್ರದ ಅಧ್ಯಕ್ಷ ಎನ್.ಸತೀಶ್, ರಿಪ್ಪನ್ಪೇಟೆ ವಿಪ್ರ ಸಮಾಜದ ಮಹಿಳಾ ವೇದಿಕೆಯ ಪದ್ಮಾಸುರೇಶ್, ತಾಲ್ಲೂಕು ಮಹಿಳಾ ಬಿಜೆಪಿ ಅಧ್ಯಕ್ಷರು ಹಾಗೂ ದೀಪಾ ಹೆಚ್.ಎಸ್.ಸುಧೀಂದ್ರ ಹೆಬ್ಬಾರ್, ದೇವೇಂದ್ರಪ್ಪಗೌಡ ನೆವಟೂರು, ಲಕ್ಷ್ಮಿ ಶ್ರೀನಿವಾಸ್ ಆಚಾರ್, ಸರಸ್ವತಿ ಪ್ರೇಮಚಂದ್ರ, ವಾಸುದೇವ ಮಂಗಳೂಕರ್, ದೇವಿಕಿ, ಅಮಿತಾ ರವಿ ಬಲ್ಲಾಳ್, ಎಸ್.ಎನ್.ಬಾಲಚಂದ್ರ, ಸುಜಾತ ಶಿವಾನಂದ, ಹೆಚ್.ಎಸ್.ಸುಧೀಂದ್ರ ಹೆಬ್ಬಾರ್ ಇನ್ನಿತರರು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.