RMM ಮನೆ ಮೇಲೆ E.D. ದಾಳಿ ; ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ವಿನಯ್‌ಕುಮಾರ್ ಖಂಡನೆ

0 255


ಹೊಸನಗರ: ಸಹಕಾರಿ ಧುರೀಣ ಹಾಗೂ ಇತ್ತೀಚಿಗೆ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗಿ ಇವರ ಜನ ಬೆಂಬಲ ಕಂಡು ವಿರೋಧಿಗಳು ಅಸೊಯೆಯಿಂದ ಆರ್.ಎಂ. ಮಂಜುನಾಥ ಗೌಡರವರ 3 ಮನೆಗಳ ಮೇಲೆ ಇಡಿ ದಾಳಿ ನಡೆಸಿದ್ದು ಇವರ ದಾಳಿಯನ್ನು ಕಳೂರು ಸೊಸೈಟಿ ಹಾಗೂ ತುಂಗಾ ಅಡಿಕೆ ಮಂಡಿಯ ಅಧ್ಯಕ್ಷ ದುಮ್ಮ ವಿನಯ್‌ಕುಮಾರ್ ಖಂಡಿಸಿದ್ದಾರೆ.


ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಇವರು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗುವ ಸಂದರ್ಭದಲ್ಲಿ ಸಾವಿರಾರು ಜನ ಇವರ ಬೆಂಬಲಕ್ಕೆ ನಿಲ್ಲುವುದರ ಜೊತೆಗೆ ಕೆಲವು ತಾಲ್ಲೂಕುಗಳಲ್ಲಿ ಇವರಿಗೆ ಅಭಿನಂದನೆ ಮಹಾಪೂರ ಓದಗಿರುವುದನ್ನು ನೋಡಿ ವಿರೋಧ ಪಕ್ಷದವರಿಗೆ ಹೊಟ್ಟೆ ಉರಿ ತಡೆಯಲಾಗದೇ ಇಡಿ ದಾಳಿ ನಡೆಸಿದ್ದಾರೆ. ಇವರು ಯಾವುದೇ ದಾಳಿಗಳಿಗೂ ಹೆದರುವ ವ್ಯಕ್ತಿಯಲ್ಲ ಅಂಥಹ ಡಿ.ಸಿ.ಸಿ ಬ್ಯಾಂಕ್ ಹಗರಣ ಮಾಡಿದ್ದಾರೆ ಎಂದು ಬಿಂಬಿಸಿದರೂ ತಲೆ ಕೆಡಿಸಿಕೊಳ್ಳದೆ ನ್ಯಾಯಾಲಯದಲ್ಲಿ ಲೋಕಾಯುಕ್ತದಲ್ಲಿ ಜಯಶಾಲಿಯಾಗಿ ಬಂದಿದ್ದಾರೆ 10 ವರ್ಷದ ಹಿಂದಿನ ಕೇಸು ಮುಗಿದು ಹೋದ ಅಧ್ಯಾಯವನ್ನು ಪುನಃ ಪುನಃ ಎತ್ತಿ ಅವರನ್ನು ತೇಜೋವಧೆ ಮಾಡುವುದು ಸರಿಯಲ್ಲ‌.

ಮಂಜುನಾಥ ಗೌಡರವರ ವರ್ಚಸ್ಸು ಕಡಿಮೆ ಮಾಡಬೇಕೆಂದು ಇಂಥಹ ದಾಳಿ ನಡೆಸುತ್ತಿದ್ದು ಇವರ ಬೆಂಬಲಕ್ಕಾಗಿ ಜನಸಾಗರವೇ ಹಾರಿದು ಬರುತ್ತಿದೆ ಯಾವ ವಿರೋಧಿ ಗುಂಪು ಮಂಜುನಾಥ ಗೌಡರವರಿಗೆ ಜನ ಬೆಂಬಲ ಇರುವವರೆಗೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.

Leave A Reply

Your email address will not be published.

error: Content is protected !!