ಈಶ್ವರಪ್ಪನವರದೇ ಒರಿಜಿನಲ್ ಬಿಜೆಪಿ

0 79

ತೀರ್ಥಹಳ್ಳಿ : ಈಶ್ವರಪ್ಪನವರದೇ ಒರಿಜಿನಲ್ ಬಿಜೆಪಿ ಎಂದು ಬೆಜ್ಜವಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮೇಲಿನಕೊಪ್ಪ ಮಹೇಶ್ ಹೇಳಿದ್ದಾರೆ.

ಪಟ್ಟಣದ ಅನ್ನಪೂರ್ಣ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಬಿ.ಎಸ್.ವೈ ಕುಟುಂಬ ರಾಜಕಾರಣಕ್ಕೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಬಲಿಯಾಗಿದ್ದಾರೆ. ಬಿಜೆಪಿ ಹಿಂದುತ್ವ ಮತ್ತು ರಾಷ್ಟ್ರೀಯವಾದವನ್ನು ಮರೆತು ಕಾಂಗ್ರೆಸ್ ಸಂಸ್ಕೃತಿಯನ್ನು ಅಳವಡಿಸಿಕೊಂಡಿದೆ. ಅದಕ್ಕಾಗಿ ರಾಷ್ಟ್ರಭಕ್ತರ ಬಳಗದ ಹೆಸರಿನಲ್ಲಿ ಹಿಂದೂ ಹುಲಿ ಕೆ.ಎಸ್ ಈಶ್ವರಪ್ಪನವರು ಸ್ಪರ್ಧಿಸುತ್ತಿದ್ದು ತೀರ್ಥಹಳ್ಳಿಯ ಬಜರಂಗದಳ ಆರ್.ಎಸ್‌.ಎಸ್ ಹಾಗೂ ಹಿಂದೂ ಮುಖಂಡರು ಸೇರಿದಂತೆ ರಾಷ್ಟ್ರೀಯತೆಯನ್ನು ಮತ್ತು ಹಿಂದುತ್ವವನ್ನು ಕಾಪಾಡಲು ಹಲವಾರು ಯುವಕರು ಈಶ್ವರಪ್ಪನವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದರು.

ಈಗಲೂ ಕಾಲ ಮಿಂಚಿಲ್ಲ. ಬಿಜೆಪಿ ಹೈಕಮಾಂಡ್ ತಕ್ಷಣ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಹುದ್ದೆಯನ್ನು ಹಿಂಪಡೆಯಬೇಕು. ಸಂಸದ ಬಿ.ವೈ.ಆರ್ ಕಣದಿಂದ ನಿವೃತ್ತಿಯಾಗಿ ಈಶ್ವರಪ್ಪನವರನ್ನು ಲೋಕಸಭಾ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಿ.ಟಿ ರವಿ, ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಮೊದಲಾದ ಹಿಂದೂ ನಾಯಕರಿಗೆ ವಂಚಿಸಲಾಗಿದೆ. ಗೋಬ್ಯಾಕ್ ಶೋಭಾ ಅವರಿಗೆ ಬೆಂಗಳೂರು ಉತ್ತರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಸದ ಬಿ ವೈ ರಾಘವೇಂದ್ರ ಅವರದ್ದು ಭಾಷಣದಲ್ಲಿ ಮಾತ್ರ ಹಿಂದುತ್ವ. ವೈಯಕ್ತಿಕ ಲಾಭಕ್ಕಾಗಿ ಇತ್ತೀಚೆಗೆ ಪಕ್ಷ ಸೇರಿದ ಬೇರೆ ಪಕ್ಷದವರಿಗೆ ಸ್ಥಾನ ಮಾನ ನೀಡಲಾಗುತ್ತಿದೆ. ಇವರ ಹಿಂದುತ್ವವಾದ ಮತ್ತು ರಾಷ್ಟ್ರೀಯತೆ ಬರೆ ಬೊಗಳೆ ಅಷ್ಟೇ. ಕುಟುಂಬ ರಾಜಕಾರಣವನ್ನು ವಿರೋಧಿಸಿ ಬಿಜೆಪಿಯ ಸಿದ್ಧಾಂತವನ್ನು ಕಾಪಾಡಲು ನಾವೆಲ್ಲರೂ ಈಶ್ವರಪ್ಪನವರನ್ನು ಬೆಂಬಲಿಸುವುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಬಜರಂಗದಳ ಮತ್ತು ಹಿಂದೂ ಪರ ಸಂಘಟನೆ ಯುವಕರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!