ಶ್ರೀಕ್ಷೇತ್ರ ಹೊಂಬುಜದಲ್ಲಿ ಗುರುಪೂರ್ಣಿಮೆ ಆಚರಣೆ | “ಉತ್ಕೃಷ್ಟ ಮೌಲ್ಯಗಳ ಪರಿಪಾಲನೆಗೆ ಗುರುವಿನ ಮಾರ್ಗದರ್ಶನ ಮೂಲ” ; ಶ್ರೀಗಳು

Written by Mahesh Hindlemane

Published on:

Humcha | ಜೈನಾಗಮದ ಶಾಸ್ತ್ರದಲ್ಲಿ ಶ್ರೀ ಮಹಾವೀರ ತೀರ್ಥಂಕರರು ಸಮವಸರಣದಲ್ಲಿ ವಿರಾಜಮಾನರಾಗಿದ್ದಾಗ ಅವರು ಸಮಸ್ತರಿಗೂ ‘ಗುರು’ ಆಗಿದ್ದರೆಂಬುದು ಉಲ್ಲೇಖವಿದೆ. ಉತ್ಕೃಷ್ಟ ಮೌಲ್ಯಗಳ ಪರಿಪಾಲನೆಗೆ ಶ್ರೀ ಮಹಾವೀರರ ಉಪದೇಶಗಳು ಗುರುಸ್ಥಾನದಲ್ಲಿ ತಿಳಿಸಿದ ಮುಕ್ತಿ ಪಥದಲ್ಲಿ ಆಚರಿಸಲ್ಪಡುವ ನಿಯಮಗಳಷ್ಟೇ ಅಲ್ಲದೇ ಶಾಂತಿ ನೆಮ್ಮದಿಯ ಆರೋಗ್ಯಪೂರ್ಣ ಜೀವನ ನಿರ್ವಹಣೆಗೆ ನೀಡಿದ ಧರ್ಮಸಂದೇಶವಾಗಿದೆ.

WhatsApp Group Join Now
Telegram Group Join Now
Instagram Group Join Now

SHIVAMOGGA | ಮಳೆಯಿಂದ ಜಿಲ್ಲೆಯಲ್ಲಿ ಈವರೆಗೆ ಏನೆಲ್ಲ ಹಾನಿ ಸಂಭವಿಸಿದೆ ?

ಆಷಾಢ ಶುದ್ಧ ಪೂರ್ಣಿಮೆಯಂದು ಗುರುಪೂರ್ಣಿಮಾ ಎಂದು ಆಚರಿಸುವುದು ಅಂದಿನಿಂದ ಆರಂಭವಾಯಿತು. ನೋಂಪಿ ಆಚರಣೆಯ ಪದ್ಧತಿಯು ಮಾನವ ಕಲ್ಯಾಣದ ಸಂಕೇತವಾಗಿದ್ದು, ತ್ರಿಕರಣಪೂರ್ವಕ ಪೂಜಾವಿಧಿ, ಶಾಸ್ತ್ರ ಪಠಣದಿಂದ ಕಾಯಾ-ವಾಚಾ-ಮನಸಾ ನಿರ್ಮಲವಾಗುವ ಮರ್ಮವಿದೆ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಜುಲೈ 21ರ ಭಾನುವಾರದಂದು ಗುರುಪೂರ್ಣಿಮೆಯ ವಿಶೇಷ ಪೂಜೆ ನೆರವೇರಿದ ಬಳಿಕ ಭಕ್ತವೃಂದದವರನ್ನು ಆಶೀರ್ವದಿಸಿ ಪ್ರವಚನದಲ್ಲಿ ತಿಳಿಸಿ, ಗುರು ಎಂದರೆ ಭಗವಂತ ಎಂದು ತಿಳಿಸಿದರು.

ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿವೃಂದ, ಹೊಂಬುಜ ಜೈನ ಸಮಾಜ ಬಾಂಧವರು, ಶ್ರೀ ಪದ್ಮಾಂಬ ಜೈನ ಮಹಿಳಾ ಮಂಡಲದ ಶ್ರಾವಿಕೆಯರು, ಪರವೂರ ಭಕ್ತರು ಪೂಜಾ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ್ದರು.

ಪೂಜ್ಯ ಶ್ರೀಗಳವರಿಗೆ ಭಕ್ತಿಪೂರ್ವಕ ನಮನಗಳನ್ನು ಸಮರ್ಪಿಸಿದರು. ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀಮಹಾವೀರ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಂಪರಾಗತ ಪೂಜಾ ವಿಧಾನಗಳು ನೆರವೇರಿದವು.

ಗ್ರಾ.ಪಂ. ಅಧ್ಯಕ್ಷನ ಮನೆಯಲ್ಲಿ ಸಿಗ್ತು ಕಂತೆ ಕಂತೆ ಹಣ, ಚಿನ್ನಾಭರಣ !

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment