ರೈತರ ಬದುಕು ಹಸನಾಗಬೇಕಾದರೆ ದೇವರ ಕೃಪೆ ಇರಬೇಕು ; ಕೃಷಿಕ ರತ್ನಾಕರ್

ಹೊಸನಗರ: ರೈತರ ಬದುಕು ಹಸನಾಗಿರಬೇಕಾದರೆ ದೇವರ ಕೃಪೆ ರೈತರ ಮೇಲಿರಬೇಕು ಎಂದು ಹೊಸನಗರ ಕೃಷಿಕ ರತ್ನಾಕರ್‌ರವರು ಹೇಳಿದರು.

ಪಟ್ಟಣಕ್ಕೆ ಸಮೀಪವಿರುವ ಎ.ಪಿ.ಎಂ.ಸಿ ಹಿಂಭಾಗದಲ್ಲಿರುವ ತಮ್ಮ ಅಡಿಕೆ ತೋಟ, ಗದ್ದೆಯ ಆವರಣದಲ್ಲಿ ಅದ್ದೂರಿಯಾಗಿ ಭೂಮಿ ಹುಣ್ಣಿಮೆ ಹಬ್ಬ ಆಚರಿಸಿ ಮಾತನಾಡಿ, ಯಾವುದೇ ಭೂಮಿಯಲ್ಲಿ ಬೆಳೆ ಬೆಳೆಯಬೇಕಾದರೇ ನೀರು, ಮಣ್ಣು, ಗಾಳಿ ಹಾಗೂ ಬಿಸಿಲು ಬೆಳೆಯುವ ಪೈರುಗಳಿಗೆ ಅನುಕೂಲಕರ ವಾತಾವರಣದ ಜೊತೆಗೆ ದೇವರ ಕೃಪೆ ರೈತರ ಪರವಾಗಿದ್ದರೆ ಮಾತ್ರ ರೈತ ಬೆಳೆ ಬೆಳೆಯಬಹುದು, ತಮ್ಮ ಸಂಸಾರ ನಡೆಸಬಹುದು, ನಾಡಿಗೆ ಅನ್ನ ನೀಡಬಹುದು. ದೇಶ ಕಾಯುವ ಸೈನಿಕ ಎಷ್ಟು ಮುಖ್ಯವೋ ನಮ್ಮಂತ ರೈತರು ಈ ದೇಶಕ್ಕೆ ಅಷ್ಟೇ ಮುಖ್ಯ ಎಂದರು.


ಭೂಮಿ ಹುಣ್ಣಿಯ ಹಬ್ಬದ ಸಂಭ್ರಮದಲ್ಲಿರುವ ರತ್ನಾಕರ್‌ರವರ ಮನೆಯಲ್ಲಿ ಹಬ್ಬದ ಹಿಂದಿನ ದಿನ ಜಮೀನನ್ನು ಸ್ವಚ್ಛ ಮಾಡಿ ಬಾಳೆಗಿಡದಿಂದ ಮಂಟಪವನ್ನು ನಿರ್ಮಿಸಿ ಮಣ್ಣಿನಲ್ಲಿ ಭೂತಾಯಿಯ ಮುಖವನ್ನು ತಯಾರಿಸಲಾಗಿದ್ದು ವರ್ಷವಿಡಿ ಭೂಮಿಯಲ್ಲಿ ಉತ್ತಿ ಬಿತ್ತಿ ಬೆಳೆದಿರುವ ಹೊಲ ಗದ್ದೆಗಳಲ್ಲಿ ಬಿತ್ತಿನ ಬೆಳೆಗಳು ತೆನೆ ಕಾಳುಗಟ್ಟಿಯಾಗುವ ಹಂತದಲ್ಲಿದ್ದು ಅವುಗಳಿಗೆ ಮಾಡಿದ ಹಬ್ಬದ ಅಡಿಗೆಯನ್ನು ಬಡಿಸಿದರು.


ಇವರ ತೋಟದಲ್ಲಿ ಅಡಿಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಫಸಲುಗಳು ಚೆನ್ನಾಗಿ ಬಂದಿದ್ದು ಈ ಸಂದರ್ಭದಲ್ಲಿ ಭೂತಾಯಿಯ ಗರ್ಭಿಣಿ ಎಂಬ ನಂಬಿಕೆಯ ವರ್ಗ ಪುರಾತನ ಕಾಲದಲ್ಲಿಯು ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದು ಈ ಹಬ್ಬದ ಸಂದರ್ಭದಲ್ಲಿ ವಿವಿಧ ಬಗೆಯ ಅಡುಗೆಯನ್ನು ಮಾಡಿ ಭೂಮಿಗೆ ಬಡಿಸಿದ ನಂತರ ಬಂದ ಜನರಿಗೆ ಉಣಬಡಿಸಿ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ. ಹಿಂದಿನವರು ಹಾಕಿಕೊಟ್ಟ ದಾರಿಯನ್ನು ಮರೆತರೆ ಭೂಮಿತಾಯಿ ನಮಗೆ ಎಂದು ಕ್ಷಮಿಸುವುದಿಲ್ಲ. ಅದು ಅಲ್ಲದೇ ನಾವು ಹಬ್ಬವನ್ನು ಮರೆತರೆ ಮುಂದಿನ ಪೀಳಿಗೆ ಈ ಹಬ್ಬವನ್ನೇ ಮರೆಯುತ್ತಾರೆ. ಎಷ್ಟೇ ಕಷ್ಟಕರವಾಗಿದ್ದರೂ ಈ ಹಬ್ಬವನ್ನು ಬಿಡುವುದಿಲ್ಲ ಎಂದು ತಿಳಿಸಿದರು.


ಭೂಮಿ ಪೂಜೆ ಕಾರ್ಯ ಬೆಳಗ್ಗೆ 6ಗಂಟೆಗೆ ಪ್ರಾರಂಭಿಸಲಾಗಿದ್ದು 7 ಗಂಟೆಗೆ ಪೂಜೆ ಕಾರ್ಯ ಮುಗಿಸಿ ಭೂಮಿ ತಾಯಿಗೆ ತಂದಿರುವ ವಿವಿಧ ಬಗೆಯ ಊಟ ಬಡಿಸಿ ನಂತರ ಸುಮಾರು 20ಜನರಿಗೆ ಪ್ರಸಾದ ವಿತರಿಸಲಾಯಿತು.

Malnad Times

Recent Posts

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

3 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

12 hours ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

22 hours ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

22 hours ago

ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವು ನನ್ನದೇ, 2ನೇ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಅಂದ್ರು ಈಶ್ವರಪ್ಪ

ರಿಪ್ಪನ್‌ಪೇಟೆ: ನನ್ನ ಪರವಾಗಿ ಹೋದ ಕಡೆಯಲೆಲ್ಲ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು…

22 hours ago

ಹಸೆಮಣೆ ಏರುವ‌ ಮುನ್ನ ಹಕ್ಕು ಚಲಾಯಿಸಿದ ವಧು

ಶೃಂಗೇರಿ : ಇಂದು ನಡೆದ ಮತದಾನದಲ್ಲಿ ತಾಲೂಕಿನ ಕೂತಗೋಡಿನಲ್ಲಿ ಹಸೆಮಣೆ ಏರುವ ಮುನ್ನ ಯುವತಿಯೊಬ್ಬಳು ಮತ ಚಲಾಯಿಸಲು ಅಲಂಕಾರಗೊಂಡೆ ಮತಗಟ್ಟೆಗೆ…

23 hours ago