ಕ್ಯಾನ್ಸರ್ ಪೀಡಿತೆಗೆ ಸಹಾಯ ಹಸ್ತ ನೀಡಿ ರೋಗಿ ಹಾಗೂ ಮಕ್ಕಳ ಜೀವ ಉಳಿಸಿ
ಹೊಸನಗರ: ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲುಹಳ ಸೇತುವೆಯ ಪಕ್ಕದಲ್ಲಿ ವಾಸವಾಗಿರುವ ಮೂಕಾಂಬಿಕ ಎಂಬುವವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದು ಇವರಿಗೆ ಚಿಕಿತ್ಸೆಗಾಗಿ ಹೆಚ್ಚಿನ ಹಣದ ಅವಶ್ಯಕತೆಯಿದ್ದು ದಾನಿಗಳಿಂದ ಸಹಾಯ ಹಸ್ತಕ್ಕೆ ಕೈ ಚಾಚಿದ್ದಾರೆ.
ಇವರು ಕೂಲಿ ಕೆಲಸ ಮಾಡಿಕೊಂಡು ಸಮಾಜ ಕಲ್ಯಾಣ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಒಂದು ವರ್ಷ ಕೆಲಸ ನಿರ್ವಹಿಸಿದ್ದರು. ಇವರು ತುಂಬಾ ಬಡವರಾಗಿದ್ದು ಎರಡು ಹಣ್ಣು ಮಕ್ಕಳಿದ್ದು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಈಗಾಗಲೇ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಆಪರೇಷನ್ ಮಾಡಲಾಗಿದ್ದು ಪುನಃ ತುರ್ತು ಕಿಯೋತೆರಫಿ, ರೇಡಿಯೇಷನ್, ಮತ್ತು ಔಷಧಿಗಳಿಗಾಗಿ ಹಣದ ಅವಶ್ಯಕತೆಯಿದೆ ಮನೆಯಲ್ಲಿ ದುಡಿಯುವವರು ಯಾರು ಇಲ್ಲ ದಾನಿಗಳು ಸಹಾಯ ಹಸ್ತ ನೀಡಿದರೆ ನಾನು ಮತ್ತು ನನ್ನ ಮಕ್ಕಳು ಬದುಕುತ್ತೇವೆ ಇಲ್ಲವಾದರೆ ಸಾವು ಒಂದೇ ನನಗೆ ದಾರಿಯಾಗಿದೆ ಎಂದಿದ್ದಾರೆ.
ಧನ ಸಹಾಯ ಮಾಡುವವರು ಫೋನ್ ನಂಬರ್ 9740190188 ಬ್ಯಾಂಕ್ ಖಾತೆ ನಂಬರ್ 0465101018462 ಕೆನರಾ ಬ್ಯಾಂಕ್ ಈ ಖಾತೆಗೆ ಸಹಾಯ ಹಸ್ತ ನೀಡಬಹುದು.