ರಿಪ್ಪನ್ಪೇಟೆ: ದೇಶದ ಗಡಿ ಪ್ರದೇಶದ ರಕ್ಷಣೆಗಾಗಿ ಸೈನಿಕ ಸೇವೆಗೆ ಕಳೆದ 40 ವರ್ಷಗಳ ಕಾಲ ತೊಡಗಿಕೊಂಡು ನಿವೃತ್ತಿ ಹೊಂದಿ ಊರಿಗೆ ಮರಳಿದ ಕಲ್ಲೂರು ಬೂದ್ಯಪ್ಪಗೌಡ ಇವರನ್ನು ಕುಟುಂಬಸ್ಥರು ಹಾಗೂ ಕಲ್ಲೂರು ಗ್ರಾಮಸ್ಥರು, ಒಕ್ಕಲಿಗ ಸಮಾಜದವರು ರಿಪ್ಪನ್ಪೇಟೆಯ ವಿನಾಯಕ ದೇವಸ್ಥಾನದ ಬಳಿ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆಯ ಮೂಲಕ ವಿನಾಯಕ ವೃತ್ತದ ಬಳಿ ಪಟಾಕಿ ಸಿಡಿಸಿ ಭವ್ಯ ಸ್ವಾಗತ ಮಾಡುವುದರೊಂದಿಗೆ ನಿವೃತ್ತಿ ಜೀವನಕ್ಕೆ ಶುಭಕೋರಿದರು.
ಕುಗ್ರಾಮವಾದ ಕಲ್ಲೂರು ಗ್ರಾಮದ ಯುವಕ ಸೈನಿಕ ಸೇವೆಗಾಗಿ ಕಳೆದ 40 ವರ್ಷದ ಹಿಂದೆ ಸೇರಿ ಈಗ ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳುತ್ತಿದ್ದಾರೆ. ಇವರ ಸೈನಿಕ ಸೇವೆಯೊಂದಿಗೆ ಗಡಿಪ್ರದೇಶದಲ್ಲಿನ ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿ ನಿವೃತ್ತರಾಗಿ ಊರಿಗೆ ಮರಳುತ್ತಿರುವ ಬೂದ್ಯಪ್ಪಗೌಡ ಕಲ್ಲೂರು ಇವರಿಗೆ ಭಗವಂತ ಸುಖ, ಶಾಂತಿ, ಸಂವೃದ್ಧಿ, ಆರೋಗ್ಯ ಭಾಗ್ಯ ಕರುಣಿಸಲೇದು ಪ್ರಾರ್ಥಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಲ್ಲೂರು ನಿವೃತ್ತ ಸೈನಿಕ ಬೂದ್ಯಪ್ಪಗೌಡ ಕುಟುಂಬದವರು ಮತ್ತು ಒಕ್ಕಲಿಗ ಸಮಾಜದ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವಾಸಪ್ಪಗೌಡ, ಸಮಾಜದ ಮುಖಂಡ ರವಿ ಕೆರೆಹಳ್ಳಿ, ಎಂ.ಬಿ.ಮಂಜುನಾಥ, ಕೆರೆಹಳ್ಳಿ ಮುರುಳಿ, ಪರಮೇಶ ತಳಲೆ, ಹಾಲಪ್ಪಗೌಡ ಬೈರಾಪುರ, ಪ್ರಮೀಣ ಎಲ್.ಗೌಡರು, ಟೇಕೇಶಪ್ಪಗೌಡ ಬೈರಾಪುರ, ವೆಂಕಟೇಶ ಹಾಲುಗುಡ್ಡೆ, ಕಲ್ಲೂರಿನ ಸಹಕಾರಿ ದುರೀಣ ಕೆ.ಎಸ್.ಲೋಕಪ್ಪಗೌಡ, ಕಾಂಗ್ರೆಸ್ ಮಖಂಡ ಕಲ್ಲೂರು ತೇಜಮೂರ್ತಿ, ನಿವೃತ್ತ ಸೈನಿಕ ಶಿವಪ್ಪ ರಾವಣಕಟ್ಟೆ, ಇನ್ನಿತರ ಒಕ್ಕಲಿಗ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಚಿಕ್ಕಮಗಳೂರು: ದತ್ತಪೀಠದಿಂದ ಮಾಣಿಕ್ಯಾಧಾರಕ್ಕೆ ತೆರಳುತ್ತಿದ ಪ್ರವಾಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿ ಬಿದ್ದು, ಆರು…
ಎನ್.ಆರ್.ಪುರ : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಮೇ ತಿಂಗಳ ಪ್ರವಾಸ…
ತೀರ್ಥಹಳ್ಳಿ : ಏ. 28 ಭಾನುವಾರ ಗುರುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.
ಹೊಸನಗರ: ಭಾರತ ದೇಶದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಬೇಕು. ಮತದಾನ ಮಾಡುವುದು ಪ್ರತಿಯೊಬ್ಬ ದೇಶದ ಪ್ರಜೆಯ…
ಹೊಸನಗರ: ತಾಲ್ಲೂಕಿನ ನಗರ ಹೋಬಳಿಯ ಯಡೂರು ಗ್ರಾಪಂ ವ್ಯಾಪ್ತಿಯ ಕವರಿಯ ಮಾಗಲು ಗ್ರಾಮ ಮೂಲಭೂತ ಸೌಲಭ್ಯದಿಂಸಸಹ ದ ವಂಚಿತವಾಗಿದೆ ಎಂದು…
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.75.02 ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ…