Categories: Hosanagara News

ಮೂಲಭೂತ ಸೌಲಭ್ಯದಿಂದ ವಂಚಿತರಾದ ಹೊಸನಗರದ ಅಗ್ನಿಶಾಮಕ ದಳ ಸಿಬ್ಬಂದಿಗಳು !

ಹೊಸನಗರ : ಪಟ್ಟಣದ ಅಗ್ನಿಶಾಮಕ ದಳ ಘಟಕ ಪ್ರಾರಂಭವಾಗಿ ದಶಕ ಕಳೆದರೂ ಇಲ್ಲಿರುವ 24 ಸಿಬ್ಬಂದಿಗಳಿಗೆ ಕೇವಲ ಎರಡು ವಸತಿಗೃಹ ಮಾತ್ರವಿದ್ದು ಉಳಿದ ಸಿಬ್ಬಂದಿಗಳಿಗೆ ಅಪಾರ್ಟ್‌ಮೆಂಟ್ ಕಟ್ಟಲು ಜಾಗದ ಸೌಲಭ್ಯವಿದ್ದರೂ ವಸತಿಗೃಹಗಳ ಕೊರತೆ ಇದೆ.

ಹೊಸನಗರ ಮಲೆನಾಡಿನ ಹೃದಯ ಭಾಗದಲ್ಲಿದ್ದು ರಾಜ್ಯದಲ್ಲಿ ಅತಿ ವಿಸ್ತಿರ್ಣ ಹೊಂದಿರುವ ತಾಲೂಕು ಆಗಿದ್ದು ಜಾನುವಾರು ಕೊಟ್ಟಿಗೆ, ತೋಟ, ಮನೆಗಳಿಗೆ ಪದೇ ಪದೇ ಅಗ್ನಿ ಅನಾಹುತಗಳು ಸಂಭವಿಸುತ್ತಿದ್ದು ಇಲ್ಲಿನ ಸಿಬ್ಬಂದಿಗಳ ತಂಡ ತಕ್ಷಣ ಸ್ಪಂದಿಸಿ ಹೆಚ್ಚಿಗೆ ಅನುಭವಿಸಬಹುದಾದ ದುರಂತಗಳನ್ನು ತಪ್ಪಿಸಿರುವುದು ದಾಖಲಾಗಿದೆ.

ಅಗ್ನಿಶಾಮಕ ದಳದ ಘಟಕಕ್ಕೆ ನೀರಿನ ಸೌಲಭ್ಯ ಅತೀ ಮುಖ್ಯವಾಗಿದ್ದ ನೀರಿನ ಸಂಗ್ರಹಕ್ಕೆ ಬೋರ್ವೆಲ್ ನ ಅಗತ್ಯತೆ ಇದ್ದು ಶಾಸಕರು ಈ ನಿಟ್ಟಿನಲ್ಲಿ ತತಕ್ಷಣ ಸ್ಪಂದಿಸಿ ತುರ್ತು ಪರಿಹಾರ ಕಲ್ಪಿಸುವಂತೆ ನಾಗರಿಕರು ಆಗ್ರಪಡಿಸಿದ್ದಾರೆ.

ಹೊಸನಗರ ಘಟಕಕ್ಕೆ ಕೇವಲ ಒಂದು ವಾಹನ ಮಾತ್ರವಿದ್ದು ಇನ್ನೊಂದು ವಾಹನದ ಅಗತ್ಯವಿದ್ದು ಶಾಸಕರು ಅಗ್ನಿಶಾಮಕ ದಳದ ಘಟಕಕ್ಕೆ ಭೇಟಿ ನೀಡಿ ಘಟಕಕ್ಕೆ ಅವಶ್ಯಕತೆ ಇರುವ ಬೋರ್ವೆಲ್, ರಸ್ತೆ, ಆವರಣ ಗೋಡೆ, ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಶಿಸಿದ್ದಾರೆ.

ಮುಖ್ಯ ರಸ್ತೆಯಿಂದ ಅಗ್ನಿಶಾಮಕ ದಳದ ಕಚೇರಿಗೆ ತೆರಳುವ ದಾರಿಗೆ ರಸ್ತೆ ಇಲ್ಲವಾಗಿದ್ದು ಮಳೆಗಾಲವಾಗಿದ್ದರಿಂದ ಕೆಸರಿನಿಂದ ಕೂಡಿದ ದಾರಿಯಲ್ಲಿ ಕಚೇರಿಗೆ ತೆರಳಬೇಕಾದ ಪ್ರಸಂಗ ಅನಿವಾರ್ಯವಾಗಿದ್ದು ತುರ್ತಾಗಿ ರಸ್ತೆ ನಿರ್ಮಾಣವು ಅತ್ಯಗತ್ಯವಾಗಿದೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

4 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

4 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

4 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

5 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

5 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

5 days ago