ರಿಪ್ಪನ್ಪೇಟೆ : ಪ್ರಸ್ತುತ ವರ್ಷದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬೆಳೆಯ ಉತ್ಪಾದನೆ ಕಡಿಮೆಯಾಗಿರುವುದರ ಜೊತೆಗೆ ಜಾನುವಾರುಗಳಿಗೆ ಮೇವಿನ ಅಭಾವವಾಗಿದೆ. ಇಂತಹ ಸಂದರ್ಭದಲ್ಲಿ ಅಜೋಲ್ಲಾ ಜಾನುವಾರುಗಳಿಗೆ ಅಕ್ಷಯಪಾತ್ರೆಯಾಗಬಲ್ಲದು ಎಂದು ಡಾ.ನಿಂಗರಾಜು ಹೇಳಿದರು.
ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಕೃಷಿ ವಿವಿಯ ಗಂಧದ ಗುಡಿ ತಂಡದವರು ಕೋಡೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಅವರು, ಮೇವಿಗಿಂತ ಅಜೋಲಾ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿದ್ದು ಪ್ರೋಟೀನ್ ಹೇರಳವಾಗಿದ್ದು ಜಾನುವಾರುಗಳಿಗೆ ಉತ್ತಮ ಆಹಾರವಾಗಿದೆ. ಚಿಕ್ಕ ಎಲೆ, ತೆಳುವಾದ ಬೇರುಗಳನ್ನೊಳಗೊಂಡ ಅಜೋಲಾ ನೀರಿನಲ್ಲಿ ತೇಲುತ್ತಾ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸುವುದರಿಂದ ಭತ್ತದ ಗದ್ದೆಯಲ್ಲಿ ಗೊಬ್ಬರವಾಗಿ ಬೆಳೆಯಬಹುದು ಎಂದರು.
2.25 ಮೀ ಉದ್ದ , 1.5 ಮೀ ಅಗಲದ ಗುಂಡಿಯನ್ನು ತೆಗೆದು, ನೀರು, ಸ್ವಲ್ಪ ಪ್ರಮಾಣದ ಸಗಣಿ ಖನಿಜಯುತ ಮಣ್ಣನ್ನು ಹಾಕಿ ಅಜೋಲಾ ಕಲ್ಚರ್ ಗುಂಡಿಯಲ್ಲಿ ಬಿಟ್ಟು ರೈತರಿಗೆ ಪ್ರಾಯೋಗಿಕವಾಗಿ ತೋರಿಸಿದರು.
ಅಜೋಲಾವನ್ನು ಶುದ್ಧವಾಗಿ ತೊಳೆದು ಜಾನುವಾರುಗಳಿಗೆ ಪೂರೈಸಬೇಕು. ಮೇವು ಹಾಗೂ ಹಿಂಡಿಯ ಜೊತೆಗೆ ಮಿಶ್ರಣ ಮಾಡಿ ಕೊಟ್ಟರೆ, ಅಜೋಲಾ ತಿನ್ನುವ ಅಭ್ಯಾಸವಾಗುತ್ತದೆ. ಕೋಳಿ, ಕುರಿ, ಆಡು, ಮೊಲ, ಮೀನು ಮತ್ತು ಹಂದಿಗಳಿಗೂ ಅಜೋಲಾವನ್ನು ಆಹಾರವಾಗಿ ಕೊಡಬಹುದು ಎಂದು ಸಂಪನ್ಮೂಲ ವ್ಯಕ್ತಿ ಡಾ.ದಿವ್ಯ ಹೇಳಿದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…