ಸಂಶೋಧನೆ ಮತ್ತು ವಿಸ್ತರಣೆಗೆ ಗ್ರಾಮೀಣ ಕೃಷಿ ಕಾರ್ಯಾನುಭವ ದಿಕ್ಸೂಚಿ ; ಕೃಷಿ ವಿವಿ ಕುಲಪತಿ ಡಾ.ಆರ್.ಸಿ. ಜಗದೀಶ್ ಅಭಿಮತ

ರಿಪ್ಪನ್‌ಪೇಟೆ : ಗ್ರಾಮೀಣ ಕೃಷಿ ಕಾರ್ಯಾನುಭವದಡಿಯಲ್ಲಿ ವಿದ್ಯಾರ್ಥಿಗಳು ರೈತರ ಕೃಷಿಯೊಂದಿಗಿನ ಅನುಭವವನ್ನು, ಸಲಹೆಗಳನ್ನು ಪಡೆಯುವುದರ ಜೊತೆಗೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದು ವರದಿ ಮಾಡುವುದರಿಂದ ಸಮಸ್ಯೆಯ ಮೇಲೆ ಸಂಶೋಧನೆ ನಡೆಸಿ ರೈತರಿಗೆ ಪರಿಹಾರೋಪಾಯಗಳನ್ನು ನೀಡಬಹುದೆಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಹೇಳಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ‘ಗಂಧದ ಗುಡಿ’ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಸಿದ್ಧಪಡಿಸಿದ ‘ಮಾಹಿತಿ ಕೇಂದ್ರ’ವನ್ನು ಕೋಡೂರಿನಲ್ಲಿ ಉದ್ಘಾಟಿಸಿ ಮಾತನಾಡಿದರು.

ಕೃಷಿ ವಿದ್ಯಾರ್ಥಿಗಳು ರೈತರಲ್ಲಿರುವ ಕೃಷಿಯ ಆಳವಾದ ಜ್ಞಾನವನ್ನು ಪಡೆಯಬೇಕು. ರೈತರು ಅನುಸರಿಸುವ ಬೇಸಾಯ ಕ್ರಮಗಳ ಬಗ್ಗೆ ತಿಳಿಯಬೇಕಿದೆ. ಕೃಷಿ ಗ್ರಾಮೀಣ ಕಾರ್ಯಾನಭವ ವಿದ್ಯಾರ್ಥಿಗಳಿಗೆ ಸಮಾಜದ ವ್ಯವಸ್ಥೆಯ ಬಗ್ಗೆ ತಿಳಿಸಿ, ನಾಯಕತ್ವದ ಗುಣಗಳನ್ನು ಕಲಿಸುವುದರಿಂದ, ಒಬ್ಬ ಉತ್ತಮ ನಾಗರಿಕನಾಗಲು ಸಹಾಯ ಮಾಡುತ್ತದೆ. ಕೃಷಿ ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಹೊಸ ತಳಿಗಳನ್ನು ತರಬೇಕು ಹಾಗೂ ಉದ್ಯಮದಲ್ಲಿ ಸ್ಟಾರ್ಟ್ಅಪ್ ಮಾಡಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಕೃಷಿಯಲ್ಲಿನ ಸಮಸ್ಯೆಗಳಾದ, ಮಣ್ಣಿನ ಸಮಸ್ಯೆ, ರೋಗ ಮತ್ತು ಕೀಟಗಳ ಬಾಧೆ, ಪೋಷಕಾಂಶಗಳ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಪಟ್ಟಿ ಮಾಡಿ, ಪರಿಶೋಧಸಿ, ಪರಿಹಾರೋಪಾಯಗಳನ್ನು ಒಂದೆಡೆ ರೈತರಿಗೆ ದೊರೆಯುವಂತೆ ಮಾಡುವುದು ಮಾಹಿತಿ ಕೇಂದ್ರದ ಉದ್ದೇಶವಾಗಿದೆ.

ಮಾಹಿತಿ ಕೇಂದ್ರವನ್ನು 3 ವಿಭಾಗಗಳಾಗಿ ವಿಂಗಡಿಸಿಲಾಗಿತ್ತು. ಸಿರಿಧಾನ್ಯಗಳ ಸಿರಿ ಸಂಪತ್ತು ವಿಭಾಗದಲ್ಲಿ ಸಜ್ಜೆ, ನವಣೆ, ಸಾಮೆ, ಕೊರಲೆ, ಹಾರಕ, ಜೋಳ, ನವಣೆ, ಊದಲು ಹಾಗೂ ರಾಗಿಯ ಬೆಳೆಯ ಕಾಲಾವಧಿ, ಬಿತ್ತನೆ ಬೀಜದ ಪ್ರಮಾಣ, ಬಿತ್ತನೆಯ ಕಾಲ, ತಳಿಗಳು ಹಾಗೂ ಅದರ ಇಳುವರಿಯ ಬಗ್ಗೆ ತಿಳಿಸಲಾಗಿತ್ತು. ವಿವಿಧ ಸಿರಿಧಾನ್ಯಗಳಿಂದ ತಯಾರಿಸಿದ ರೈತ ಭಾವಚಿತ್ರದ ಕಲಾಕೃತಿಯು ಗಮನಾರ್ಹವಾಗಿತ್ತು.

ಸಸ್ಯ ಆರೋಗ್ಯ ಕೇಂದ್ರ ವಿಭಾಗದಲ್ಲಿ ಅಡಿಕೆಯ ಮುಖ್ಯ ರೋಗಗಳಾದ ಎಲೆಚುಕ್ಕಿ ರೋಗ, ಕೋಳೆರೋಗ, ಅಣಬೆ ರೋಗಗಳ ಲಕ್ಷಣಗಳನ್ನು ರೋಗ ಬಂದಿರುವ ಗಿಡದ ಭಾಗಗಳನ್ನು ಗೋಡೆಗೆ ಅಂಟಿಸಿ ತೋರಿಸುವುದರ ಜೊತೆಗೆ ನಿರ್ವಹಣೆಯ ಮಾಹಿತಿಯನ್ನು ಬರೆಯಲಾಗಿತ್ತು. ಅಡಿಕೆಯಲ್ಲಿ ಇರುವ ಬೇರುಹುಳು, ಜೇಡನುಸಿ, ಸುಳಿ ತಿಗಣೆ ಹುಳುವಿನಿಂದ ಅಡಿಕೆಯಲ್ಲಿ ಕಾಣುವ ಲಕ್ಷಣಗಳು ಹಾಗೂ ನಿರ್ವಹಣೆಯ ಬಗ್ಗೆ ತಿಳಿಸಲಾಗಿತ್ತು. ಬೇರುಹುಳುವಿನ ಜೀವನಚಕ್ರ ಗೋಡೆಯ ಮೇಲೆ ಚಿತ್ರಿಸಿರುವುದು ಗಮನಾರ್ಹವಾಗಿತ್ತು.

ಇದೇ ರೀತಿಯಲ್ಲಿ ಭತ್ತ, ಕಾಳುಮೆಣಸಿನಲ್ಲಿ ಕಂಡುಬರುವ ರೋಗ ಹಾಗೂ ಕೀಟಭಾದೆಯ ಲಕ್ಷಣಗಳು ಹಾಗೂ ಸಮಗ್ರ ನಿರ್ವಹಣೆಯ ಮಾಹಿತಿಯನ್ನು ಬಿಂಬಿಸಲಾಗಿತ್ತು. ರೋಗ, ಕೀಟಬಾಧೆಯ ಕುರಿತು ಕೃಷಿ ವಿವಿಯು ಬಿಡುಗಡೆ ಮಾಡುವ ಭಿತ್ತಿಪತ್ರಗಳನ್ನು ಇಡುವುದರ ಜೊತೆಗೆ ರೋಗ ಹಾಗೂ ಕೀಟ ನಿಯಂತ್ರಣಕ್ಕೆ ಬಳಸುವ ಸೂಕ್ತ ರಾಸಾಯನಿಕಗಳನ್ನು ಇಡಲಾಗಿತ್ತು.

ಸಮಗ್ರ ಕೃಷಿ ವಿಭಾಗದಲ್ಲಿ ಹೈನುಗಾರಿಕೆಯ ನಕಾಶೆಯನ್ನು ಬಿಂಬಿಸಿ, ಸೈಲೇಜ್ ತಯಾರಿಕೆಯ ವಿಧಾನ, ಹಸು ಹಾಗೂ ಎಮ್ಮೆಯ ವಿವಿಧ ತಳಿಗಳು ಹಾಗೂ ಅವುಗಳಲ್ಲಿ ಕಂಡುಬರುವ ರೋಗಗಳು, ಲಸಿಕೆ ಹಾಗೂ ಸ್ವಚ್ಛ ಹಾಲಿನ ಉತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಲಾಯಿತು.

ಮುಖ್ಯ ಬೆಳೆಗಳಾದ ಅಡಿಕೆ, ಭತ್ತ ಹಾಗೂ ಕಾಳುಮೆಣಸಿನ ಬೇಸಾಯ ಕ್ರಮಗಳು, ಮಣ್ಣಿನ ಪದರು ತೋರಿಸುವ ಮಾದರಿ, ಕೊಳವೆಬಾವಿ ಮರುಪೂರಣ, ಮರಗಳ ಮಹತ್ವ, ಯಾಂತ್ರೀಕರಣದ ವಿಸ್ತಾರ, ಜೈವಿಕ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರ, ಬೀಜದ ವರ್ಗಳು, ತುಡುವೆ ಜೇನಿನ ಮಹತ್ವ ಹಾಗೂ ಜೇನು ಸಾಕಾಣಿಕೆ ಮಾಡುವ ವಿಧಾನ, ಅಣಬೆ ಕೃಷಿ ಕುರಿತು ರೈತರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಚಿತ್ರಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕೃಷಿ ವಿವಿಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕೃಷಿ ಅಧಿಕಾರಿಗಳು, ಕೋಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

21 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

1 day ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

1 day ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

1 day ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

1 day ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

1 day ago