Categories: Hosanagara News

ಸೌಹಾರ್ದ ಎಂದರೆ ಸದಸ್ಯರ ನಡುವಿನ ಹೊಂದಾಣಿಕೆ ಎಂದರ್ಥ ; ರಘುಪತಿ


ಹೊಸನಗರ: ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯರ ನಿರ್ದೆಶಕರ ಹೊಂದಾಣಿಕೆ ಬಹು ಮುಖ್ಯ ಹೊಂದಾಣಿಕೆ ಇಲ್ಲದಿದ್ದರೇ ಯಾವುದೇ ಸಹಕಾರಿ ಸಂಸ್ಥೆಗಳು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಸೌಹಾರ್ಧ ಎಂದರೆ ಹೊಂದಾಣಿಕೆ ಎಂದರ್ಥ ನೀಡುತ್ತದೆ ಎಂದು ಸೊರಬ ಡಿ.ಸಿ.ಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರಾದ ರಘುಪತಿಯವರು ಹೇಳಿದರು.


ಹೊಸನಗರದ ಆರ್ಯಈಡಿಗರ ಸಭಾಭವನದಲ್ಲಿ ಶೀ ಜೇನುಕಲ್ಲಮ್ಮ ಸೌರ್ಹಾದ ಸಹಕಾರಿ ಸಂಘದ ಪ್ರಥಮ ವರ್ಷದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಅಧಿಕಾರಿಗಳು ನೊಂದಾವಣೆ ಅಧಿಕಾರವನ್ನು ಮಾತ್ರ ಇಟ್ಟುಕೊಂಡಿದ್ದು ಸಂಸ್ಥೆಯ ಪೂರ್ಣ ಪ್ರಮಾಣದ ಅಧಿಕಾರವನ್ನು ಸಹಕಾರಿ ಸಂಸ್ಥೆಯ ನಿರ್ದೆಶಕರುಗಳಿಗೆ ಸದಸ್ಯರಿಗೆ ನೀಡಿದೆ ಆದರೆ ಅಧಿಕಾರಿಗಳು ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೇ ಸದಸ್ಯ-ಸದಸ್ಯರ ಮಧ್ಯೆ ದ್ವಂದ್ವ ನಿಲುವು ಮಾಡಿಕೊಳ್ಳದೇ ಸಂಸ್ಥೆಯ ಜಾವಾಬ್ದಾರಿಯನ್ನು ಸಂಘದ ನಿರ್ದೆಶಕರು ಹಂಚಿಕೊಂಡಾಗ ಮಾತ್ರ ಯಾವುದೇ ಸಂಸ್ಥೆ ಬೆಳೆಯಲು ಬೆಳೆಸಲು ಸಾಧ್ಯ ಎಂದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಿ.ಜಿ.ಸತ್ಯನಾರಾಯಣರವರು ವಹಿಸಿ ಮಾತನಾಡಿ ನಮ್ಮ ಪ್ರಾರಂಭವಾಗಿ ಕೇವಲ ಒಂದು ವರ್ಷವಾಗಿದೆ ನಮ್ಮ ಸಂಸ್ಥೆ ಕೃಷಿಕರಿಗೆ ಬಡವರಿಗೆ ಆರ್ಥಿಕವಾಗಿ ಹಿಂದಳಿದವರಿಗೆ ಸಾಲ ಸೌಲಭ್ಯವನ್ನು ನೀಡುವ ಉದ್ಧೇಶದಿಂದ ಈ ಸಂಘ ಸ್ತಾಪಿಸಲಾಗಿದೆ 35ಲಕ್ಷದಲ್ಲಿ 50ಜನರಿಗೆ ಕೃಷಿ ಸಾಲ ಇತರೆ ಸಾಲ ನೀಡಿದ್ದೇವೆ ನಮ್ಮ ಸಂಘಕ್ಕೆ ಸದಸ್ಯರನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು ಮುಂದಿನ ದಿನದಲ್ಲಿ 1000 ಸದಸ್ಯರನ್ನು ಹಾಗೂ 1 ಕೋಟಿ ವ್ಯವಹಾರ ಮಾಡುವ ಗುರಿಯನ್ನು ಹೊಂದಿದ್ದೇವೆ ಎಲ್ಲರೂ ಸಹಕಾರ ನೀಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.


ಅಧ್ಯಕ್ಷರಾದ ಬಿ.ಜಿ.ಸತ್ಯನಾರಾಯಣ, ಉಪಾಧ್ಯಕ್ಷೆ ಪೂರ್ಣಿಮಾ, ಟಿ.ಎಂ.ದಿನೇಶ, ಧನಂಜಯ ಎಂ.ವಿ, ಗಂಗಾ ದೇವರಾಜ್, ನಾಗೇಶ ಹೆಚ್.ಎನ್, ನಾಗಪ್ಪ ಎಸ್.ಕೆ, ರಮೇಶ್ ನೇರಲೆ, ಶ್ರೀಪತಿ ಟಿ.ಎನ್, ತಿಮ್ಮಪ್ಪ ಪಿ, ಯೋಗೇಂದ್ರ, ಡಿಸಿಸಿ ಬ್ಯಾಂಕ್ ವ್ಯವಸ್ತಾಪಕರಾದ ಹಾಲಪ್ಪ, ಮಂಡಾನಿ ಮೋಹನಬ, ಸ್ವಾಮಿ, ಎರಗಿ ಉಮೇಶ್, ಲೇಖನಮೂರ್ತಿ ಇನ್ನೂ ಮುಂತಾದ ಸದಸ್ಯರು ಉಪಸ್ಥಿತರಿದ್ದರು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

4 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

4 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

4 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

4 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

4 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

4 days ago