ಹುಗುಡಿಯಲ್ಲಿ ಗ್ರಾಮ ದೇವತೆಗಳ ನೋನಿ ಹಬ್ಬ

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಗುಡಿಯಲ್ಲಿ ನರಕ ಚತುರ್ದಶಿಯ ದಿನವಾದ ಭಾನುವಾರ ನೋನಿ ಹಬ್ಬವನ್ನು ವಿಶಿಷ್ಟವಾಗಿ ಶ್ರದ್ದಾಭಕ್ತಿಯೊಂದಿಗೆ ಗ್ರಾಮದೇವತೆಗಳ ಹರಕೆ ಪೂಜೆ ಸುಸಂಪನ್ನಗೊಂಡಿತು.


ಹಳ್ಳಿಯ ಪ್ರದೇಶದಲ್ಲಿ ದೀಪಾವಳಿಯ ಹಬ್ಬದಲ್ಲಿ ಹೆರಿಗೆಯಾದರೆ, ಆಕಸ್ಮಿಕ ಸಾವಾದರೆ ಅಥವಾ ಋತುಮತಿಯಾದರೆ ಆ ವರ್ಷ ನೋನಿ ಹಬ್ಬ ಕೆಟ್ಟಿತು ಎಂಬ ಪುರಾತನ ಕಾಲದಿಂದಲೂ ನಡೆಸಿಕೊಂಡ ಬಂದಂತಹ ಪದ್ದತಿಯಾಗಿದ್ದು ಈ ವರ್ಷ ದೀಪಾವಳಿಯಲ್ಲಿ ಅಂತಹ ಯಾವುದೇ ಘಟನೆಗಳು ಸಂಭವಿಸದೇ ನಿರ್ವಿಘ್ನವಾಗಿ ಹುಗುಡಿ ಗ್ರಾಮ ದೇವತೆಗಳ ನೋನಿ ಹಬ್ಬವು ಸುಸಂಪನ್ನಗೊಂಡಿದೆ ಎಂದು ಹಿರಿಯಜ್ಜ ಬೀಷ್ಠನಾಯ್ಕ್ ಮತ್ತು ಯಲ್ಲಪ್ಪಗೌಡ ಚಂದ್ರಕಾಂತಗೌಡ ವಿವರಿಸಿದರು.

ಲಿಂಗಾಯಿತ ಮತ್ತು ಈಡಿಗ ಒಕ್ಕಲಿಗ ಸಮುದಾಯದವರು ಸೇರದಂತೆ ಇತರ ಜಾತಿಯ ಕುಟುಂಬ ವರ್ಗ ಮನೆಗೆ ಒಬ್ಬರಂತೆ ಗ್ರಾಮ ದೇವರ ಬನಕ್ಕೆ ತೆರಳಿ ಸ್ವಚ್ಚಗೊಳಿಸಿ ಬರುವುದು ಇಲ್ಲಿನ ವಿಶೇಷ ಮರು ದಿನ ಅಂದರೆ ನರಕ ಚತುರ್ದಶಿಯಂದು ಗ್ರಾಮ ದೇವರಿಗೆ ಹಣ್ಣು-ಕಾಯಿ, ಹೂವೊಂದಿಗೆ ಕೆಲವರು ಕೋಳಿ, ಕುರಿಯ ಬಲಿಯನ್ನು ನೀಡಿ ದೇವತೆಯಲ್ಲಿ ಹರಕೆ ಸಮರ್ಪಿಸಿ ಮುಂದಿನ ಬೆಳೆಗೆ ರೋಗ ರುಜಿನೆ ಪ್ರಾಣಿ ಪಕ್ಷಿಗಳಿಂದ ಬೆಳೆ ರಕ್ಷಣೆ ಮಾಡುವಂತೆ ದೇವತೆಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ವಿಶೇಷವಾಗಿದೆ.

ಈ ನೋನಿ ಆಚರಣೆಯಲ್ಲಿ ಡಾ.ಶಶಿಕಾಂತ್ ಹುಗುಡಿ, ಹೆಚ್.ವಿ.ರಾಜು ಹುಗುಡಿ, ಚಂದ್ರಶೇಖರಗೌಡ, ಯೋಗೇಂದ್ರ, ವೀರಭದ್ರಪ್ಪ, ನಾಗಾರ್ಜುನಪ್ಪಗೌಡ, ಚಂದ್ರಕಾಂತಗೌಡ ಸೇರಿದಂತೆ ಗ್ರಾಮದ ಮಹಿಳೆಯರು ದೇವತೆಗಳ ಬನಕ್ಕೆ ಬಂದಿದ್ದು ಪೂಜಾ ಕಾರ್ಯವನ್ನು ಪುರುಷ ವರ್ಗವೇ ಮಾಡಬೇಕು ಮಹಿಳೆಯರು ದೇವತೆಗಳ ಬನದ ಬಳಿ ನಿಂತು ವೀಕ್ಷಣೆ ಮಾಡುವುದು ಇಲ್ಲಿನ ಪದ್ದತಿ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

23 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

1 day ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

1 day ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

1 day ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

1 day ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago