Ripponpet | ಮನೆಮನೆಗೆ ಮಂತ್ರಾಕ್ಷತೆ ವಿತರಣೆ
ರಿಪ್ಪನ್ಪೇಟೆ: ಇಲ್ಲಿನ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದಿಂದ ಬಂದಿರುವ ಮಂತ್ರಾಕ್ಷತೆಯನ್ನು ಜಾತಿ ಭೇದವಿಲ್ಲದೇ ಮಕ್ಕಳು ಮಹಿಳೆಯರು ತಂಡೋಪತಂಡದಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯನ್ನು ತಲುಪಿಸಿದರು.
ಮುಖಂಡ ಆರ್.ಟಿ.ಗೋಪಾಲ ಮಾತನಾಡಿ, ಶ್ರೀರಾಮಜನ್ಮ ಭೂಮಿಯಲ್ಲಿ ನಾವೆಲ್ಲ ಇದ್ದೇವೆ. ಅಯೋಧ್ಯೆ ಎಂದರೆ ಶ್ರೀರಾಮ ಶ್ರೀರಾಮ ಎಂದರೆ ಭಾರತ ನಮ್ಮ ಕಣಕಣದಲ್ಲೂ ಹಿಂದೂ ಸಂಸ್ಕೃತಿಯುಳಿಸಿ ಬೆಳೆಸಲು ನಾವೆಲ್ಲರೂ ಕೈ ಜೋಡಿಸುವ ಮೂಲಕ ಜನವರಿ 22 ರಂದು ಶ್ರೀರಾಮದೇವರ ಆಶೀರ್ವಾದ ಪಡೆಯಲು ದೀಪಗಳನ್ನು ಬೆಳಗಿಸೋಣ. ಪ್ರಜ್ವಲ ಜ್ಯೋತಿಯ ಕಿರಣಗಳು ವಿಶ್ವದ ಭೂಪಟದಲ್ಲಿ ಭಾರತ ದೇಶ ರಾರಾಜಿಸುವಂತೆ ರಾಷ್ಟ್ರೀಯ ನಾಯಕರಿಗೆ ಶುಭಕೋರೋಣ ಎಂದರು.
ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ಪಕ್ಷದ ಮುಖಂಡರಾದ ನಾಗರತ್ನ ದೇವರಾಜ್, ಲೀಲಾಶಂಕರ್, ಕಗ್ಗಲಿ ಲಿಂಗಪ್ಪ, ಪದ್ಮಾಸುರೇಶ, ರೇಖಾರವಿ, ಮಂಜುಳಾ ಕೇತಾರ್ಜಿರಾವ್, ಗೀತಾ ಸುಂದರೇಶ್, ಸುಧೀಂದ್ರ ಪೂಜಾರಿ, ಸೀತಾ, ಶಿಲ್ಪ, ನಾಗರಾಜ್ ಪವಾರ್, ರಾಮಚಂದ್ರ, ಈಶ್ವರ, ದೀಪಾ ಸುಧೀರ್, ಮುರುಳಿ ಕೆರೆಹಳ್ಳಿ, ಲಕ್ಷ್ಮಿ ಶ್ರೀನಿವಾಸ್, ಹೆಚ್.ಎನ್.ಚೋಳರಾಜ್, ದೀಪು ಇನ್ನಿತರರು ಹಾಜರಿದ್ದರು.