ರಿಪ್ಪನ್ಪೇಟೆ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿಗೆ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷ
ಮಹಾಬಲೇಶ್ವರ ಹೆಗಡೆ ಅವರ ನೇತೃತ್ವದ ಎಲ್ಲಾ 17 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗದ 11 ಸ್ಥಾನಗಳಿಗೆ ಮಹಾಬಲೇಶ್ವರ ಹೆಗಡೆ, ತಿಮ್ಮಪ್ಪ ಎಂ.ಎಸ್., ಪುಟ್ಟಪ್ಪ ಕೆ.ವಿ., ಸತೀಶ ರಾಮಕೃಷ್ಣ ಹೆಗಡೆ, ಆನಂದ್ ಎಂ.ಸಿ., ಶ್ರೀಕಾಂತ್ ಎಸ್., ಕರಿಬಸಯ್ಯ ಕೆ.ಎಂ., ಆಂಜನೇಯ ಬಿ., ಬಾಲಚಂದ್ರ ಗಜಾನನ ಭಟ್ಟ, ಕೆರಿಯಪ್ಪ ಹೆಚ್., ಜಗದೀಶ್ ಎಸ್., ಇವರ ಆಯ್ಕೆ ನಡೆದಿದೆ.
ಪರಿಶಿಷ್ಟ ಜಾತಿ ಸ್ಥಾನದಿಂದ ಎಸ್.ವಿ. ವಿಜಯ.ಕುಮಾರ ಸ್ವಾಮಿ, ಪರಿಶಿಷ್ಟ ಪಂಗಡದಿಂದ ಜಿ.ಪಾಲಯ್ಯ, ಬಿಸಿಎಂ ಎ ವರ್ಗದಿಂದ ಅಲ್ತಾಫ್ಹುಸೇನ್ ಬೆನಕನಕೋಡ, ಬಿಸಿಎಂ ಬಿ ವರ್ಗದಿಂದ ಜಗದೀಶ್ ಕಾಗಿನೆಲ್ಲಿ, ಮಹಿಳಾ ಮೀಸಲು
ಸ್ಥಾನದಿಂದ ಲಲಿತಾ ಹೆಗಡೆ ಮತ್ತು ಹೆಚ್.ಜಿ. ಆಶಾ ಆಯ್ಕೆಯಾಗಿದ್ದಾರೆ.
ಈ ಸೌಹಾರ್ದ ಸಹಕಾರ ಮಂಡಳಿಗೆ ಆಗಸ್ಟ್ 13ರಂದು ಚುನಾವಣೆ ನಿಗಧಿಯಾಗಿತ್ತು. ನಾಮಪತ್ರ ಸಲ್ಲಿಕೆಗೆ ಶನಿವಾರ ಕೊನೆಯ ದಿನವಾಗಿದ್ದು 27 ಮಂದಿ ನಾಮಪತ್ರ
ಸಲ್ಲಿಸಿದ್ದರು. 10 ಮಂದಿ ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯು 17 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಎನ್.ಜಿ. ರುದ್ರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…
ರಿಪ್ಪನ್ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…
ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…
ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…
ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…
ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…