Categories: RipponpeteSagara News

ರಾಜ್ಯ ಹೆದ್ದಾರಿ ಮಧ್ಯದಲ್ಲಿ ಹೊಂಡ – ಗುಂಡಿ ; ಜೀವ ಭಯದಲ್ಲಿ ವಾಹನ ಸವಾರರು

ರಿಪ್ಪನ್‌ಪೇಟೆ: ಹೊಸನಗರ – ರಿಪ್ಪನ್‌ಪೇಟೆ ಸಂಪರ್ಕದ ರಾಜ್ಯ ಹೆದ್ದಾರಿ ಚಿಕ್ಕಜೇನಿ ಬಳಿಯ ಮೋರಿಯ ಮಧ್ಯದಲ್ಲಿ ಹೊಂಡ, ಗುಂಡಿ ಬಿದ್ದು ವಾಹನ ಸವಾರರು ಮತ್ತು ಬಸ್‌ ಪ್ರಯಾಣಿಕರು ಜೀವಭಯದಲ್ಲಿ ಸಂಚರಿಸುವಂತಾಗಿದೆ.

ಶಿವಮೊಗ್ಗ, ಕುಂದಾಪುರ, ಉಡುಪಿ, ಕೊಲ್ಲೂರು, ಸಿಗಂದೂರು, ಹೊಸನಗರ, ಮಾಸ್ತಿಕಟ್ಟೆ, ಚಕ್ರಾನಗರ ಸಂಪರ್ಕದ ಈ ಮುಖ್ಯ ರಸ್ತೆಯಲ್ಲಿ ಮೋರಿಯ ಮಧ್ಯದಲ್ಲಿ ಹೊಂಡು ಬಿದ್ದು ಸಾಕಷ್ಟು ದಿನಗಳು ಕಳೆದರೂ ಕೂಡಾ ಲೋಕೋಪಯೋಗಿ ಇಲಾಖೆಯವರು ಹೊಂಡ ಮುಚ್ಚದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಾದರೂ ಸರ್ಕಾರ ಮತ್ತು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಇತ್ತ ಗಮನಹರಿಸಿ ಹೊಂಡ ಮುಚ್ಚುವರೇ ಕಾದು ನೋಡಬೇಕಾಗಿದೆ.

ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳಿಲ್ಲದೇ ಗಿಂಡ-ಗಂಟಿಗಳಿಂದ ಮುಚ್ಚಿಕೊಂಡ ಸಾಗರ ಎ.ಆರ್.ಟಿ.ಓ ಕಛೇರಿ ಬಳಿಯಲ್ಲಿನ ಶೌಚಾಲಯ

ಸಾಗರ: ಸಾಗರದ ಸಾರಿಗೆ ಪ್ರಾದೇಶಿಕ ಕಛೇರಿಯ ಆವರಣದಲ್ಲಿರುವ ಶೌಚಾಯಲದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಮಹಿಳೆಯರು, ಪುರುಷರಿಗೆ ಬಯಲೇ ಶೌಚಾಲಯ ಗತಿಯಾಗಿದೆ.

ಸುಸಜ್ಜಿತ ಶೌಚಾಲಯ ಕಟ್ಟಡವಿದ್ದರೂ ಕೂಡಾ ಸರಿಯಾದ ನಿರ್ವಹಣೆಯಿಲ್ಲದೆ ಶೌಚಾಲಯದ ಒಳಗೆ ಸಂಪೂರ್ಣವಾಗಿ ಮದ್ಯದ ಬಾಟಲಿ ಮತ್ತು ಗುಟ್ಕಾ ಪ್ಯಾಕ್‌ಗಳಿಂದ ತುಂಬಿ ತುಳುಕುವಂತಾಗಿದ್ದು ಸ್ವಚ್ಚತೆಯಿಲ್ಲದೇ ಬಯಲು ಪ್ರದೇಶವನ್ನು ಅವಲಂಭಿಸುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಮಹಿಳೆಯರ ಸ್ಥಿತಿಯಂತೂ ಹೇಳಲಾಗದು
ನಿತ್ಯ ಈ ಕಛೇರಿಗೆ ಎಲ್.ಎಲ್.ಆರ್ ಮತ್ತು ಡಿ.ಎಲ್ ಹಾಗೂ ವಾಹನ ನೋಂದಣಿಗಾಗಿ ಮಹಿಳೆಯರು ಯುವತಿಯರು, ಯುವಕರು ಸಾರ್ವಜನಿಕರು ಸಹಸ್ರ ಸಂಖ್ಯೆಯಲ್ಲಿ ಬಂದು ಹೋಗುತ್ತಿದ್ದರೂ ಕೂಡಾ ಯಾವುದೇ ಸಮಸ್ಯೆಯಿಲ್ಲದರಂತೆ ಕಣ್ಣಿದ್ದು ಕುರುಡರಾಗಿ ಕಿವಿ ಇದ್ದು ಕಿವುಡರಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಾದೇಶೀಕ ಸಾರಿಗೆ ಕಛೇರಿಯ ಹಿಂಭಾಗದಲ್ಲಿ ಸುಸಜ್ಜಿತವಾಗಿ ನಿರ್ಮಿಲಾಗಿರುವ ಈ ಶೌಚಾಲಯಕ್ಕೆ ಹೋಗಿ ಬರುವುದೇ ಕಷ್ಟಕರವಾಗಿದೆ. ಗಿಡ ಗಂಟಿಗಳು ಮುಚ್ಚಿಕೊಂಡಿದ್ದು ಕಟ್ಟಡ ಕಾಣದದಂತಾಗಿದ್ದರೆ ಮಧುಮೇಹ ರೋಗದಿಂದ ನೆರಳುವವರು ಅನಾರೋಗ್ಯ ಪೀಡಿತರು ಹೀಗೆ ಮಹಿಳೆಯರು ಮೂತ್ರ ವಿಸರ್ಜನೆಗಾಗಿ ಶೌಚಾಲಯಕ್ಕೆ ಪರದಾಡುವಂತಾಗಿದೆ.

ಒಂದು ಕಡೆ ನೀರಿಲ್ಲದೇ ಇರುವುದು ಇನ್ನೊಂದು ಕಡೆಯಲ್ಲಿ ಸ್ವಚ್ಚತೆ ಮೇರಿಚಿಕೆಯಾಗಿದೆ ಅಲ್ಲದೆ ಒಂದೊಂದು ನಗದು ಕೌಂಟರ್ ಬಳಿಯಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದ್ದು ಆಕಸ್ಮಿಕವಾಗಿ ತಲೆ ತಿರುಗಿ ಬಿದ್ದರೆ ಕುಡಿಯಲು ನೀರು ಇಲ್ಲದೆ ಪರದಾಡಬೇಕಾಗಿದೆ ಹೆಸರಿಗೆ ಕುಡಿಯುವ ನೀರಿನ ಡ್ರಮ್ ಇಟ್ಟಿದ್ದಾರೆ ಆದರೆ ನೀರು ಮಾತ್ರ ಇಲ್ಲದೇ ಖಾಲಿ ಡ್ರಮ್ ನೋಡಿಕೊಂಡು ಅಲ್ಲಿಯೇ ಕುಳಿತು ದಣಿವಾರಿಸಿಕೊಂಡು ಬರಬೇಕಾಗಿದೆ ಇಷ್ಟಾದರೂ ಅಧಿಕಾರಿಗಳು ಮಾತ್ರ ನಮಗೂ ಹೊರಗಡೆಯಲ್ಲಿ ನಿಂತವರಿಗೂ ಏನಾಗುತ್ತಿದೆ ಎಂಬ ಅರಿವು ಇಲ್ಲದವರಂತೆ ಇರುವುದು ಸರ್ಕಾರಿ ಕಛೇರಿಯ ದುರಾವಸ್ಥೆಗೆ ಕಡಿವಾಣ ಹಾಕಲು ಇನ್ನಾದರೂ ಅಧಿಕಾರಿಗಳು ಕಣ್ಣು ತೆರೆಯುವರೆ ಕಾದು ನೋಡಬೇಕಾಗಿದೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

5 hours ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

9 hours ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

9 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

11 hours ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

12 hours ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

19 hours ago